09/06/2025 7:42 PM

Translate Language

Home » ಲೈವ್ ನ್ಯೂಸ್ » ಇದು ನೀರಸ ಅಭಿವೃದ್ಧಿ ಹಾಗೂ ಶೂನ್ಯ ಬಜೆಟ್ -ಸೋಮನಾಥ ಪಾಟೀಲ

ಇದು ನೀರಸ ಅಭಿವೃದ್ಧಿ ಹಾಗೂ ಶೂನ್ಯ ಬಜೆಟ್ -ಸೋಮನಾಥ ಪಾಟೀಲ

Facebook
X
WhatsApp
Telegram

ಬೀದರ.08.ಮಾರ್ಚ.25:- ಇಂದು ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ  ಅವರು  ಮಂಡಿಸಿದ ಬಜೆಟ್ ನೀರಸ ಅಭಿವೃದ್ಧಿ ಶೂನ್ಯ ಹಾಗೂ ಒಂದೇ ಸಮುದಾಯಕ್ಕೆ ಒಲೈಸುವ ಬಜೆಟ್  ಇದು ಆಗಿದೆ ಎಂದು  ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಸೊಮನಾಥ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇಂದು ಮಂಡಿಸಿದ  ಬಜೆಟ್‌ನಲ್ಲಿ ಬೀದರ ಜಿಲ್ಲೆಯ ಯಾವುದೇ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ ಬಸವಕಲ್ಯಾಣದ ಅನುಭವ ಮಂಟಪ ಸೇರಿ ರಾಜ್ಯದ ಯಾವುದೇ ಮಠ ಮಂದಿರಕ್ಕೆ  ಬಜೆಟನಲ್ಲಿ  ಅನುದಾನ  ಮಿಸಲಿಟ್ಟಿಲ್ಲ ಇದರ ವಿಪರಿತವಾಗಿ ಅಲ್ಪ ಸಂಖ್ಯಾತರನ್ನು ಒಲೈಸುವುದಕ್ಕೆ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ, ಹೀಗಾಗಿ  ಈ ಬಜೆಟ್‌ನ್ನು ರಾಜ್ಯದ  ಬಜೆಟ್  ಅನುಸುತ್ತಿಲ್ಲ ಒಂದು ಸಮುದಾಯದ ಬಜೆಟ್ ಆಗಿದೆ ಎಂದು  ಅವರು ಹೇಳಿದರು.


ಬೀದರ ಜಿಲ್ಲೆಯ ಎರಡು ಸಚಿವರು ಸಚಿವ ಸಂಪುಟದಲ್ಲಿದ್ದು  ಇದು ಕೂಡಾ ಬೀದರ ಜಿಲ್ಲೆಯ ಅನುಭವ ಮಂಟಪಕ್ಕೆ  ಅನುದಾನವನ್ನು  ಪ್ರಸುತ್ತ ಬಜೆಟ್‌ನಲ್ಲಿ ಈಡುವುದಕ್ಕೆ ಅಸಮರ್ಥರಾಗಿದ್ದರೆ  ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!