ಉತ್ತರ ರೈಲ್ವೆಯು ಕತ್ರಾ ಮತ್ತು ಶ್ರೀನಗರ ನಡುವೆ ವಂದೇ ಭಾರತ್ ರೈಲುಗಳ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಜೂನ್ 6 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕತ್ರಾದಿಂದ ಹಸಿರು ನಿಶಾನೆ ತೋರಿದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ರೈಲು ಮೂಲಕ ಸಂಪರ್ಕಿಸುತ್ತದೆ. ಕತ್ರಾದಿಂದ ಬಾರಾಮುಲ್ಲಾಗೆ ಅಥವಾ ಪ್ರತಿಯಾಗಿ ರೈಲುಗಳನ್ನು ಹತ್ತಿದ ಪ್ರಯಾಣಿಕರು ಅಪಾರ ಉತ್ಸಾಹ ವ್ಯಕ್ತಪಡಿಸಿದರು, ಅನೇಕರು ರೈಲಿನಲ್ಲಿ ಕಾಶ್ಮೀರಕ್ಕೆ ಪ್ರಯಾಣಿಸುವ ಅವಕಾಶಕ್ಕಾಗಿ ಕಾತುರದಿಂದ ಕಾಯುತ್ತಿದ್ದೆವು ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ವೇಳೆಗೆ ರೈಲುಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪಿದ್ದರಿಂದ ವಾಣಿಜ್ಯ ಕಾರ್ಯಾಚರಣೆಯ ಮೊದಲ ದಿನ ಸರಾಗವಾಗಿ ನಡೆಯಿತು. ರೈಲು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಹೆಚ್ಚಿನ ಸೀಟುಗಳು ಬುಕ್ ಆಗಿದ್ದರಿಂದ ಸಾರ್ವಜನಿಕರ ಉತ್ಸಾಹ ಹೆಚ್ಚಾಗಿತ್ತು. ಉತ್ತರ ರೈಲ್ವೆಯ ಪ್ರಕಾರ, ಕತ್ರಾ ಮತ್ತು ಶ್ರೀನಗರ ನಡುವೆ ಎರಡು ವಂದೇ ಭಾರತ್ ರೈಲು ಸೆಟ್ಗಳು ಹಗಲಿನಲ್ಲಿ ನಾಲ್ಕು ಟ್ರಿಪ್ಗಳನ್ನು ಮಾಡಿದ್ದವು. ಈ ರೈಲಿನಲ್ಲಿ ಚೇರ್ ಕಾರ್ (CC) ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ (EC) ಎಂಬ ಎರಡು ಪ್ರಯಾಣ ತರಗತಿಗಳಿವೆ – ಟಿಕೆಟ್ಗಳ ಬೆಲೆ 715 ರೂಪಾಯಿಗಳು ಮತ್ತು 1,320 ರೂಪಾಯಿಗಳು.
