ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಕೊಂಡಮೊಡಲು ಅರಣ್ಯ ಪ್ರದೇಶದಲ್ಲಿ ಇಂದು ಭದ್ರತಾ ಸಿಬ್ಬಂದಿ ಮತ್ತು ಶಸ್ತ್ರಸಜ್ಜಿತ ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಪ್ರಮುಖ ಮಾವೋವಾದಿ ನಾಯಕರು ಸಾವನ್ನಪ್ಪಿದ್ದಾರೆ. ಮೃತರನ್ನು ವಿಶೇಷ ವಲಯ ಮಾವೋವಾದಿ ಸಮಿತಿ ಸದಸ್ಯೆ ಮತ್ತು ಮೃತ ಮಾವೋವಾದಿ ನಾಯಕ ಚಲಪತಿ ರಾವ್ ಅವರ ಪತ್ನಿ ಅರುಣಾ, ಕೇಂದ್ರ ಮಾವೋವಾದಿ ಸಮಿತಿ ಸದಸ್ಯ ಗಜರ್ಲಾ ರವಿ ಅಲಿಯಾಸ್ ಉದಯ್ ಮತ್ತು ಎಒಬಿ ವಿಶೇಷ ವಲಯ ಮಾವೋವಾದಿ ಸಮಿತಿಯ ಎಸಿಎಂ ಅಂಜು ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿ ಸ್ಥಳದಿಂದ ಮೂರು ಎಕೆ -47 ರೈಫಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
