01.ಡಿ25 ಬೀದರ :-ಇಂದು ಬೀದರ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಐದು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬೀದರ ತಾಲ್ಲೂಕು ಕೃಷಿಕ ಸಮಾಜದ
ಚುನಾವಣಾಧಿಕಾರಿಗಳಾದ ಅನ್ಸಾರಿ ಎಮ್.ಎ.ಕೆ ಸಹಾಯಕ ಕೃಷಿ ನಿರ್ದೇಶಕ ಕಛೇರಿಯಿಂದ ಕಾರ್ಯಕಾರಿ ಸಮಿತಿಗೆ ಐದು (2025-26 ರಿಂದ 2029-30ರ ವರೆಗೆ) ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ 15 ಜನ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ದಿನಾಂಕ:31-12-2024 ರಂದು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಬೀದರ. ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಐದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಸಿದ್ರಾಮಯ್ಯಾ ಎಸ್. ಸ್ವಾಮಿ ಅವರು ಬೀದರ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರು, ಮಹೇಶ ಚಿಂತಾಮಣಿ ಉಪಾಧ್ಯಕ್ಷರು, ದಯಾನಂದ ಸ್ವಾಮಿ ಜಿಲ್ಲಾ ಪ್ರತಿನಿಧಿ, ಶಿವಯ್ಯಾ ಸ್ವಾಮಿ ಪ್ರಧಾನ ಕಾರ್ಯದರ್ಶಿ, ಸಂಜುಕುಮಾರ ಪಾಟೀಲ್ ಖಜಾಂಚಿಯಾಗಿ ಆಯ್ಕೆಯಾದರು. ನಂದುಕುಮಾರ ಪಾಟೀಲ್, ವೈಜಿನಾಥ ಭುಯ್ಯಾ, ಶಂಕರರಾವ ಪಾಟೀಲ್, ಮಲ್ಲಿಕಾರ್ಜುನ ಹಚ್ಚಿ, ಮಹಾದೇವ ನಾಗೋರೆ, ಅನೀಲಕುಮಾರ ಅಟಂಗೆ, ನಾಗಯ್ಯಾ ಶಂಕ್ರಯ್ಯಾ, ನಾಗಯ್ಯಾ ಮಡಿವಾಳಯ್ಯಾ, ಮಹದೇವ ಸ್ವಾಮಿ, ಹಾಗೂ ಅಶೋಕ ಬಿರಾದರ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
Source:www.prajaprabhat.com