09/06/2025 6:54 AM

Translate Language

Home » ರಾಜ್ಯ » ಕಕರಸಾನಿ: ಚಾಲಕ ಹಾಗೂ ತಾಂತ್ರಿಕ ಸಹಾಯಕ
ಹುದ್ದೆಗೆ ಹೊರಗುತ್ತಿಗೆ ನೇಮಕಾತಿಗಾಗಿ ಸಂದರ್ಶನ

ಕಕರಸಾನಿ: ಚಾಲಕ ಹಾಗೂ ತಾಂತ್ರಿಕ ಸಹಾಯಕ
ಹುದ್ದೆಗೆ ಹೊರಗುತ್ತಿಗೆ ನೇಮಕಾತಿಗಾಗಿ ಸಂದರ್ಶನ

Facebook
X
WhatsApp
Telegram

ಬೀದರ, ನವೆಂಬರ್.26 :- ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ದೋಶ ಸಹಕಾರ ಸಂಘ ನಿಯಮಿತ, ಜಿಲ್ಲಾಧಿಕಾರಿಗಳ ಕಚೇರಿ, ಬೀದರ ಅವರ ಮೂಲಕ ಹೊರಗುತ್ತಿಗೆಯ ಮೇಲೆ ನಿಯೋಜಿಸಿಕೊಳ್ಳಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ ವಿಭಾಗದ ವ್ಯಾಪ್ತಿಯ ಬೀದರ-1, ಬೀದರ-2, ಭಾಲ್ಕಿ, ಔರಾದ, ಬಸವಕಲ್ಯಾಣ ಮತ್ತು ಹುಮನಾಬಾದ ಘಟಕಗಳ ಬಸ್ ಚಾಲನೆಗೆ 100 ಜನ ಚಾಲಕರು ಹಾಗೂ ವಾಹನಗಳ ನಿರ್ವಹಣೆಗೆ 50 ಜನ ತಾಂತ್ರಿಕ ಸಹಾಯಕರು ಬೇಕಿರುವುದರಿಂದ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಸಂದರ್ಶನವನ್ನು ಏರ್ಪಡಿಸಲಾಗಿದೆ.


ಕಾರಣ ದಿನಾಂಕ: 02-12-2024 ರಿಂದ 04-12-2024 ರವರೆಗೆ ಚಾಲಕ ಹುದ್ದೆಗೆ ಹಾಗೂ 06-12-2024 ರಿಂದ 07-12-2024 ರವರೆಗೆ ತಾಂತ್ರಿಕ ಸಹಾಯಕ ಹುದ್ದೆಗೆ ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಛೇರಿಯ ಕಛೇರಿ ಸಮಯದಲ್ಲಿ ನೇರ ಸಂದರ್ಶನ ನಡೆಸಲಾಗುತ್ತಿದೆ.

ಆಯ್ಕೆ ಸಮಿತಿ ಸಮ್ಮುಖದಲ್ಲಿ ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು, ಅಭ್ಯರ್ಥಿಗಳ ಹಾಜರುಪಡಿಸಬೇಕಾದ ದಾಖಲಾತಿಗಳು ಮತ್ತು ಅನುಸರಿಸಬೇಕಾದ ಷರತ್ತು ನಿಬಂಧನೆಗಳ ಹಾಗೂ ಹೆಚ್ಚಿನ ವಿವರಗಳಿಗಾಗಿ ಸರಕಾರದ ವೆಬ್‌ಸೈಟ್  www.bidar.nic.in     ನ್ನು ಸಂಪರ್ಕಿಸಬಹುದಾಗಿದೆ ಎಂದು ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ದೋಶ ಸಹಕಾರ ಸಂಘ ನಿಯಮಿತದ ಕಾರ್ಯದರ್ಶಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!