09/06/2025 6:33 AM

Translate Language

Home » ಲೈವ್ ನ್ಯೂಸ್ » ಔರಾದ ಮತ್ತು ಕಮಲನಗರ ಎರಡು ಕ್ಷೇತ್ರಕ್ಕೆ 11,218 ಮನೆ ಮಂಜೂರು: ಶಾಸಕ ಪ್ರಭು ಚವಾಣ್

ಔರಾದ ಮತ್ತು ಕಮಲನಗರ ಎರಡು ಕ್ಷೇತ್ರಕ್ಕೆ 11,218 ಮನೆ ಮಂಜೂರು: ಶಾಸಕ ಪ್ರಭು ಚವಾಣ್

Facebook
X
WhatsApp
Telegram

ಔರಾದ (ಬಾ), 05.ಪ.25: ಬೀದರ್ ಜಿಲ್ಲೆಯ ಔರಾದ್ ತಾಲೂಕೆಗೆ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಔರಾದ್ ಕ್ಷೇತ್ರಕ್ಕೆ 11,217 ಮನೆಗಳು ಮಂಜೂರಾಗಿವೆ ಎಂದು ಶಾಸಕ ಪ್ರಭು ಚವಾಣ್ ತಿಳಿಸಿದ್ದಾರೆ.

ಕ್ಷೇತ್ರದ ನಿವೇಶನ ರಹಿತರಿಗೆ ಮನೆ ಮಂಜೂರು ಮಾಡುವಂತೆ ತಾವು ಪದೇ ಪದೇ ಮಾಡಿಕೊಂಡ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಔರಾದ್ ತಾಲ್ಲೂಕಿಗೆ 6,776 ಹಾಗೂ ಕಮಲನಗರ ತಾಲ್ಲೂಕಿಗೆ 4,441 ಮನೆಗಳಿಗೆ ಮಂಜೂರಾತಿ ಸಿಕ್ಕಿದೆ.

ಈ ಯೋಜನೆಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ₹ 1.75 ಲಕ್ಷ ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ₹ 1.20 ಲಕ್ಷ ಸಹಾಯಧನ ನೀಡಲಾಗುತ್ತದೆ. ಈ ಹಣ ಒಟ್ಟು 3 ಕಂತುಗಳಲ್ಲಿ ಬಿಡುಗಡೆಯಾಗುತ್ತದೆ.

ಅರ್ಹರಿಗೆ ಹಂಚಿಕೆ: ತಾವು ಈಚೆಗೆ ನಡೆಸಿದ ಗ್ರಾಮ ಸಂಚಾರದ ವೇಳೆ ಅನೇಕ ಜನ ತಮಗೆ ಮನೆಯಿಲ್ಲ ಎಂದು ದೂರು ನೀಡಿದ್ದಾರೆ. ಮನೆ ಮಾಡಿಕೊಳ್ಳಲು ದಲ್ಲಾಳಿಗಳು ಹಣದ ಬೇಡಿಕೆ ಇಡುತ್ತಿರುವ ಮಾಹಿತಿಯೂ ಇದೆ. ಹೀಗಾಗಿ ಸಂಬಂಧಿತ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿ, ನಿವೇಶನ ರಹಿತರಿಗೆ ಮಾತ್ರ ಮನೆ ಮಂಜೂರು ಮಾಡಬೇಕು.

ಅದರಲ್ಲಿ ಲೋಪವಾದರೆ ಸಂಬಂಧಿತ ಪಂಚಾಯಿತಿ ಪಿಡಿಒ ಅವರನ್ನು ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಬಹಳಷ್ಟು ಗುಡಿಸ್ಲ್ ಇವೆ ಆ ಕಾರಣಕ್ಕೆ ಮತ್ತೆ ಆವಾಸ್ ಯೋಜನೆ ಮೆಗಳು ಮಂಜೂರು ಮಾಡಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!