ಕಲಬುರಗಿ.08.ಮಾರ್ಚ.25:- ಇಂದು ಕಲಬುರಗಿಯೆಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಜೇವರ್ಗಿಯಲ್ಲಿ ನಡೆದ “ಕಲ್ಯಾಣ ಪಥ” ಯೋಜನೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಸಾಗರ್ ಖಂಡ್ರೆ ಅವರು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಉಪ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ ಅವರು, ಸಚಿವರುಗಳಾದ ಶ್ರೀ ಪ್ರಿಯಾಂಕ ಖರ್ಗೆ, ಶ್ರೀ ಶರಣ ಪ್ರಕಾಶ ಪಾಟೀಲ್, ಶ್ರೀ ರಹೀಮ್ ಖಾನ್, ಶ್ರೀ ಶರಣ ಬಸಪ್ಪಾ ದರ್ಶನಾಪುರ್, ಕೆಕೆಅರ್ ಡಿಬಿ ಅಧ್ಯಕ್ಷರಾದ ಶ್ರೀ ಅಜಯ ಸಿಂಗ್, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
