ಬೆಂಗಳೂರು.16.ಜನವರಿ.25:- ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಅವರು ಉಚಿತ ಕಣ್ಣಿನ ಚಿಕಿತ್ಸೆ ನೀಡುವ “ಆಶಾಕಿರಣ” ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆಗೆ ಸಂಬಂಧಿಸಿ ಪ್ರಸಕ್ತ ಸಾಲಿಗೆ ರೂ.13.30 ಕೋಟಿ ವೆಚ್ಚ ಮೀಸಲಿಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. “ಆಶಾಕಿರಣ” ಯೋಜನೆಯೆಲ್ಲಿ . ಉಚಿತ್ ಕಣ್ಣಿನ ಆಪರೇಷನ್ ಕೋಟಿ.. ಕೋಟಿ ಮೀಸಲು
ಈ ಯೋಜನೆಯಡಿ ಉಚಿತವಾಗಿ ಕಣ್ಣಿನ ತಪಾಸಣೆ, ಕನ್ನಡಕ ನೀಡಲಾಗುತ್ತದೆ.
ಸಿಎಂ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಅವರು, ಸಭೆಯಲ್ಲಿ 35 ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ ರೂ.47 ಕೋಟಿ ಮೀಸಲು, ನರೇಗಾ ಯೋಜನೆಯಡಿ ಹೊರಗುತ್ತಿಗೆ ಸಿಬ್ಬಂದಿ ಆರೋಗ್ಯ ವಿಮೆಗೆ ರೂ.8ಕೋಟಿ ಮೀಸಲಿಗೆ ಸಂಪುಟ ಅಸ್ತು ಎಂದಿದೆ.