ಬೀದರ, ನವೆಂಬರ್.25 :- 2024-25ನೇ ಸಾಲಿನಲ್ಲಿ ಎನ್ಆರ್ಎಲ್ಎಮ್ ಯೋಜನೊಳಗೊಂಡ ಸ್ವ-ಸಹಾಯ ಗುಂಪುಗಳಿಗೆ ಜಿಲ್ಲಾ ಪಂಚಾಯತ ಬೀದರ ಮತ್ತು ಡಿಸಿಸಿ ಬ್ಯಾಂಕ್ಗಳ ಮೂಲಕ
ಶೂನ್ಯ ಬಡ್ಡಿದರ ಅನ್ವಯವಾಗುವಂತೆ ಸಾಲ ಸೌಲಭ್ಯ ವಿತರಣೆ ಕುರಿತು ಸೋಮವಾರ ಡಿ.ಸಿ.ಸಿ ಬ್ಯಾಂಕಗಳ ಸಹಾಯಕ ಅಭಿವೃದ್ದಿ ಅಧಿಕಾರಿ (ಂಆಔ’S) ಗಳು ಮತ್ತು ಸಂಜೀವಿನಿ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರಿಗೆ ಬೀದರ ಡಿ.ಸಿ.ಸಿ ಬ್ಯಾಂಕ್ ಸಭಾಂಗಣ ಸಭೆ ಜರುಗಿಸಲಾಯಿತು.
ನವೆಂಬರ್.20 ರಂದು ಅರಣ್ಯ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತವಾರಿ ಸಚಿವರಾದ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಗ್ರಾಮೀಣ ಪ್ರದೇಶದ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಜಿಲ್ಲಾ ಪಂಚಾಯತ ಬೀದರ ಮತ್ತು ಡಿಸಿಸಿ ಬ್ಯಾಂಕ್ಗಳ ಮೂಲಕ ಶೂನ್ಯ ಬಡ್ಡಿದರ ಅನ್ವಯವಾಗುವಂತೆ ಸಾಲ ಸೌಲಭ್ಯ ವಿತರಣೆ ಕುರಿತು ಚರ್ಚಿಸಿರುತ್ತಾರೆ.
ಸಭೆಯಲ್ಲಿ ಪ್ರತಿ ತಿಂಗಳಿಗೆ ಅನುಗುಣವಾಗುವಂತೆ ಒಂದು ಸಾವಿರ ವರ್ಷದ ಅಂತ್ಯಕ್ಕೆ ಕನಿಷ್ಠ 3 ರಿಂದ 4 ಸಾವಿರ ಸ್ವ-ಸಹಾಯ ಗುಂಪುಗಳಿಗೆ ಬ್ಯಾಂಕ ಲಿಂಕೇಜ್ ಮಾಡಲು ನಿರ್ದೇಶನ ನೀಡಿರುತ್ತಾರೆ ಮತ್ತು ಯೋಜನೆ ಅನುಷ್ಠಾನದ ಕುರಿತು ಭಿತ್ತಿ ಪತ್ರ ಬಿಡುಗಡೆ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು, ಬೀದರ ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಉಪ ಪ್ರಧಾನ ವ್ಯವಸ್ಥಾಪಕರು ಮತ್ತು ಜಿಲ್ಲಾ ವ್ಯವಸ್ಥಾಪಕರು ಎನ್ಆರ್ಎಲ್ಎಮ್ ಜಿಲ್ಲಾ ಪಂಚಾಯತ ಬೀದರ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
