ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಯಳಂದೂರು ಕೃಷಿ ಇಲಾಖೆ ಹಾಗೂ ಭಾ.ಕೃ.ಸಂ.ಪ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಚಾಮರಾಜನಗರ ವತಿಯಿಂದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025 ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ರೈತರ ಸಮಸ್ಯೆ ಹಾಗೂ ಗುಣಮಟ್ಟ ಇಳುವರಿ ಮತ್ತು ನೈಸರ್ಗಿಕ ಕೃಷಿ ಉತ್ಪನ್ನ ಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕೆಂದು ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಲಾಗಿದೆ ಎಂದು ಕೃಷಿ ಅಧಿಕಾರಿ ಅಮೃತೇಶ್ ತಿಳಿಸಿದರು.
ಪಶು ಸಂಗೋಪನೆ, ರೇಷ್ಮೆ ಅಭಿವೃದ್ಧಿ ಹಾಗೂ ನೈಸರ್ಗಿಕ ಕೃಷಿಗಳ ಬಗ್ಗೆ ರೈತರಿಗೆ ಕೃಷಿ ವಿಜ್ಞಾನಿಗಳಿಂದ ಕಾರ್ಯಾಗಾರವನ್ನು ನಡೆಸಲಾಯಿತು.
ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ದಾಳಿಯಾಯಿತು.
ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳು ರೈತರಿಗೆ ವಿತರಿಸುತ್ತಿರುವ ಬಿತ್ತನೆ ಬೀಜ ಗುಣಮಟ್ಟವಿರುವುದಿಲ್ಲ ಹಾಗೂ ಸಮಯಕ್ಕೆ ಅನುಗುಣವಾಗಿ ನೀಡುತ್ತಿಲ್ಲ. ಮಳೆ ಬಂದಾಗ ಬಿತ್ತನೆ ಬೀಜವನ್ನು ಇಲಾಖೆ ಶೇಖರಿಸುತ್ತದೆ ಮಳೆ ಬರುವುದಕ್ಕೂ ಮುಂಚೆ ಬಿತ್ತನೆ ಬೀಜ ಶೇಖರಿಸಿ ಮಳೆ ಬಂದಾಗ ರೈತರಿಗೆ ವಿತರಿಸಿಬೇಕು ಇದು ಇಲಾಖೆಯ ವೈಫಲ್ಯವಾಗಿದೆ. ಕಂಪನಿಗಳಿಗೆ ಒಳ ಒಪ್ಪಂದ ಮಾಡಿಕೊಂಡ ಪರಿಣಾಮ ಕಳಪೆ ಗುಣಮಟ್ಟದ ಬಿತ್ತನೆ ಬೀಜವನ್ನು ನೀವು ನೀಡುತ್ತಿರಿ. ಇದರಿಂದ ರೈತರಿಗೆ ನಷ್ಟವಾಗುತ್ತದೆ ಈ ನಷ್ಟವನ್ನು ತುಂಬುಕೊಡುವವರು ಯಾರು?.
ಅಧಿಕಾರಿಗಳು ರೈತರ ಜಮೀನಗಳಿಗೆ ತೆರಳಿ ಬೆಳೆ ಪರಿಶೀಲನೆ ಮಾಡಬೇಕು.
ವಿಜ್ಞಾನಿಗಳು ಹೊಸದಾಗಿ ಪ್ರಯೋಗ ಮಾಡಿದ್ದು ರೈತರಿಗೆ ತಲುಪಬೇಕಾದರೆ ಎರಡು ವರುಷವಾಗುತ್ತದೆ ಸುಮ್ನೆ ಕಾಟಾಚಾರಕ್ಕೆ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪಶು ಪೋಷಣಾ ಸಂಸ್ಥೆಯ ವಿಜ್ಞಾನಗಳಾದ ಡಾ ಗಿರಿಧರ್,ಡಾ ಆನಂದ್, ಕೆವಿಕೆ ಹರದನಹಳ್ಳಿ ವಿಜ್ಞಾನಿ ಡಾ ಶೃತಿ,ಡಾ ಚಂದ್ರಶೇಖರ್ ಕಲ್ಲಿಮಣಿ,ತೋಟಗಾರಿಕೆ ಇಲಾಖೆಯ ವೀಣಾ, ಗ್ರಾಪಂ ಸದಸ್ಯ ಪ್ರಸಾದ್, ಮಹೇಶ್, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ,
ಪಿಡಿಒ ಮಹದೇವಸ್ವಾಮಿ ರೈತರಾದ ನಾಗರಾಜಪ್ಪ, ಶಾಂತಪ್ಪ, ಮಹೇಶ್, ಪ್ರಕಾಶ್, ನಾಗರಾಜು, ಮಹೇಶ್, ಆನಂದ್ ಹಾಗೂ ಇತರರು ಹಾಜರಿದ್ದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು
