09/06/2025 5:59 PM

Translate Language

Home » ಲೈವ್ ನ್ಯೂಸ್ » ಕೊಡಗು ವಿಶ್ವವಿದ್ಯಾಲಯ ಉಳಿಸಲು ಒತ್ತಾಯಿಸಿ ನಿರ್ಣಯ: ಜಿ.ಪಿ.ಅಧ್ಯಕ್ಷ ಎಂ.ಕೆ.ಪ್ರವೀಣಕುಮಾರ್

ಕೊಡಗು ವಿಶ್ವವಿದ್ಯಾಲಯ ಉಳಿಸಲು ಒತ್ತಾಯಿಸಿ ನಿರ್ಣಯ: ಜಿ.ಪಿ.ಅಧ್ಯಕ್ಷ ಎಂ.ಕೆ.ಪ್ರವೀಣಕುಮಾರ್

Facebook
X
WhatsApp
Telegram

ಕುಶಾಲನಗರ.03.ಮಾರ್ಚ.25:- ರಾಜ್ಯ ಸರ್ಕಾರದ ನಿರ್ಣಯದ್ ವಿರುದ್ಧವಾಗಿ ಕೊಡಗು ವಿಶ್ವವಿದ್ಯಾಲಯ ಬಚಾವ ಗೋಸ್ಕಾರಾ ಜಿಲ್ಲೆಯ ಜನಾ ಸಭೆಯಎಲ್ಲಿ ನಿರ್ಧಾರ್ ಮಾಡಿದಾರೆ.

ಕಳೆದ ಎರಡು ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಆರಂಭಗೊಂಡ ಕೊಡಗು ವಿಶ್ವವಿದ್ಯಾಲಯನ್ನು ಯಾವುದೇ ಕಾರಣಕ್ಕೂ ಮುಚ್ಚುಬಾರದು ಎಂದು ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಲು ಸೋಮವಾರ ನಡೆದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಎಂ.ಕೆ.ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ವೈ.ಬಿ.ಉಮಾ, ಕೆ.ಸೌಮ್ಯಾ, ಶಿವಪ್ಪ, ನಾರಾಯಣ, ಕೊಡಗು ವಿವಿ ಆರಂಭವಾಗಿ ಎರಡು ವರ್ಷಗಳಾಗಿವೆ. ಇಲ್ಲಿ ಇಡೀ ಜಿಲ್ಲೆಯ ಪರಿಶಿಷ್ಟ ಜಾತಿ, ವರ್ಗ, ಪಂಗಡಗಳೂ ಸೇರಿದಂತೆ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಆದರೆ ಇದೂವರೆಗೂ ಸರ್ಕಾರ ಯಾವುದೇ ಅನುದಾನ ಕೊಡಲಿಲ್ಲ. ಈಗ ಹಣದ ಕೊರತೆ ನೆಪವೊಡ್ಡಿ ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದರು.

ಅಧ್ಯಕ್ಷ ಎಂ.ಕೆ.ಪ್ರವೀಣಕುಮಾರ್ ಸೇರಿದಂತೆ ಎಲ್ಲಾ ಸದಸ್ಯರು ಸರ್ಕಾರದ ಬಳಿ ನಿಯೋಗ ತೆರಳಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಶ್ರಮಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು. ಜೊತೆಗೆ ಪಂಚಾಯಿತಿ ವತಿಯಿಂದ ಸರ್ಕಾರಕ್ಕೆ ಪತ್ರ ಬರೆದು ವಿವಿ ಉಳಿವಿಗೆ ಮನವಿ ಮಾಡಲು ನಿರ್ಧಾರಿಸಲಾಯಿತು.
ಪಂಚಾಯತಿ ವ್ಯಾಪ್ತಿಯಲ್ಲಿ ಭೂಮಿಗೆ ಮಾರಕವಾದ ಪ್ಲಾಸ್ಟಿಕ್ ನಿಷೇಧಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು.

ವರ್ತಕರು ಮಾರಾಟ ಮಾಡದಂತೆ ಹಾಗೂ ಗ್ರಾಹಕರು ಖರೀದಿಸದಂತೆ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.

ಗ್ರಾಮದ ಮುಖ್ಯ ವೃತ್ತದಲ್ಲಿ ಇರುವ ಮದ್ಯದ ಅಂಗಡಿಗಳು ಸ್ವಚ್ಛತೆಗೆ ಒತ್ತು ಕೊಟ್ಟಿಲ್ಲ. ಮದ್ಯದ ತ್ಯಾಜ್ಯಗಳನ್ನು ರಸ್ತೆ ಬದಿಯೇ ಸುಡುತ್ತಿದ್ದು ಇದರ ಸುತ್ತಮುತ್ತಲಿನ ಜನರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸದಸ್ಯರಾದ ಪ್ರದೀಪ್, ಶಿವಪ್ಪ, ನಾರಾಯಣ್, ಸೌಮ್ಯಾ ದೂರಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿನ ಯಾವುದೇ ಅತಿಕ್ರಮ ಅಥವಾ ಅಕ್ರಮ ಕಟ್ಟಡಗಳನ್ನು ಸ್ಥಳೀಯ ಸಂಸ್ಥೆಗಳು ನೇರವಾಗಿ ಹೋಗಿ ತೆರವು ಮಾಡುವಂತಿಲ್ಲ. ಈ ಬಗ್ಗೆ ತಕರಾರುಗಳು ಇದ್ದರೆ ನ್ಯಾಯಾಲಯಗಳ ಗಮನಕ್ಕೆ ತರುವಂತೆ ಹೈಕೋರ್ಟ್ ನಿರ್ದೇಶನ ಬಂದಿರುವ ಬಗ್ಗೆ ಪಿಡಿಒ ಸುಮೇಶ್ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಸದಸ್ಯರಾದ ವೈ.ಬಿ.ಉಮಾ, ಕೆ.ಜಿ.ಸುಶೀಲ, ನಂದಿನಿ, ಯಶೋದಾ, ಗಂಗಮ್ಮ, ಶಿವಪ್ಪ, ಪಟ್ಟು ಮಾದಪ್ಪ, ಪ್ರದೀಪ್, ರುಕ್ಮಿಣಿ, ನಾರಾಯಣ, ಲಕ್ಷ್ಮಣ, ಚಿದಾನಂದ, ನಿತ್ಯಾನಂದ, ರಮೇಶ್, ಉಷಾ, ಸರ್ವಮಂಗಳ, ಪಿಡಿಒ ಎಂ.ಆರ್.ಸುಮೇಶ್, ಕಾರ್ಯದರ್ಶಿ ಕುಮಾರಸ್ವಾಮಿ ಇದ್ದರು.

ಮದ್ಯದ ಅಂಗಡಿಗೆ ದಂಡ: ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯ ಹೋಟೆಲ್ ಹಾಗೂ ಬಾರ್‌ಗಳಲ್ಲಿ ಸ್ವಚ್ಛತೆಯನ್ನು ಕಾಪಾಡದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಲಕ್ಷ್ಮಿ ಹಾಗೂ ಭೀಮಾ ಎಂಬ ಹೆಸರಿನ ಮದ್ಯದ ಅಂಗಡಿಗಳಿಗೆ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಹಾಗೂ ಅಭಿವೃದ್ಧಿ ಅಧಿಕಾರಿ ಸುಮೇಶ್ ನೇತೃತ್ವದಲ್ಲಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವುದರಿಂದ ಸ್ಥಳದಲ್ಲಿಯೇ ತಲಾ ₹ 5 ಸಾವಿರ ದಂಡ ವಿಧಿಸಿತು.

ಆಹಾರ ಪದಾರ್ಥಗಳನ್ನು ತಯಾರಿಸುವ ಪಾತ್ರೆಗಳು ನೀರು ಹಾಗೂ ಅಡುಗೆಮನೆಯ ಸ್ವಚ್ಛತೆಯನ್ನು ಪರಿಶೀಲಿಸಲಾಯಿತು. ಈ ಬಗ್ಗೆ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಪ್ರವೀಣ್ ಹೇಳಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!