26/06/2025 11:05 AM

Translate Language

Home » ಲೈವ್ ನ್ಯೂಸ್ » ಕೃಷಿ ಪರಿಕರಗಳ ಖರೀದಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು: ರೈತರಿಗೆ ಸಲಹೆ

ಕೃಷಿ ಪರಿಕರಗಳ ಖರೀದಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು: ರೈತರಿಗೆ ಸಲಹೆ

Facebook
X
WhatsApp
Telegram

ಕೊಪ್ಪಳ.25.ಜೂನ್.25: ಕೃಷಿ ಪರಿಕರಗಳನ್ನು ಖರೀದಿಸುವ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ರೈತರಿಗೆ ಕೃಷಿ ಇಲಾಖೆಯಿಂದ ಸಲಹೆಗಳನ್ನು ನೀಡಲಾಗಿದೆ.


ಈ ವರ್ಷದ ಮುಂಗಾರು ಹಂಗಾಮು ಉತ್ತಮವಾಗಿ ಪ್ರಾರಂಭಗೊAಡಿದೆ. ಇಲ್ಲಿಯವರೆಗೆ ವಾಡಿಕೆ ಮಳೆಯ ಪ್ರಮಾಣ 147 ಮಿ.ಮೀ. ಇದ್ದು, ವಾಸ್ತವಿಕ ಮಳೆಯ ಪ್ರಮಾಣ 217 ಮಿ.ಮೀ. ದಾಖಲಾಗಿದೆ. ಶೇ.48ರಷ್ಟು ಹೆಚ್ಚಿನ ಮಳೆಯಾಗಿದ್ದು, ಮಳೆಯು ಅವಧಿಗೆ ಮುನ್ನವೇ ಪ್ರಾರಂಭವಾಗಿರುವುದರಿAದ ಈ ಹಂಗಾಮು ಆಶಾದಾಯಕವಾಗಿರುವ ನಿರೀಕ್ಷೆಯಿದೆ.

ಈ ಸಂದರ್ಭದಲ್ಲಿ ರೈತರು ಕೆಲ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.


ಕೃಷಿ ಪರಿಕರಗಳ ಖರೀದಿಸುವಾಗ ಅನುಸರಿಸಬೇಕಾದ ಕ್ರಮಗಳು: ಅಧಿಕೃತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳಿಂದ ಮಾತ್ರ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಖರೀದಿಸಬೇಕು. ಬಿಡಿ (ಲೂಸ್) ಬಿತ್ತನೆ ಬೀಜಗಳನ್ನು ಖರೀದಿಸಬಾರದು.

ಖರೀದಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಬಿಲ್ ಪಡೆದುಕೊಳ್ಳಬೇಕು ಹಾಗೂ ಬಿಲ್ಲಿನಲ್ಲಿ ಉಲ್ಲೇಖಿತ ವಿವರಗಳನ್ನು ಪರಿಶೀಲಿಸಬೇಕು. ತಮ್ಮ ಜಮೀನಿನ ಸ್ವರೂಪಕ್ಕೆ (ಖುಷ್ಕಿ/ನೀರಾವರಿ) ಅನುಗುಣವಾಗಿ ಶಿಫಾರಸ್ಸು ಮಾಡಿದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ರೈತರು ತಾವು ಬೆಳೆಯುವ ಬೆಳೆಯ ಪ್ರಕಾರ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಖರೀದಿಸಬೇಕು ಹಾಗೂ ಕಡ್ಡಾಯವಾಗಿ ಖರೀದಿ ಬಿಲ್ ಪಡೆಯಬೇಕು. ಡಿ.ಎ.ಪಿ. ರಸಗೊಬ್ಬರದ ಪರ್ಯಾಯವಾಗಿ 20:20:0:13, ನ್ಯಾನೋ ಡಿ ಎ ಪಿ, ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ನ್ಯಾನೋ ಯೂರಿಯಾ ರಸಗೊಬ್ಬರಗಳನ್ನು ಬಳಸಬಹುದು.


ಬೆಳೆಗಳಿಗೆ ಶಿಫಾರಸ್ಸು ಮಾಡಿರುವ ಪೀಡೆನಾಶಕಗಳನ್ನು ಮಾತ್ರ ಬಳಸಬೇಕು. ಕಳೆನಾಶಕಗಳ ಬಳಕೆಯ ವೇಳೆ ಎಚ್ಚರಿಕೆಯಿಂದಿರಬೇಕು.

ಪೀಡೆನಾಶಕ ಸಿಂಪಡನೆ ಮಾಡುವ ವೇಳೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳನ್ನು ಖರೀದಿಸುವ ಸಮಯದಲ್ಲಿ ಮಾರಾಟಗಾರರು ಖರೀದಿ ಬಿಲ್ ಅನ್ನು ನೀಡದೇ ಇದ್ದಲ್ಲಿ ಅಥವಾ ಕೃಷಿ ಪರಿಕರಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬoದಲ್ಲಿ ಅಥವಾ ಕಳಪೆ ಗುಣಮಟ್ಟದ ಬೀಜ/ರಸಗೊಬ್ಬರ/ಕೀಟನಾಶಕ ಕಂಡುಬoದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ

ಕೊಪ್ಪಳದ ಜೀವನಸಾಬ ಮೊ.ಸಂ: 8277922143, ಕುಷ್ಟಗಿಯ ನಾಗರಾಜ ಕಾತರಕಿ ಮೊ.ಸಂ: 8277922109, ಯಲಬುರ್ಗಾದ ಪ್ರಮೋದ ತುಂಬಾಳ ಮೊ.ಸಂ: 8277922107, ಗಂಗಾವತಿಯ ಸಂತೋಷ ಪಟ್ಟದಕಲ್ ಮೊ.ಸಂ: 8277922106 ಹಾಗೂ ಕೊಪ್ಪಳದ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ)  ಎಂ.ಟಿ.ಸುನೀಲ್ ಕುಮಾರ ಮೊ.ಸಂ: 8277932117 ಇವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!