15/06/2025 9:07 PM

Translate Language

Home » ಲೈವ್ ನ್ಯೂಸ್ » ಕಾಯಂಗೆ ಆಗ್ರಹಿಸಿ ಕಾರ್ಮಿಕ್ ಸಂಘ ಪ್ರತಿಭಟನೆ.

ಕಾಯಂಗೆ ಆಗ್ರಹಿಸಿ  ಕಾರ್ಮಿಕ್ ಸಂಘ ಪ್ರತಿಭಟನೆ.

Facebook
X
WhatsApp
Telegram

ಬೆಂಗಳೂರು. ರಾಜ್ಯದ ವಿವಿಧ ವಸತಿನಿಲಯ, ವಸತಿಯುತ ಶಾಲೆ, ಆಶ್ರಮ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನುಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿ ವೇಳೆ ಖಾಯಂ ನೇಮಕಾತಿಗೆ (‘ಡಿ’ ಗುಂಪಿನ ಹುದ್ದೆ) ಕಾಯಂ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು.

ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿ ವೇಳೆ ಖಾಯಂ ನೇಮಕಾತಿಗೆ ಅನುಸರಿಸುವ ಮೀಸಲಾತಿ ಮಾನದಂಡನ್ನೇ ಪಾಲಿಸಬೇಕು ಎಂದು

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರು, ಅಡುಗೆ ಸಿಬ್ಬಂದಿ, ಕಾವಲುಗಾರರಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಶೋಷಣೆಗೆ ಕಾರಣವಾಗಿರುವ ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕು. ಸರ್ಕಾರದಿಂದಲೇ ನೇರವಾಗಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.

ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ ವೇತನವನ್ನು ತಿಂಗಳಿಗೆ ₹35,950ಕ್ಕೆ ಪರಿಷ್ಕರಣೆ ಮಾಡಬೇಕು. ಕೈಗವಸು ಸೇರಿದಂತೆ ಸುರಕ್ಷಾ ಸಾಮಗ್ರಿಯನ್ನು ಉಚಿತವಾಗಿ ಒದಗಿಸಬೇಕು. ವಾರದ ರಜೆ, ಗಳಿಕೆ ರಜೆ ಹಾಗೂ ಸಾಂದರ್ಭಿಕ ರಜೆ ಮಂಜೂರು ಮಾಡಬೇಕು. ಸರ್ಕಾರಿ ರಜಾ ದಿನಗಳಂದು ಕೆಲಸ ಮಾಡುವ ನೌಕರರಿಗೆ ನಿಯಮದಂತೆ ದುಪ್ಪಟ್ಟು ವೇತನ ನೀಡಬೇಕು ಎಂದು ಕೋರಿದರು.

ಹಾಸ್ಟೆಲ್‌ ಹಾಗೂ ವಸತಿಯುತ ಶಾಲೆಗಳಲ್ಲಿ ಮಂಜೂರಾತಿ ಹುದ್ದೆಗಳ ಸಂಖ್ಯೆಗೆ ತಕ್ಕಂತೆ ಅಡುಗೆ ಸಿಬ್ಬಂದಿ ನೇಮಿಸಬೇಕು. ವೇತನ ಚೀಟಿ, ನೇಮಕಾತಿ ಪತ್ರ, ಗುರುತಿನ ಚೀಟಿ, ಇಎಸ್‍ಐ ಕಾರ್ಡ್‌ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಅಡುಗೆ ಸಿಬ್ಬಂದಿಯ ಸಂಖ್ಯೆ ಕಡಿತ ಮಾಡಿರುವ ಸಮಾಜ ಕಲ್ಯಾಣ ಇಲಾಖೆಯ ಆದೇಶವನ್ನು ತಕ್ಷಣ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಕೆ.ರಾಕೇಶ್ ಕುಮಾರ್, ‘ಕಾರ್ಮಿಕರಿಗೆ ತಕ್ಷಣವೇ ಸುರಕ್ಷಾ ಸಾಮಗ್ರಿ ನೀಡಲಾಗುವುದು. ರಜೆ ಮಂಜೂರಾತಿಗೂ ಕ್ರಮ ತೆಗೆದುಕೊಳ್ಳಲಾಗುವುದು. ಕಾರ್ಮಿಕರಿಗೆ ವರ್ಷಪೂರ್ತಿ ವೇತನ ಪಾವತಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಭರವಸೆ ನೀಡಿದರು.

ಸಂಘದ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್, ಸಂಘದ ರಾಜ್ಯ ಕಾರ್ಯದರ್ಶಿ ಮಹೇಶ್ ಚಿಕಲಪರ್ವಿ, ಉಪಾಧ್ಯಕ್ಷರಾದ ಎಚ್‌.ಟಿ.ಮಲ್ಲಿಕಾರ್ಜುನ್, ಮಹೇಶ್ ನಾಡಗೌಡ, ಶರಣಪ್ಪ ಜಿ. ತೇಳಿಗೇರಿಕರ್, ಎಂ.ಜಿ.ರಾಘವೇಂದ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!