08/06/2025 2:43 PM

Translate Language

Home » ಲೈವ್ ನ್ಯೂಸ್ » ಕಲಬುರ್ಗಿ ಬೀದರ್ ಯಾದಗಿರಿ ಶಾಶ್ವತ ನೀರಾವರಿ ಹೋರಾಟ ಸಮಿತಿ

ಕಲಬುರ್ಗಿ ಬೀದರ್ ಯಾದಗಿರಿ ಶಾಶ್ವತ ನೀರಾವರಿ ಹೋರಾಟ ಸಮಿತಿ

Facebook
X
WhatsApp
Telegram

ಕಲಬುರ್ಗಿ ಬೀದರ್ ಯಾದಗಿರಿ ಶಾಶ್ವತ ನೀರಾವರಿ ಹೋರಾಟ ಸಮಿತಿ

ಆತ್ಮೀಯ ರೈತ ಬಾಂಧವರೇ,
            
         ಕಲ್ಬುರ್ಗಿ ಬೀದರ್ ಯಾದಗಿರ ಜಿಲ್ಲೆಗಳಲ್ಲಿ ಬರುವ ಮಧ್ಯಮ ನೀರಾವರಿ ಯೋಜನೆಗಳು ಭೀಮಾ ಏತ ನೀರಾವರಿ (ಆಫ್ಜಲ್ಪುರ) , ಅಮರ್ಜಾ(ಆಳಂದ್),ಚುಳುಕಿ ನಾಲಾ(ಬಸವಕಲ್ಯಾಣ್), ಕಾರಂಜಾ(ಬೀದರ್), ಚಂದ್ರಂಪಳ್ಳಿ(ಚಿಂಚೋಳಿ), ಲೋವರ್ ಮುಲ್ಲಾ ಮರಿ(ಚಿಂಚೋಳಿ), ಅಪ್ಪರ್ ಮುಲ್ಲಾ ಮರಿ(ಹುಮ್ನಾಬಾದ್), ಗಂಡೋರಿನಾಲಾ(ಕಮಲಪುರ್), ಬೆಣ್ಣೆ ತೊರ(ಚಿತಾಪುರ್), ಹತ್ತಿಕುಣಿ(ಯಾದಗಿರಿ), ಸೌದಾಗರ್ (ಯಾದಗಿರ) 
   
ಕರ್ನಾಟಕ ನೀರಾವರಿ ನಿಗಮ ವೃತ್ತ ಕಛೇರಿ 01, 06 ವಿಭಾಗ ಕಚೇರಿಗಳನ್ನು ಒಳಗೊಂಡಿರುತ್ತದೆ.  ಕಲ್ಬುರ್ಗಿ ವ್ಯಾಪ್ತಿಗೆ 03 ಜಿಲ್ಲೆಗಳು 18 ತಾಲೂಕ, 14 ವಿಧಾನಸಭಾ ಕ್ಷೇತ್ರಗಳು, 02 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುತ್ತವೆ.
        
        1972-73 ರಿಂದ 2024-25 ವರೆಗೆ ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದಿಂದ ಯೋಜನೆಗಳನ್ನು ರೂಪಿಸಲಾಯಿತು 03 ಜಿಲ್ಲೆಗಳಲ್ಲಿ 75 ಸಾವಿರ ಹೆಕ್ಟಾರ್ ಜಮೀನುಗಳಿಗೆ ನೀರು ಒದಗಿಸಲು ಮಧ್ಯಮ ಕೆರೆ (ಡ್ಯಾಮ್ ) ನಿರ್ಮಾಣ ಮಾಡಲಾಯಿತು,       ಕೆರೆ ಇದೆ, ನೀರಿದೆ, ಕಾಲುವೆಗಳಿವೆ, ರೈತರ ಹೊಲಗಳಿಗೆ ನೀರು ಮುಟ್ಟಿಲ್ಲಾ ಏಕೆ? ?         

                 ನೀರಾವರಿ ಸೌಲಭ್ಯ ಓದಗಿಸುವಲ್ಲಿ ಕರ್ನಾಟಕ ರಾಜ್ಯ ಸರ್ಕಾರ ವಿಫಲವಾಗಿದೆ…..  ವಿತರಣಾ ಕಾಲುವೆ, ಮರಿ ಕಾಲುವೆಯಿಂದ ನೀರನ್ನು ಸದುಪಯೋಗ ಪಡೆಸಿಕೊಳ್ಳುವ ಸಲುವಾಗಿ ಜಾಗೃತಿಯ ಕೊರತೆ ಕಂಡು ಬರುತ್ತದೆ ಮತ್ತು ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಸಂಪೂರ್ಣವಾಗಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ರೈತರು ಎಚ್ಚೆತ್ತುಕೊಂಡು ಸಂಗ್ರಹವಾಗಿಟ್ಟ ನೀರನ್ನು ಬಳಸಿಕೊಳ್ಳಲು ಸನ್ನದ್ಧರಾಗಬೇಕಿದೆ.   

             ನಾವು ಎಚ್ಚರಗೊಳ್ಳುವುದಲ್ಲದೆ ಜವಾಬ್ದಾರಿಯುತ ಅಧಿಕಾರ ಹೊಂದಿದವರನ್ನು ಎಚ್ಚರಿಸಬೇಕಾಗಿದೆ. ಯಾವುದೇ ಪಕ್ಷಗಳ ಸರ್ಕಾರಗಳು ಆಡಳಿತಕ್ಕೆ ಬಂದರೂ ನೀರಾವರಿ ಕುರಿತು ಗಮನಹರಿಸದೆ… ಇರುವುದು ರೈತರ ದುರದೃಷ್ಟಕರ ಸಂಗತಿಯಾಗಿದೆ.

ನೀರು ಬಳಕೆದಾರರ ಸಂಘಗಳು, ಕಾಡ ಕಛೇರಿ, ಶಾಸಕರು, ಲೋಕಸಭೆ ಸದಸ್ಯರುಗಳು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಹಾಗೂ ಗ್ರಾಮದ ಪ್ರಮುಖರು ನೀರಾವರಿ ಸೌಲಭ್ಯ ಪಡೆಯಲು ಅವಿರತ ಹೋರಾಟ ಮಾಡುವುದು ಅವಶ್ಯಕವಾಗಿದೆ. ನದಿಗಳ ನೀರನ್ನು ಬಳಸಿಕೊಳ್ಳುವಲ್ಲಿ ರಾಜ್ಯ ರಾಜ್ಯಗಳ ಮಧ್ಯ ಸಂಘರ್ಷ ನಡೆಯುತ್ತಿದೆ,  ಆದರೆ ನಾವುಗಳು ಸಂಗ್ರಹವಾಗಿದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ  ದಯಮಾಡಿ ಕರ್ನಾಟಕ ಸರ್ಕಾರವೂ  ಕಾಲುವೆ, ವಿತರಣಾ ಕಾಲುವೆ, ಸಣ್ಣ ಸಣ್ಣ ಕಾಮಗಾರಿಗಳನ್ನು ಸರಿಪಡಿಸಿ ಮೇಲೆ ತಿಳಿಸಿದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳ್ಳುವಂತೆ ಕರ್ನಾಟಕ ನೀರಾವರಿ ನಿಗಮ ಮಂಡಳಿಯವರು ಒಳ್ಳೆಯ ರೀತಿಯಿಂದ ಕೆಲಸ ಮಾಡಿದ್ದೆ ಆದರೆ ಕಡಿಮೆ ನೀರು ಅಧಿಕ ಇಳುವರಿ, ಒಳ್ಳೆಯ ಬೆಳೆ, ಪ್ರಾಣಿ,ಪಕ್ಷಿ,ಪರಿಸರ ಹಾಗೂ “ಹಸಿರು ನಾಡು“ಎಂದು  ಘೋಷಿಸುವಂತೆ ತಾವೆಲ್ಲರೂ ಆಗ್ರಹಿಸಬೇಕೆಂದು ವಿನಂತಿ..
        
   _ಭೀಮಶೆಟ್ಟಿ  ಮುಕ್ಕಾ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!