09/06/2025 4:28 PM

Translate Language

Home » ಲೈವ್ ನ್ಯೂಸ್ » ಕನ್ನಡ ಹೊರಾಟಗಾರ ಶರಣಪ್ಪ ಮುಡಿಗೆರಿದ ಗೌರವ ಡಾಕ್ಟರೇಟ….!

ಕನ್ನಡ ಹೊರಾಟಗಾರ ಶರಣಪ್ಪ ಮುಡಿಗೆರಿದ ಗೌರವ ಡಾಕ್ಟರೇಟ….!

Facebook
X
WhatsApp
Telegram


06.ಜಿ.25.ಬೆಂಗಳೂರು : ಇಂದು ನಡೆಲಿರುವ ಗೌರವ ಡಾಕ್ಟರೇಟ ಕಾರ್ಯಕ್ರಮ…..ಅಪ್ಪಟ ಕನ್ನಡಿಗ ಮಹಾರಾಷ್ಟ್ರ ಮರಾಠಿ ಪ್ರಭಾವ ಇರುವ ನಾಡಿನಲ್ಲಿ ಕನ್ನಡ ಕೈಂಕರ್ಯ ಗೈಯುತ್ತ ಅನೇಕ ಪ್ರಕರಣಗಳು ಎದ್ದುರಿಸಿದ ಧೀಮಂತ ಹೋರಾಟಗಾರ ಬಸವಕಲ್ಯಾಣ ಪ್ರಾಂತ್ಯದಲ್ಲಿ ಅನೇಕ ಸಾಮಾಜಿ. ಸಾಂಸ್ಕೃತಿಕ ಕನ್ನಡ ಸಮಾರಂಭ ಆಯೋಜನೆ ಮಾಡುತ್ತ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕನ್ನಡ ಹೊರಾಟಗಾರ ಶರಣಪ್ಪ ಕೆ ಗದಲೆಗಾಂವ ಅವರಿಗೆ ತಮಿಳನಾಡಿನ ಅಸೀಯನ ಅಂತರರಾಷ್ಟ್ರೀಯ ಸಂಸ್ಕೃತಿಯ ಸಂಶೋಧನೆ ವಿಶ್ವವಿದ್ಯಾಲಯ ಅವರ ಸಮಾಜಿಕ ಕೊಡುಗೆಯನ್ನು ಗುರುತಿಸಿ ಶನಿವಾರ ಬೆಂಗಳೂರನಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.


ಶರಣಪ್ಪ ಗದಲೆಗಾಂವ ಮೂಲತ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಬರುವ  ಗದಲೆಗಾಂವ ಎಂಬ ಕುಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಬಡತನದ ಬೇಗೆಯಿಂದ ಬಳಲಿ. ಜೀವನದಲ್ಲಿ ಬಡತನ ಹೋಗಲಾಡಿಸಲು ಶಿಕ್ಷಣ ಒಂದೇ ಉಪಾಯ ಎಂದು ತಿಳಿದು ಬಸವಕಲ್ಯಾಣ ತಾಲೂಕಿನಲ್ಲಿ ಮುಗಿಸಿ ಇಂದು ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಲೇ ಇಂದು ಬಸವಕಲ್ಯಾಣ ತಾಲೂಕಿನಲ್ಲಿ ಕನ್ನಡಿಗರನ್ನು ಸಂಘಟಿಸಿ ಅನೇಕ ಮಾದರಿಯ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಶರಣಪ್ಪ  ಅವರದು.


ಶರಣಪ್ಪ ಅವರು ನಮ್ಮ ಚಿಕ್ಕ ವಯಸ್ಸಿನಲ್ಲೇ ಎಲ್ಲವನ್ನೂ ಕಂಡುಕೊಂಡೆ ಗ್ರಾಮದಲ್ಲಿ ಜೀವನ ನಡೆಸಲು ಆಗದಂತಹ ಪರಿಸ್ಥಿತಿಯಲ್ಲಿ ನಮಗೆ ಅನೇಕರು ಗ್ರಾಮದ ಪ್ರಮುಖ ವ್ಯಕ್ತಿಗಳು ನನ್ನ ಜೀವನದ ತಿರುವಿಗೆ ಸಹಕಾರ ನೀಡಿದ ಎಲ್ಲಾ ಆತ್ಮೀಯ ಹಿರಿಯರಿಗೆ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು  ಗದಲೆಗಾಂವ ಗ್ರಾಮದ ಹಿರಿಯರಿಗೆ ಅರ್ಪಿಸುತ್ತೇನೆ ಎಂದು ಭಾವುಕರಾಗಿ  ಶರಣಪ್ಪ ನುಡಿದರು.  ನನಗೆ ಕಾಲೇಜು ಫೀಸ್ ಕಟ್ಟಲು ಆಗದ ಪರಿಸ್ಥಿತಿಯಲ್ಲಿ ನನಗೆ ಸಹಾಯ ಮಾಡಿದ ಹಿರಿಯರಿಗೆ ಯಾವತ್ತೂ ಜೀವನದಲ್ಲಿ ಮರೆಯುವುದಿಲ್ಲ.

ಅವರ ಋಣಭಾರದಿಂದ ಮಾತ್ರ ನಾನು ಇಂದು ಒಬ್ಬ ಉನ್ನತವಾದ ಮಟ್ಟಕ್ಕೆ ಬೆಳೆಯಲು ಕಾರಣರಾದರು. ಅವರು ನನಗೆ ಸಹಾಯ ಮಾಡಲಿಲ್ಲ ಅಂದು ಅಂದರೆ ಇಂದು ನಾನು ಗ್ರಾಮದಲ್ಲಿಯೇ ರೈತನಾಗಿ ದುಡಿಯಬೇಕಾಗಿತು.  ಬಂದುಕಬೇಕಾಗಿತು ಹೀಗಾಗಿ ನನಗೆ ಜೀವನದಲ್ಲಿ ಸಹಾಯ ಸಹಕಾರ ನೀಡಿದ ಎಲ್ಲಾ ಮಹನೀಯರಿಗೂ ತುಂಬುಹೃದಯದಿಂದ ಧನ್ಯವಾದಗಳು ತಿಳಿಸುವೆ ಎಂದು ನುಡಿದರು.


ರಾಜ್ಯಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಅನುಭವಕ್ಕೆ ಕೈಬಿಸಿ ಕರೆಯುತ್ತಿವೆ ಹೀಗಾಗಿ ಇಂದು ಯುವ ಜನಾಂಗಕ್ಕೆ ಶರಣಪ್ಪ ಗದಲೆಗಾಂವ ಅವರು ಮಾದರಿಯ ವ್ಯಕ್ತಿಯಾಗಿದ್ದಾರೆ. ತಮ್ಮನ್ನು ಕಾಣಲು ಬಂದ ಜನ ಸಾಮಾನ್ಯರಿಗೂ ತಮ್ಮ ಕೈಲಾದ ಸಹಾಯವನ್ನು ಮಾಡುವುದು ಮರೆಯುವುದಿಲ್ಲ. ಎಲ್ಲರೊಂದಿಗೆ ತಾವೊಬ್ಬರು ಎಂದು ಎಲ್ಲರೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದ ಶರಣಪ್ಪ ಗದಲೆಗಾಂವ ಮಾದರಿ ವ್ಯಕ್ತಿ ಎಂದರು ಉತ್ಪ್ರೇಕ್ಷೆ ಯಾಗದು.. ಹಾಗೇ ಶರಣಪ್ಪ ಗದಲೆಗಾಂವ ಅವರ ಸೇವೆಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಬರಲಿ ಎಂದು ಶುಭೋದಯ ಮೀಡಿಯಾ ಹಾರೈಸುತ್ತದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!