10/06/2025 3:21 AM

Translate Language

Home » ಲೈವ್ ನ್ಯೂಸ್ » ಕೆಜಿಎಫ್‌ನಲ್ಲಿ ಆರ್‌ಪಿಐದಿಂದ ಒಳ ಮೀಸಲಾತಿ ಜಾತಿ ಗಣತಿ ಜಾಗ್ರತಿ.!

ಕೆಜಿಎಫ್‌ನಲ್ಲಿ ಆರ್‌ಪಿಐದಿಂದ ಒಳ ಮೀಸಲಾತಿ ಜಾತಿ ಗಣತಿ ಜಾಗ್ರತಿ.!

Facebook
X
WhatsApp
Telegram

ಕೆಜಿಎಫ್‌: ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು ಪರಿಶಿಷ್ಟ ಜಾತಿಗೆ ಸೇರಿದ ಹೊಲೆಯರನ್ನು ಮಾದಿಗ ಜಾತಿಯಲ್ಲಿ ಸೇರಿಸಿ ಹೊಲೆಯ ಜನಾಂಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಪಬ್ಲಿಕನ್‌ ಪಕ್ಷವು ನಗರದಲ್ಲಿ ಮರುಸಮೀಕ್ಷೆ ನಡೆಸಲಿದೆ ಎಂದು ರಿಪಬ್ಲಿಕನ್‌ ಪಕ್ಷದ ಮುಖಂಡ ಎಸ್‌.ರಾಜೇಂದ್ರನ್‌ ಹೇಳಿದರು.

ಅಂಬೇಡ್ಕರ್‌ ಜಯಂತಿ ಅಂಗವಾಗಿ ಸೋಮವಾರ ರಾಬರ್ಟಸನ್‌ಪೇಟೆಯಲ್ಲಿ ಆರ್‌ಪಿಐ ಕಾರ್ಯಕರ್ತರ ಬೃಹತ್‌ ಮೆರವಣಿಗೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಜಿಎಫ್‌ ನಗರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪರಿಯನ್‌ ಅಥವಾ ಪರಿಯಾ ಗುಂಪಿಗೆ ಸೇರಿದ ಜನಸಂಖ್ಯೆ ಅಧಿಕವಾಗಿದೆ. ಆಂಧ್ರ ಮೂಲದ ಮಾದಿಗರ ಜನಸಂಖ್ಯೆ ಅತ್ಯಂತ ಕಡಿಮೆ ಇದೆ. ಮೈನಿಂಗ್‌ ಕಾಲೋನಿಗಳಲ್ಲಿ ಅವರದ್ದು ಕೆಲವೇ ಮನೆಗಳಿವೆ. ಆದರೆ ನಗರದಲ್ಲಿ ಪರಿಯಾ ಗುಂಪಿಗೆ ಸೇರಿದ ಜನ ಕಡಿಮೆ ಇದೆ, ಮಾದಿಗರ ಸಂಖ್ಯೆ ಜಾಸ್ತಿಯಾಗಿದೆ ಎಂಬ ತಪ್ಪು ಅಂಕಿ ಅಂಶಗಳನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ಆರೋಪಿಸಿದರು.

ಪರಿಯಾ ಜನಾಂಗದವರನ್ನು ಕರ್ನಾಟಕದಲ್ಲಿ ಹೊಲೆಯ ಎಂದು ಕರೆಯಲಾಗುತ್ತದೆ. ಆಂ‍ಧ್ರದಲ್ಲಿ ಮಾಲಾ, ಕೇರಳದಲ್ಲಿ ಪುಲೆಯಾ, ಮಹಾರಾಷ್ಟ್ರದಲ್ಲಿ ಮಹರ್‌ ಎಂದು ಕರೆಯಲಾಗುತ್ತದೆ. ನಗರದ ಜನತೆಗೆ ಪರಿಶಿಷ್ಟ ಜಾತಿಯಲ್ಲಿಯೇ ಪಂಗಡ ಮತ್ತು ಉಪ ಪಂಗಡಗಳು ಇರುವುದು ಗೊತ್ತಿಲ್ಲ. ಸಾಮಾನ್ಯವಾಗಿ ತಮ್ಮನ್ನು ಪರಿಶಿಷ್ಟ ಜಾತಿ ಎಂದು ಕರೆದುಕೊಳ್ಳಲಾಗುತ್ತದೆ. ನಗರದಲ್ಲಿ ಅಧಿಕೃತ ಅಂಕಿ ಅಂಶಗಳ ಪ್ರಕಾರ ಶೇ 52 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಜಾತಿ ಜನಗಣತಿಯಲ್ಲಿ ಅವರನ್ನು ಹಿಂದಕ್ಕೆ ಇರಿಸಿ, ಅಲ್ಪಸಂಖ್ಯಾತರಾಗಿರುವ ಮಾದಿಗ ಜನಾಂಗದವರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಸಂಬಂಧವಾಗಿ ತಾವು ಮುಖ್ಯಮಂತ್ರಿಗೆ ದೂರು ನೀಡುವುದಾಗಿ ರಾಜೇಂದ್ರನ್‌ ತಿಳಿಸಿದರು.

ನಿಖರವಾದ ಜಾತಿ ಅಂಕಿ-ಸಂಖ್ಯೆಯನ್ನು ಕಂಡುಹಿಡಿಯಲು ಆರ್‌ಪಿಐ ಪಕ್ಷವೇ ಜನಗಣತಿ ನಡೆಸಲಿದೆ. ಪ್ರತಿ ಮನೆಗೂ ಜಾತಿ ಗಣತಿ ಫಾರಂ ನೀಡಲಾಗುತ್ತದೆ. ಒಟ್ಟು ಜನಸಂಖ್ಯೆಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಜಾತಿ ಹೆಸರಲ್ಲಿ ರಾಜಕಾರಣ ಮಾಡುವುದನ್ನು ಮಾದಿಗ ಜನಾಂಗಕ್ಕೆ ಸೇರಿದ ಪ್ರಮುಖ ರಾಜಕಾರಣಿಗಳು ಕೈಬಿಡಬೇಕು. ಸೂಕ್ತ ಪ್ರಾತಿನಿಧ್ಯ ಸಿಗದ ಜಾತಿಗೆ ನ್ಯಾಯ ಕೊಡಿಸಬೇಕು. ಸುಳ್ಳು ಅಂಕಿ ಅಂಶಗಳನ್ನು ಸೇರಿಸುವ ಕೆಲಸ ಒಳ್ಳೆಯದಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!