ಬೀದರ,10.ಜನವರಿ.25.:- ಬೀದರ ಜಿಲ್ಲೆಯ ಕೃಷಿಕ ಸಮಾಜದ 2025-26 ರಿಂದ 2029-30ನೇ ಸಾಲಿಗೆ 5 ವರ್ಷಗಳ ಅವಧಿಗೆ ಜಿಲ್ಲಾ ಕೃಷಿಕ ಸಮಾಜ ಬೀದರ ಘಟಕದ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಉಪಾಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ಪ್ರಧಾನ ಕಾರರ್ಯದರ್ಶಿ ಹಾಗೂ ರಾಜ್ಯ ಪ್ರತಿನಿಧಿ ಪದಾಧಿಕಾರಿಗಳಿಗೆ ಚುಣಾವಣೆಯು ಚುಣಾವಣಾ ಅಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರು ಬೀದರ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 10-01-2025 ರಂದು ಜಂಟಿ ಕೃಷಿ ನಿರ್ದೇಶಕರ ಕಾರ್ಯಲಯದಲದಲ್ಲಿ ಜರುಗಿತು.
ಬೀದರ ಜಿಲ್ಲಾ ಕೃಷಿಕ ಸಮಾಜದ ಪದಾಧಿಕಾರಿಗಳ ಚುಣಾವಣೆಯಲ್ಲಿ ಜಿಲ್ಲಾ ಅಧ್ಯಕ್ಷರು ಸಿದ್ರಾಮಯ್ಯಾ ಎಸ್.ಸ್ವಾಮಿ , ಜಿಲ್ಲಾ ಉಪಾಧ್ಯಕ್ಷರು ಉಮಾಕಾಂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ವಾಲೆ, ಜಿಲ್ಲಾ ಖಜಾಂಚಿ ಗೋಂವಿಂದ ರೆಡ್ಡಿ ಹಾಗೂ ರಾಜ್ಯ ಪ್ರತಿನಿಧಿಯಾಗಿ ವಿಶ್ವನಾಥ ಮಾಲಿ ಪಾಟೀಲ್ ಅವಿರೋಧವಾಗಿ ಆಯ್ಕೆಯಾದರು.
ಈ ಚುಣಾವಣೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲುಕಿನ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರತಿನಿಧಿರವರು ಪಾಲ್ಗೊಂಡಿದರು.