09/06/2025 12:46 PM

Translate Language

Home » ಲೈವ್ ನ್ಯೂಸ್ » ಉ.ಪ್ರ.ಬೀದರ ಯಾತ್ರಿಕರ ದುರ್ಮರಣ ಮೃತರ ಶವಗಳು ಸ್ವಗ್ರಾಮಕ್ಕೆ ತಲುಪಲಿವೆ.

ಉ.ಪ್ರ.ಬೀದರ ಯಾತ್ರಿಕರ ದುರ್ಮರಣ ಮೃತರ ಶವಗಳು ಸ್ವಗ್ರಾಮಕ್ಕೆ ತಲುಪಲಿವೆ.

Facebook
X
WhatsApp
Telegram

ಬೀದರ.23.ಫೆಬ್ರುವರಿ.25:- ಬೀದರ ನಗರದ ಲಾಡಗೇರಿ ಬಡಾವಣೆಯ 14 ನಿವಾಸಿಗಳು ಪ್ರಯಾಗರಾಜಿಗೆ ಪ್ರಯಾಣ ಕೈಗೊಂಡಿರುತ್ತಾರೆ, ದಿನಾಂಕ 21.02.2025 ರಂದು ಸದರಿ ಪ್ರವಾಸಿಗಳು ಕ್ರೊಸರ್ ಮೂಲಕ ಕಾಶಿ (ವಾರಣಾಸಿ) ಯಿಂದ ಪ್ರಯಾಗರಾಜಿಗೆ ಪ್ರಯಾಣಿಸಿತ್ತಿರುವ ಸಂದರ್ಭದಲ್ಲಿ ಮಿರ್ಜಾಮುರಾದ್ ಹತ್ತಿರ ಲಾರಿ ಮತ್ತು ಕ್ರೂಸರ್ ಮಧ್ಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 14 ಜನ ಪ್ರಯಾಣಿಕರ ಪೈಕಿ (1) ಸಂತೋಷ ತಂದೆ ಗೋವಿಂದ (2) ಸುನೀತಾ ಗಂಡ ಸಂತೋಷ (3) ನಿಲಮ್ಮಾ ಗಂಡ ಗೋವಿಂದ (4) ಲಕ್ಷ್ಮೀಬಾಯಿ ಗಂಡ ಸುರೇಶ (5) ಕಲಾವತಿ ಗಂಡ ವೈದ್ಯರಾಜ ಇವರುಗಳು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಹಾಗೂ ಒಬ್ಬರು ಸುಲೋಚನಾ ಗಂಡ ಚಂದ್ರಕಾಂತ ಇವರು ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಈ ಮೃತಪಟ್ಟವರ ಶವಗಳನ್ನು ಫ್ರೀಜರ್ ವಾಹನದ ಮೂಲಕ ದಿನಾಂಕ: 22-02-2025 ರಾತ್ರಿ 11:40 ಗಂಟೆಗೆ BHU Trauma Centre    ವಾರಣಾಸಿ ಆಸ್ಪತ್ರೆಯಿಂದ ಬೀದರಗೆ ಹೊರಡಿರುತ್ತವೆ. ದಿನಾಂಕ 24.02.2025 ರಂದು ಮಧ್ಯಾಹ್ನ 2:00 ಗಂಟೆಯವರೆಗೆ ಬೀದರಗೆ ತಲುಪಲ್ಲಿದಾರೆ. ಬೀದರ ಜಿಲ್ಲಾಡಳಿತವು ವಾರಣಾಸಿ ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ ಹಾಗೂ ವಾರಾಣಾಸಿ ಜಿಲ್ಲಾಡಳಿತದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


08 ಜನ ಗಾಯಾಳುಗಳ ಪೈಕಿ ಒಬ್ಬ ಗಾಯಾಳು (ಭಗವಂತ ತಂದೆ ನಂದಕುಮಾರ) ವ್ಯಕ್ತಿಯು ದಿಕ್ಕಿನ ಪ್ರಜ್ಞೆಯನ್ನು ಕಳೆದುಕೊಂಡಿರುತ್ತಾರೆ ಹಾಗೂ ಚಿಕಿತ್ಸೆಗೆ ಒಳಪಟ್ಟಿರುತ್ತಾರೆ, ಸದರಿ ವ್ಯಕ್ತಿಯ ಜೊತೆಯಲ್ಲಿ ಜಿಲ್ಲಾಡಳಿತ ವತಿಯಿಂದ ಎರಡು ಪೊಲೀಸ್ ಸಿಬ್ಬಂದಿಗಳನ್ನು ಇರಿಸಲಾಗಿರುತ್ತದೆ, ಸದರಿ ಗಾಯಾಳು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ನಂತರ ಬೀದರಗೆ ಕರೆತರಲಾಗುವುದು, ಇನ್ನುಳಿದ 07 ಜನ ಗಾಯಾಳುಗಳಾದ (1) ಅನೀತಾ ಗಂಡ ಶಂಕರ (2) ಸಾಯಿ ತಂದೆ ಶ್ರೀನಿವಾಸ (3) ಶಿವಾ ತಂದೆ ಸಂತೋಷ (4) ಗಣೇಶ ತಂದೆ ಸಂತೋಷ (5) ಖುಷಿ ತಂದೆ ಶಂಕರ (6) ಸುಜಾತಾ (7) ಕವಿತಾ ವಿಮಾನದ ಮೂಲಕ ಹೈದ್ರಾಬಾದಗೆ ಕರೆತಂದು ಹೈದ್ರಾಬಾದಿನಿಂದ ಬೀದರಗೆ ಅಂಬುಲನ್ಸ್ ಮೂಲಕ  ಕರೆತರಲು ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!