30/06/2025 5:28 PM

Translate Language

Home » ಲೈವ್ ನ್ಯೂಸ್ » ಕೆಸ್ತೂರು ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ

ಕೆಸ್ತೂರು ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ

Facebook
X
WhatsApp
Telegram

ಯಳಂದೂರು.30.ಜೂನ್ .25:- ತಾಲ್ಲೂಕಿನ ಕೆಸ್ತೂರು ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ 2024-2025 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಂಬೇಡ್ಕರ್ ಸಂಘದ ವತಿಯಿಂದ  ಭಾನುವಾರ ಆಯೋಜಿಸಲಾಗಿತ್ತು.


ದೈಹಿಕ ಶಿಕ್ಷಕರಾದ ಕುಮಾರ್ ನಾಯಕ್ ಮಾತನಾಡಿ.
ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ಮಾಡುವ  ಉದ್ದೇಶ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಹಾಗೂ ಅವರು ಕೂಡ ಉತ್ತಮವಾದ ಅಂಕವನ್ನು ಗಳಿಸಬೇಕೆಂಬ ಆಶಯವನ್ನು ಹೊಂದಿಸಲಾಗುತ್ತದೆ.


ನಾವು ಏನಾದರು ಸಾಧನೆ ಮಾಡಬೇಕಾದರೆ ಹಾಗೂ ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬೇಕಾದರೆ  ಮೊದಲು ಶಿಕ್ಷಿತರಾಗಬೇಕು ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರು ಶಿಕ್ಷಣ ಸಂಘಟನೆ ಹೋರಾಟ ಎಂಬ ಅಸ್ತ್ರದ ಮೂಲಕ ಸಮಾಜವನ್ನು ಬದಲಾಯಿಸಿದರು.

ಅಂಬೇಡ್ಕರ್ ರವರು ಶಿಕ್ಷಣವನ್ನು ಪಡೆದು ಕೊಳ್ಳಬೇಕಾದರೆ ಅನೇಕ ಸಮಸ್ಯೆಗಳನ್ನು ಅನುಭವಿಸಿದರು ಅವರು ಮಹಾನ್ ವ್ಯಕ್ತಿಯಾಗುವುದಕ್ಕೆ ಕಾರಣ ಬಡತನ, ಶೋಷಣೆ, ಅಸಮಾನತೆ ಇದನ್ನು ನಿರ್ಮೂಲನೆ ಮಾಡಬೇಕೆಂದು ಉತ್ತಮ ಶಿಕ್ಷಣವನ್ನು ಪಡೆದು ದೇಶಕ್ಕೆ ಉತ್ತಮವಾದ ಸಂವಿಧಾನವನ್ನು ರಚಿಸಿ ವಿಶ್ವ ಜ್ಞಾನಿಯಾದರು ಇವರೆ ನಮಗೆ ಸ್ಪೂರ್ತಿ ಇವರ ತತ್ವ ಸಿದ್ದಾಂತಗಳನ್ನು ನಾವುಗಳು ಮೈಗೂಡಿಸಿಕೊಳ್ಳಬೇಕು.

ವಿದ್ಯಾರ್ಥಿಗಳು ಸಮಾಜದಲ್ಲಿ ಮಾದರಿಯಾಗಿ  ಬದುಕಬೇಕು ಹಾಗೂ  ರಾಷ್ಟ್ರವನ್ನು ಮುನ್ನೇಡಿಸುವಂತಹ ಕಾರ್ಯದಲ್ಲಿ ತೊಡಗಬೇಕು ಎಂದರು.

ವಿದ್ಯಾರ್ಥಿಗಳನ್ನು ಗ್ರಾಮದ ಯಜಮಾನರು ಮುಖಂಡರು ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಉಮಾಶಂಕರ್,  ಗ್ರಾಮಪಂಚಾಯತಿ ಸದಸ್ಯರಾದ ಗುರುಲಿಂಗಯ್ಯ, ಮಹೇಂದ್ರ, ಪ್ರಸಾದ್, ವಿಚಾರವಾದಿ ಕೇಶವಮೂರ್ತಿ, ಯಜಮಾನರುಗಳಾದ ನಾಗರಾಜು, ದೊರೆಸ್ವಾಮಿ, ಜಯರಾಜು,   ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಸಚಿನ್. ಕಾರ್ಯದರ್ಶಿ ಮಹೇಂದ್ರ, ಕಿರಣ್  ಜೆ, ಸಂಜಯ್ ರಾಜ್, ಶಿವಕುಮಾರ್, ಸಾಗರ್ ಸಂದೀಪ್, ಶಿವು,
ಮುಖಂಡರಾದ ಸಿದ್ದರಾಜು, ರಾಜು, ಮಧು, ಚಿನ್ನಸ್ವಾಮಿ ಕೆ  ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

_ ಪ್ರಸನ್ನಕುಮಾರ್ ಕಸ್ತೂರಿ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!