09/06/2025 7:58 PM

Translate Language

Home » ಲೈವ್ ನ್ಯೂಸ್ » ಆಮ್ ಆದ್ಮಿ ಪಕ್ಷದ 15 ಭರವಸೆ ಪ್ರಣಾಳಿಕೆ ಬಿಡುಗಡೆ ಮಾಡಿದ- ಅರವಿಂದ್ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ 15 ಭರವಸೆ ಪ್ರಣಾಳಿಕೆ ಬಿಡುಗಡೆ ಮಾಡಿದ- ಅರವಿಂದ್ ಕೇಜ್ರಿವಾಲ್

Facebook
X
WhatsApp
Telegram

ಹೊಸ ದೆಹಲಿ.27.ಜನವರಿ.25:- ದೆಹಲಿ ವಿಧಾನಭೆಯಲ್ಲಿ ಚುನಾವಣೆ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ವಿಶೇಷವಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಮವಾರ ಜನವರಿ 27 ಆಮ ಆದ್ಮಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ 15 ಭರವಸೆಗಳನ್ನು ಬಿಡುಗಡೆ ಮಾಡಲಾಗಿದೆ.

ಮಹಿಳೆಯರು, ಯುವಕರು, ವೃದ್ಧರು, ಬಡವರು ಸೇರಿದಂತೆ ವಿವಿಧ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಎಎಪಿಯ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ವೇದಿಕೆಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಕೇಜ್ರಿವಾಲ್ ಅವರು ಖಾತರಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಲ್ಲದೆ ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಮೂರು ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಹೊಸ ಪ್ರಣಾಳಿಕೆಯಲ್ಲಿ ಹಳೆಯ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

2020ರಲ್ಲಿ ಮೂರು ಗ್ಯಾರಂಟಿ ನೀಡಿದ್ದೆವು. ಅದರಲ್ಲಿ ಪ್ರತಿ ಮನೆಗೆ 24 ಗಂಟೆ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದೆ, ಯಮುನಾ ನದಿಯನ್ನು ಸ್ವಚ್ಛಗೊಳಿಸುತ್ತೇವೆ ಎಂದು ಹೇಳಿದ್ದೆವು. ದೆಹಲಿಯ ರಸ್ತೆಗಳನ್ನು ಯುರೋಪಿಯನ್ ಗುಣಮಟ್ಟದಿಂದ ಮಾಡಲಾಗುವುದು ಎಂದು ಹೇಳಿದ್ದೆವು. ಕಳೆದ ಐದು ವರ್ಷಗಳಲ್ಲಿ ಈ ಮೂರು ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಇಂದು ಎಲ್ಲರ ಮುಂದೆ ಹೇಳಿಕೊಳ್ಳುತ್ತಿದ್ದೇನೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.


https://x.com/ANI/status/1883776355860677105?ref_src=twsrc%5Etfw%7Ctwcamp%5Etweetembed%7Ctwterm%5E1883776355860677105%7Ctwgr%5Eb4a4c231b60b9fd3b0973d1e7130a5c92bacbec0%7Ctwcon%5Es1_c10&ref_url=https%3A%2F%2Fapi-news.dailyhunt.in%2F


ನಾವು ದೇಶದಲ್ಲಿ ಮೊದಲು ‘ಗ್ಯಾರಂಟಿ’ ಎಂಬ ಪದವನ್ನು ರಚಿಸಿದ್ದೇವೆ. ನಮ್ಮ ನಂತರ ಬಿಜೆಪಿ ಅದನ್ನು ಕದ್ದಿದೆ. ವ್ಯತ್ಯಾಸವೆಂದರೆ ನಾವು ನಮ್ಮ ಭರವಸೆಗಳನ್ನು ಪೂರೈಸುತ್ತೇವೆ ಆದರೆ ಅವರು ಮಾಡುತ್ತಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಪ್ರಣಾಳಿಕೆ ಬಿಡುಗಡೆ ಸಮಯದಲ್ಲಿ ಹೇಳಿದರು.

ತಮ್ಮ ಸರ್ಕಾರ ರಚನೆಯಾದರೆ ಈ ಭರವಸೆಗಳ ಜತೆಗೆ ‘6 ರೇವಡಿಗಳು’ ಸಹ ಲಭ್ಯವಿರುತ್ತವೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರು, ಯುವಕರು, ವೃದ್ಧರು, ಬಡವರು ಸೇರಿದಂತೆ ವಿವಿಧ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಎಎಪಿಯ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ವೇದಿಕೆಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಕೇಜ್ರಿವಾಲ್ ಅವರು ಖಾತರಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ಅಲ್ಲದೆ ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಮೂರು ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಹೊಸ ಪ್ರಣಾಳಿಕೆಯಲ್ಲಿ ಹಳೆಯ ಭರವಸೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.

2020ರಲ್ಲಿ ಮೂರು ಗ್ಯಾರಂಟಿ ನೀಡಿದ್ದೆವು. ಅದರಲ್ಲಿ ಪ್ರತಿ ಮನೆಗೆ 24 ಗಂಟೆ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದೆ, ಯಮುನಾ ನದಿಯನ್ನು ಸ್ವಚ್ಛಗೊಳಿಸುತ್ತೇವೆ ಎಂದು ಹೇಳಿದ್ದೆವು. ದೆಹಲಿಯ ರಸ್ತೆಗಳನ್ನು ಯುರೋಪಿಯನ್ ಗುಣಮಟ್ಟದಿಂದ ಮಾಡಲಾಗುವುದು ಎಂದು ಹೇಳಿದ್ದೆವು. ಕಳೆದ ಐದು ವರ್ಷಗಳಲ್ಲಿ ಈ ಮೂರು ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಇಂದು ಎಲ್ಲರ ಮುಂದೆ ಹೇಳಿಕೊಳ್ಳುತ್ತಿದ್ದೇನೆ ಎಂದು ಅರವಿಂದ್​ ಕೇಜ್ರಿವಾಲ್​ ತಿಳಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!