09/06/2025 12:03 PM

Translate Language

Home » ಲೈವ್ ನ್ಯೂಸ್ » ಭದ್ರತೆಯನ್ನು ಬಲಪಡಿಸುವ ಸಿ.ಸಿ.ಟಿ.ವಿ ಕಮಾಂಡ ಮತ್ತು ಕಂಟ್ರೋಲ್ ಸೆಂಟರ. ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು

ಭದ್ರತೆಯನ್ನು ಬಲಪಡಿಸುವ ಸಿ.ಸಿ.ಟಿ.ವಿ ಕಮಾಂಡ ಮತ್ತು ಕಂಟ್ರೋಲ್ ಸೆಂಟರ. ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು

Facebook
X
WhatsApp
Telegram

ಬೀದರ.08.ಮಾರ್ಚ.25:- ಬೀದರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಈಶ್ವರ ಖಂಡ್ರೆ ಅವರು ಸಿ.ಸಿ.ಟಿ.ವಿ ಕಮಾಂಡ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಉದ್ಘಾಟಿಸಿದರು.

ಈ ಯೋಜನೆಗೆ ಶ್ರೀ ಈಶ್ವರ ಖಂಡ್ರೆ ಅವರ ಅನುದಾನದಡಿ ಹಾಗೂ KKRDB (ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ) ನಿಧಿಯಿಂದ ಹಣ ಮಂಜೂರಾಗಿದ್ದು, Automatic Number Plate Recognition (A.N.P.R) ತಂತ್ರಜ್ಞಾನ ಹೊಂದಿರುವ 21 ಸಿ.ಸಿ.ಟಿ.ವಿ ಕ್ಯಾಮೆರಾಗಳು ಮತ್ತು Face Recognition (F.R) ತಂತ್ರಜ್ಞಾನ ಹೊಂದಿರುವ 18 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದೆ.

ಈ ಎಲ್ಲಾ ಕ್ಯಾಮೆರಾಗಳ ನಿಯಂತ್ರಣ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಕಮಾಂಡ ಸೆಂಟರ್‌ನಿಂದ ನಿಗಾ ವಹಿಸಲಾಗುತ್ತದೆ.

ಕಾರ್ಯಕ್ರಮದ ಬಳಿಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ, ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಶುಭಾಶಯ ತಿಳಿಸಿ ಶ್ರೀ ಈಶ್ವರ ಖಂಡ್ರೆ ಅವರ ಸೇವೆಯನ್ನು ಮೆಚ್ಚಿದರು.

ಈ ಮಹತ್ವದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!