ಇಂದು ಔರಾದನ ಪ್ರವಾಸಿ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜನ್ಮೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆ ನಡೆಯಲಾಯಿತು.

ದಿನಾಂಕ 24 ಫೆಬ್ರವರಿ ಬೆಳಿಗ್ಗೆ ಕನ್ನಡಾಂಬೆ ವೃತ್ತದಿಂದ ಬಸವೇಶ್ವರ ವೃತ್ತ ವರೆಗೆ ಭವ್ಯ ಮೆರವಣಿಗೆ ತೆಗೆದು ವೇದಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ನಿರ್ಧರಿಸಲಾಯಿತು. ಈ ಸಭೆಯಲ್ಲಿ NSYF ರಾಜ್ಯ ಸಂಚಾಲಕ ಶಿವಕುಮಾರ ಕಾಂಬಳೆ, ಸಂಭಾಜಿ ಬ್ರಿಗೇಡ್ ನ ಜಿಲ್ಲಾ ಅಧ್ಯಕ್ಷರಾದ ಸತೀಶ ವಾಸ್ರೆ, ತಾಲೂಕಾ ಅಧ್ಯಕ್ಷರಾದ ಗೋವಿಂದ ಪಾಟೀಲ, ಮುಖಂಡರಾದ ಪ್ರಕಾಶ ಭಂಗಾರೆ, ದತ್ತಾ ಪಾಟೀಲ, ವಿವಿಧ ಸಂಘಟನೆಯ ಪದಾಧಿಕಾರಿಗಳು ಮತ್ತು ಎಲ್ಲಾ ಶಿವಪ್ರೇಮಿಗಳು ಉಪಸ್ಥಿತರಿದ್ದರು.
