08/06/2025 9:31 PM

Translate Language

Home » ಲೈವ್ ನ್ಯೂಸ್ » ಕೊಡಗು ವಿಶ್ವವಿದ್ಯಾಲಯ ಉಳಿಸಲು ತೀವ್ರ ಹೋರಾಟಕೆ ವಿದ್ಯಾರ್ಥಿ ಮತ್ತು ಪಾಲಕರು.!

ಕೊಡಗು ವಿಶ್ವವಿದ್ಯಾಲಯ ಉಳಿಸಲು ತೀವ್ರ ಹೋರಾಟಕೆ ವಿದ್ಯಾರ್ಥಿ ಮತ್ತು ಪಾಲಕರು.!

Facebook
X
WhatsApp
Telegram

ಮಡಿಕೇರಿ.25.ಫೆ.25:- ರಾಜ್ಯದಲ್ಲಿ ವಿಶ್ವವಿದ್ಯಾಲಯ ಮುಚ್ಚುವ್ ವಿರೋಧಿಸಿ ಕೊಡಗು ವಿಶ್ವವಿದ್ಯಾಲಯ ಮುಚ್ಚಬಾರದು ಅಂದು ವಿದ್ಯಾರ್ಥಿ, ಪಾಲಕರು ಮತ್ತು ಪ್ರಗತಿಪರ ಸಂಘಟನೆಗಳು ಮತ್ತಷ್ಟು ತೀವ್ರ ಹೋರಾಟ.

ಒಂದು ವೇಳೆ ಮುಚ್ಚುವ ತನ್ನ ನಿರ್ಧಾರದಿಂದ ಸರ್ಕಾರ ಏನಾದರೂ ಹಿಂದೆ ಸರಿಯದೇ ಇದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಬಿ.ಸಿ.ಮಂದಾರ ತಿಳಿಸಿದರು.

ಕೊಡಗು ಸೇರಿದಂತೆ ಸರ್ಕಾರ ಮುಚ್ಚಲು ಹೊರಟಿರುವ ಎಲ್ಲ 9 ವಿಶ್ವವಿದ್ಯಾಲಯಗಳಲ್ಲೂ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಯಾವುದೇ ಶಿಕ್ಷಣ ತಜ್ಞರ ಸಲಹೆ ‍ಪಡೆಯದೇ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕೈಗೊಂಡಿರುವ ನಿರ್ಧಾರ ಸರಿ ಇಲ್ಲ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಈ 9 ವಿಶ್ವವಿದ್ಯಾಲಯಗಳನ್ನು ಉಳಿಸಲು ಪ್ರತ್ಯೇಕ ಹೋರಾಟ ಸಮಿತಿಯನ್ನು ಸಂಘಟನೆ ವತಿಯಿಂದ ರಚಿಸಲಾಗಿದೆ. ಪತ್ರ ಚಳವಳಿ, ಜನಜಾಗೃತಿ, ವಿದ್ಯಾರ್ಥಿ ಆಂದೋಲನ ಮೊದಲಾದ ಕ್ರಮಗಳ ಮೂಲಕ ಹೋರಾಟವನ್ನು ಮುನ್ನಡೆಸಲಾಗುವುದು ಎಂದರು.

ವಿವಿಧ ಭಾಗ್ಯಗಳಿಗಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರ ಹಿಂದಿನ ಸರ್ಕಾರ ಸ್ಥಾಪಿಸಿದ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಏಕಾದರೂ ಹಣ ನೀಡುವುದಿಲ್ಲ ಎಂದು ಅವರು ಇದೇ ವೇಳೆ ಪ್ರಶ್ನಿಸಿದರು.

ಈಗಾಗಲೇ ಶಿಕ್ಷಣ ತಜ್ಞರು, ಮಾಜಿ ಶಿಕ್ಷಣ ಸಚಿವರು, ವಿವಿಧ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರು, ಉಪನ್ಯಾಸಕರು ಸೇರಿದಂತೆ ಹಲವು ತಜ್ಞರೊಂದಿಗೆ ಸಭೆ ನಡೆಸಲಾಗಿದೆ.

ಒಂದು ವೇಳೆ ವಿಶ್ವವಿದ್ಯಾಲಯ ಮುಚ್ಚಿದರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯ ಈ ಸಭೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ, ವಿದ್ಯಾರ್ಥಿಗಳಿಗೆ ಮಾರಕ ಎನಿಸಿರುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಲು ಒತ್ತಾಯಿಸಿ ಸಂಘಟನೆಯು ತನ್ನ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಲಿದೆ ಎಂದರು.

ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಸರ್ಕಾರ ಈವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಸರ್ಕಾರ ಈ ಸಾಲಿನ ಬಜೆಟ್‌ನಲ್ಲೇ ಇಂತಿಷ್ಟು ಅನುದಾನವನ್ನು ನಿಗದಿಗೊಳಿಸಬೇಕು ಎಂದೂ ಒತ್ತಾಯಿಸಿದರು. ಪರಿಷತ್ತಿನ ಮುಖಂಡರಾದ ಗಂಧರ್ವ, ಕೆ.ಎಚ್.ಕೌಶಲ್ಯಾ, ಸಂತೋಷ್, ರೋಹಿತ್, ಪ್ರಮೋದ್ ಪಲ್ಲೇದ್ ಭಾಗವಹಿಸಿದ್ದರು.

ವಿಶ್ವವಿದ್ಯಾಲಯ ಮುಚ್ಚುವ ಒಲೆತನ ಇಲ್ಲಾ ಅದಕೆ ಪರಿಹಾರ ಒದಗಿಸಬೇಕು ಮುಖ್ಯ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!