09/06/2025 6:08 PM

Translate Language

Home » ಲೈವ್ ನ್ಯೂಸ್ » ಕೊಪ್ಪಳ ವಿಶ್ವವಿದ್ಯಾಲಯ್ ರಕ್ಷಣಾ ಸಮಿತಿ ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಪವನ್‌ಕುಮಾರ್‌, ಪ್ರತಿಭಟನೆ.!

ಕೊಪ್ಪಳ ವಿಶ್ವವಿದ್ಯಾಲಯ್ ರಕ್ಷಣಾ ಸಮಿತಿ ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಪವನ್‌ಕುಮಾರ್‌,  ಪ್ರತಿಭಟನೆ.!

Facebook
X
WhatsApp
Telegram

ಕೊಪ್ಪಳ.19.ಫೆ.25:-ಕೊಪ್ಪಳ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು, ಆರ್ಥಿಕ ಚೈತನ್ಯ ತುಂಬಿ ಬಲವರ್ಧನೆ ಮಾಡಬೇಕು ಎಂದು ವಿಶ್ವವಿದ್ಯಾಲಯ್ ವಿದ್ಯಾರ್ಥಿಗಳ ಒಕ್ಕೂಟ ಆಗ್ರಹಿಸಿದ್ದು, ಬುಧವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ಮೊದಲು ಗವಿಮಠದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರನ್ನು ಭೇಟಿಯಾಗಿ ‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಓದಿಗೆ ಕೊಪ್ಪಳ ವಿಶ್ವವಿದ್ಯಾಲಯ್ ಅನುಕೂಲವಾಗಿದೆ.

ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ ‘ನಿಮ್ಮ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ’ ಎಂದು ಹೇಳಿ ಅಲ್ಲಿಯೇ ಇದ್ದ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಕೊಪ್ಪಳ ವಿಶ್ವವಿದ್ಯಾಲಯ್ ಉಳಿವಿಗೆ ಕ್ರಮ ವಹಿಸುವಂತೆ ಹೇಳಿದರು. ಬಳಿಕ ವಿದ್ಯಾರ್ಥಿಗಳು ಶಾಸಕ ಹಿಟ್ನಾಳಗೂ ಮನವಿ ಸಲ್ಲಿಸಿ ‘ನಮ್ಮ ಸರ್ಕಾರ ಬಂದ ಹೊಸದರಲ್ಲಿಯೇ ವಿಶ್ವವಿದ್ಯಾಲಯ್ಗಗಳನ್ನು ಮುಚ್ಚಬೇಕು ಎನ್ನುವ ಚರ್ಚೆಯಾಗಿತ್ತು. ಒತ್ತಡ ಹೇರಿ ಉಳಿಸಿದ್ದೇನೆ. ಈಗಲೂ ಮುಂದುವರಿಸಲು ಕ್ರಮ ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ಬಳಿಕ ಕೊಪ್ಪಳ ವಿಶ್ವವಿದ್ಯಾಲಯ್ . ರಕ್ಷಣಾ ಸಮಿತಿ ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಪವನ್‌ಕುಮಾರ್‌, ಜುನಸಾಬ್‌ ವಡ್ಡಟ್ಟಿ, ಪದ್ಮಜಾ ನಾಗಲಾಪುರಮಠ, ತಿರುಪತಿ ಹಾಗೂ ಸೈಯದ್‌ ಕರಡಿಮನಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ಹೊಸದಾಗಿ ಆರಂಭವಾಗಿರುವ ನಮ್ಮ ವಿಶ್ವವಿದ್ಯಾಲಯ ಯಲ್ಲಿ ಸೌಲಭ್ಯಗಳು ಕೊರತೆಗಳಿದ್ದರೂ ಉನ್ನತ ಶಿಕ್ಷಣಕ್ಕೆ ಕೊರತೆಯಾಗಿಲ್ಲ. ಈಗ ಇಲ್ಲಿ ವಿಶ್ವವಿದ್ಯಾಲಯ ¹ಯನ್ನು ಬಂದ್ ಮಾಡಿದರೆ ಅನೇಕರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು’ ಎಂದರು.

‘ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತರಗತಿ ಬಹಿಷ್ಕರಿಸಿ ಹೋರಾಟ ಮಾಡುತ್ತಿದ್ದೇವೆ. ಎರಡನೇ ಹಂತದಲ್ಲಿ ಪದವಿ ಕಾಲೇಜುಗಳಿಗೆ ಹೋಗಿ ಅವರಲ್ಲಿ ಜಾಗೃತಿ ಮೂಡಿಸಲಾಗುವುದು. ಮುಂದಿನ ತಿಂಗಳು ವಿಶ್ವವಿದ್ಯಾಲಯ ಯಲ್ಲಿ ಪರೀಕ್ಷೆಯಲ್ಲಿ ನಡೆಯಲಿದ್ದು, ಅಷ್ಟರೊಳಗೆ ಸರ್ಕಾರ ವಿ.ವಿ. ಮುಚ್ಚುವುದಿಲ್ಲವೆಂದು ಲಿಖಿತವಾಗಿ ತಿಳಿಸಬೇಕು. ಇಲ್ಲವಾದರೆ ಪರೀಕ್ಷೆಯನ್ನೂ ಬಹಿಷ್ಕರಿಸಲಾಗುವುದು’ ಎಂದು ಹೇಳಿದರು.

‘ಈ ಭಾಗದ ಜನಧ್ವನಿ ಮುಚ್ಚಬೇಡಿ’

ಕುಕನೂರು: ‘ಕೊಪ್ಪಳ ಐತಿಹಾಸಿಕವಾಗಿ ತಿರುಳ್‌ಗನ್ನಡನಾಡು ಪರಂಪರೆಯ ನಾಡು ಆಗಿದ್ದು ಕಲ್ಯಾಣ ಕರ್ನಾಟಕದ ಹಿಂದುಳಿದ ಭಾಗದಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯ ಈ ಭಾಗದ ಜನರ ಧ್ವನಿಯಾಗಿದೆ.

ಯಾವುದೇ ಕಾರಣಕ್ಕೂ ಮುಚ್ಚಬಾರದು’ ಎಂದು ಬಳ್ಳಾರಿ ವಿಶ್ವವಿದ್ಯಾಲಯ ಸಿಂಡಿಕೇಟ್‌ನ ಮಾಜಿ ಸದಸ್ಯ ಕೆ.ಬಿ. ಬ್ಯಾಳಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಸರ್ಕಾರಕ್ಕೆ ಏನೇ ಸಮಸ್ಯೆ ಎದುರಾದರೂ ಮುಚ್ಚುವ ಕೆಲಸ ಮಾತ್ರ ಮಾಡಬಾರದು. ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿ ವಿಶ್ವವಿದ್ಯಾಲಯ್ ಯನ್ನು ಬಲವರ್ಧನೆ ಮಾಡಬೇಕು’ ಎಂದು ಕೋರಿದ್ದಾರೆ.

ಕಾಂಗ್ರೆಸ್‌ನಿಂದ ಶಿಕ್ಷಣ ವಿರೋಧಿ ನೀತಿ: ಪರಣ್ಣ

ಗಂಗಾವತಿ: ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುದಾನ ನೀಡಬೇಕಾದ ರಾಜ್ಯ ಕಾಂಗ್ರೆಸ್‌ ಸರ್ಕಾರ ಈಗ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

‘ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದುಳಿದ ಬಡ ಮಕ್ಕಳಿಗೆ ನಂಜುಂಡಪ್ಪ ವರದಿಯನ್ವಯ ಉನ್ನತ ಹಾಗೂ ಉತ್ತಮ ಶಿಕ್ಷಣ ಕೊಡಲು ಕೊಪ್ಪಳ ವಿಶ್ವವಿದ್ಯಾಲಯ . ಅನುಕೂಲವಾಗಿದೆ.

ಕಾಂಗ್ರೆಸ್ ಸರ್ಕಾರ ತಾಂತ್ರಿಕ ಕಾರಣಗಳು ನೀಡಿ ವಿಶ್ವವಿದ್ಯಾಲಯ . ಮುಚ್ಚಲು ಮುಂದಾಗಿದ್ದು ಸರಿಯಲ್ಲ. ಕೊಪ್ಪಳ ವಿಶ್ವವಿದ್ಯಾಲಯ್ ಉಳಿಸಬೇಕು ಇಲ್ಲವಾದರೆ ವಿದ್ಯಾರ್ಥಿಗಳನ್ನು ಒಳಗೊಂಡ ಹೋರಾಟ ಮಾಡಲಾಗುವುದು’ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ವಿಶೇಷ ಪ್ರಕರಣವೆಂದು ಪರಿಗಣಿಸಿ: ರಾಯರಡ್ಡಿ ಪತ್ರ

ಕೊಪ್ಪಳ: ಯಾವುದೇ ಸೌಲಭ್ಯಗಳನ್ನು ನೀಡದೆ ಹಿಂದಿನ ಬಿಜೆಪಿ ಸರ್ಕಾರ ಕೊಪ್ಪಳ ಸೇರಿದಂತೆ ಹಲವು ಕಡೆ ವಿಶ್ವವಿದ್ಯಾಲಯಗಳನ್ನು ಆರಂಭಿಸಿತ್ತು.

ಬೀದರ್‌ ಹೊರತು ಪಡಿಸಿ ಉಳಿದ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ತಾತ್ವಿಕ ನಿಲುವು ತೆಗೆದುಕೊಂಡಿದೆ. ಆದರೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಕೊಪ್ಪಳ ವಿಶ್ವವಿದ್ಯಾಲಯ. ಉಳಿಸಬೇಕು ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

‘ಕೇವಲ ₹2 ಕೋಟಿ ನೀಡಿ ಹಿಂದಿನ ಸರ್ಕಾರ ವಿಶ್ವವಿದ್ಯಾಲಯನ್ನು ಆರಂಭಿಸಿತ್ತು.

ಕುಲಪತಿಯನ್ನು ಮಾತ್ರ ನೇಮಕ ಮಾಡಿ ಬೇರೆ ಯಾವ ಹುದ್ದೆಗೂ ಮಂಜೂರಾತಿ ನೀಡಿಲ್ಲ. ಇದು ಹೆಸರಿಗೆ ಮಾತ್ರ ವಿಶ್ವವಿದ್ಯಾಲಯಂತೆ ಯಾವುದೇ ಪ್ರಯೋಜನ ಇಲ್ಲವೆಂದು ಕಂಡುಬರುತ್ತದೆ.

ಹಣಕಾಸಿನ ಮತ್ತು  ವಿಶ್ವವಿದ್ಯಾಲಯ ಶೈಕ್ಷಣಿಕ ಮಟ್ಟದ ವಿಚಾರದಿಂದ ವಿಶ್ವವಿದ್ಯಾಲಯ.ಗಳನ್ನು ಮುಚ್ಚುವ ಸರ್ಕಾರದ ನಿರ್ಧಾರ ಒಳ್ಳೆಯದಾಗಿರಬಹುದು. ಆದರೆ ಕೊಪ್ಪಳ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು ಸಾಕ್ಷರತಾ ಪ್ರಮಾಣ ಕಡಿಮೆಯಿದೆ.

ಆದ್ದರಿಂದ ಇಲ್ಲಿ ವಿಶ್ವವಿದ್ಯಾಲಯ್ ಮುಂದುವರಿಸುವ ಅಗತ್ಯವಿದೆ. ಮುಂದಿನ ವರ್ಷ ವಿಶ್ವವಿದ್ಯಾಲಯ್ ಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಪತ್ರದಲ್ಲಿ ಹೇಳಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!