ಬೀದರ್ ನಗರದ ಮಂಗಲಪೇಟ್ (ಮಂಗಳಪೇಟ್) ನಲ್ಲಿರುವ ಎಸ್ಟಿ ಫೌಲ್ ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್ ನಲ್ಲಿ ಇಂದು ನಡೆದ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ *ಶ್ರೀ ಬಂಡೆಪ್ಪ ಖಾಶೆಂಪುರ್* ರವರು ಪಾಲ್ಗೊಂಡು, ಮೆಥೋಡಿಸ್ಟ್ ಚರ್ಚ್ ನ ಜಿಲ್ಲಾ ಮೇಲ್ವಿಚಾರಕರಾದ ಶ್ರೀ ರೆವರೆಂಡ್ ನೆಲ್ಸನ್ ಸುಮಿತ್ರಾರವರನ್ನು ಭೇಟಿಯಾಗಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ವೇಳೆ ಸಚಿವರಾದ ಶ್ರೀ ರಹಿಂಖಾನ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ರಮೇಶ್ ಪಾಟೀಲ್ ಸೋಲ್ಪೂರ್, ಶ್ರೀ ಸುದರ್ಶನ್ ಸುಂದರರಾಜ್ ರವರು ಸೇರಿದಂತೆ ಅನೇಕರಿದ್ದರು.
ಬಳಿಕ ಅವರು, ಪ್ರಮುಖರಾದ ಶ್ರೀ ಸುದರ್ಶನ್ ಸುಂದರರಾಜ್, ಶ್ರೀ ವಿನಾಯಕ್, ಶ್ರೀ ರಾಜು ಕಡ್ಯಾಳ ಸೇರಿದಂತೆ ಅನೇಕರ ಮನೆಗಳಲ್ಲಿ ನಡೆದ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕೇಕ್ ಕತ್ತರಿಸುವ ಮೂಲಕ ಶುಭ ಕೋರಿದರು.
ನಂತರ ಬೀದರ್ ನಗರದ ಪೋಲಾ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಶಾಹಪೂರೆ ಪರಿವಾರದ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಳಿಕ ನಗರದಲ್ಲಿ ನಡೆದ ಪಿಎಂಜಿಎಸ್ವೈ ಇಇ ಶ್ರೀ ಶಿವಾನಂದ ಸಂಗ್ಮೆರವರ ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Source; https://www.facebook.com/share/p/1XzEFzwdzj/