ಹುಮನಾಬಾದ.30.ಏಪ್ರಿಲ್.25:- ಇಂದು ಮಹಾ ಮಾನವತಾವಾದಿ, ಕರ್ನಾಟಕ ರಾಜ್ಯದ ಸಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣ ನವರ 892ನೇ ಜಯಂತ್ಯೋತ್ಸವದ ಪ್ರಯುಕ್ತ *ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಾಜಶೇಖರ ಬಿ.ಪಾಟೀಲ್ ರವರ* ಗೃಹ ಕಛೇರಿಯಲ್ಲಿ ಮತ್ತು ಹುಮನಾಬಾದ ಪಟ್ಟಣದ ಬಸವೇಶ್ವರ ವೃತ್ತಕ್ಕೆ ಜನಪ್ರೀಯ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಭೀಮರಾವ್ ಬಿ.ಪಾಟೀಲ್ ರವರ ಸುಪೂತ್ರರು ಹಾಗೂ ಯುವ ನಾಯಕರಾದ ಶ್ರೀಯುತ ರುದ್ರಂ ಬಿ ಪಾಟೀಲ್ ರವರು ವಿಶ್ವಗುರು ಬಸವಣ್ಣ ನವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಜಯಂತ್ಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಪಾರ್ವತಿಬಾಯಿ ಶೇರಿಕಾರ, ಉಪಾಧ್ಯಕ್ಷರಾದ ಎಮ್ ಡಿ ಮುಕರಮ್, ಪ್ರಮುಖರಾದ ಅಫಸರ್ ಮಿಯ್ಯಾ, ಮಲ್ಲಿಕಾರ್ಜುನ್ ಮಾಶಟ್ಟಿ, ಉಮೇಶ್ ಜಮಗಿ, ಮಹೇಶ ಅಗಡಿ, ದತ್ತು ಪರಿಟ್, ಸಚಿನ್ ಮಠಪತಿ, ಮಲ್ಲಿಕಾರ್ಜುನ್ ಶರ್ಮಾ, ಧರ್ಮರೆಡ್ಡಿ, ಖಾಲಿದ್, ಬಾಬುರಾವ್ ಪರಮಶಟ್ಟಿ, ದಟ್ಟುಕುಮಾರ ಚಿದ್ರಿ, ವಿಜಯ ಪವಾರ, ಇತರರಿದ್ದರು.
