ಔರಾದ.22.ಜೂನ್.25:- 22ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದ ಔರಾದ(ಬಿ) ತಾಲೂಕ ಘಟಕದ ನೂತನ ಪಧಾದಿಕಾರಿಗಳ ನೇಮಕವ ಮಾಡಿರು ಕುರಿತು.

ಈ ಮೇಲ್ಕಂಡ ವಿಷಯಕ್ಕೆ ಸಂಭಂದಿಸಿದಂತೆ ಕಲ್ಯಾಣ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಹಾ ಸಂಘದ ವತಿಯಿಂದ ಬೀದರ ಜಿಲ್ಲೆ ಔರಾದ (ಬಿ) ತಾಲೂಕಿನಲ್ಲಿ ದಿನಾಂಕ 22/06/2025 ರಂದು ರವಿವಾರ ಬೆಳ್ಳಿಗೆ 11:45 ಗಂಟೆಗೆ ಔರಾದ (ಬಿ) ಪಟ್ಟಣದಲ್ಲಿ ಡಾ| ಬಿ.ಆರ್.ಅಂಬೆಡ್ಕರ ಭವನ ಜನತಾ ಕಾಲೋನಿಯಲ್ಲಿ ಸಂಘದ ನೂತನ ಪದಾಧಿಕಾರಿಗಳು ನೇಮಕ ಮಾಡಲಾಗಿದ್ದು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಕಾಯ್ದೆ ಅಡಿಯಲ್ಲಿ ದೋರೆಯುವ ವಿವಿಧ ಸೌಲಭ್ಯಗಳಾದ ಶೈಕ್ಷೆಣಿಕ ಧನ ಸಹಾಯ, ಮದುವೆ ಧನ ಸಹಾಯ, ಹೇರಿಗೆ ಧನ ಸಹಾಯ, ಪ್ರಮಖ ವೈಧ್ಯೆಕಿಯ ಚಿಕಿತ್ಸೆ ಸಹಾಯ ಧನ ನಿವೃತಿ ಪಿಂಚೆಣಿ ಹಾಗೂ ಅಂತ್ಯ ಸಂಸ್ಕಾರ ಸಹಾಯ ಧನ, ಅಪಘಾತ ಸಹಾಯ ಧನ ಇನ್ನಿತರ ಸೌಲಭ್ಯಗಳು ನಿಜವಾದ ಕಟ್ಟಡ ಕಾರ್ಮಿಕರಿಗೆ ದೋರಕಿಸಿ ಕೋಡುವಲ್ಲಿ ಸಮರ್ಥ ಮುಂಚುಣಿಯಲ್ಲಿ ಮುಂದಾಳತ್ವ ವಹಿಸಿ ಸಂಘದ ನಿಯಮಗಳಿಗೆ ಬದ್ದರಾಗಿ ನಿಜವಾಜ ಕಟ್ಟಡ ಕಟ್ಟಡ ಕಾರ್ಮಿಕರಿಗೆ ದೋರಕಿಸಿ ಕೋಡುವಲ್ಲಿ ಪ್ರಮಾಣಿಕ ನಿಷ್ಠತೆಯಿಂದ ಶ್ರಮಿಸಬೇಕೆಂದು. ಜಿಲ್ಲಾಧ್ಯಕ್ಷರಾದ ಶ್ರೀ ಸೂರ್ಯಕಾಂತ ಸಾಧುರೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶ್ರೀ ಸಂತೋಷ ಕೆ ಶಿಂದೆ ನೇಮಕಾತಿ ಆದೇಶ ನೀಡಿರುತ್ತಾರೆ.

