08/06/2025 11:51 PM

Translate Language

Home » ಲೈವ್ ನ್ಯೂಸ್ » ಏಪ್ರಿಲ್ 2ಕೆ ವಿಶ್ವವಿದ್ಯಾನಿಲಯ 12ನೇ ಘಟಿಕೋತ್ಸವ.!

ಏಪ್ರಿಲ್ 2ಕೆ ವಿಶ್ವವಿದ್ಯಾನಿಲಯ 12ನೇ ಘಟಿಕೋತ್ಸವ.!

Facebook
X
WhatsApp
Telegram

ದಾವಣಗೆರೆ.28.ಮಾರ್ಚ್.25:- ಏಪ್ರಿಲ್ 2ಕೆ ಬೆಳಿಗ್ಗೆ 11.30ಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ 12ನೇ ಘಟಿಕೋತ್ಸವವು   ಜ್ಞಾನಸೌಧ ಶಿವಗಂಗೋತ್ರಿ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ವಹಿಸುವರು.

ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಭಾರತೀಯ ಜೀವರಸಾಯನಶಾಸ್ತ್ರಜ್ಞ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪದ್ಮಭೂಷಣ ಪ್ರೊ. .ಪಿ.ಬಲರಾಮ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರು.

ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಡಿ.ಕುಂಬಾರ, ಕುಲಸಚಿವ ಪ್ರೊ. ರಮೇಶ ಸಿ.ಕೆ, ಕುಲಸಚಿವರು, ಪ್ರೊ. ಆರ್.ಶಶಿಧರ (ಪ್ರಭಾರ), ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು ಭಾಗವಹಿಸುವರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!