15/06/2025 9:44 AM

Translate Language

Home » ಲೈವ್ ನ್ಯೂಸ್ » ಅಮಿತ್ ಶಾ ರವರನ್ನು ಕೇಂದ್ರ ಸಚಿವ ಸಂಪುಟದದಿಂದ ವಜಾ ಮಾಡಲು ಆಗ್ರಹಿಸಿ ಬಿ. ಎಸ್. ಪಿ ಜಿಲ್ಲಾ ಘಟಕದ ವತಿಯಿಂದ ಬ್ರಹತ್ ಪ್ರತಿಭಟನೆ

ಅಮಿತ್ ಶಾ ರವರನ್ನು ಕೇಂದ್ರ ಸಚಿವ ಸಂಪುಟದದಿಂದ ವಜಾ ಮಾಡಲು ಆಗ್ರಹಿಸಿ ಬಿ. ಎಸ್. ಪಿ ಜಿಲ್ಲಾ ಘಟಕದ ವತಿಯಿಂದ ಬ್ರಹತ್ ಪ್ರತಿಭಟನೆ

Facebook
X
WhatsApp
Telegram

ಅಮಿತ್ ಶಾ ರವರನ್ನು ಕೇಂದ್ರ ಸಚಿವ ಸಂಪುಟದದಿಂದ ವಜಾ ಮಾಡಲು ಆಗ್ರಹಿಸಿ ಬೀದರ  ಬಿ. ಎಸ್. ಪಿ ಜಿಲ್ಲಾ ಘಟಕದ ವತಿಯಿಂದ ಬ್ರಹತ್ ಪ್ರತಿಭಟನೆ ಮಾಡಲಾಯಿತ್ತು.


ಸಂಸತ್ ಅಧಿವೇಶನದಲ್ಲಿ ಭಾರತೀಯ ಸಂವಿಧಾನಕ್ಕೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುವಾಗ ಕೇಂದ್ರ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಹೆಸರನ್ನು ಪದೇ ಪದೇ ಉಚ್ಚರಿಸುವ ಬದಲು ದೇವರನ್ನು ಸ್ಮರಿಸಿದರೆ ಏಳೇಳು ಜನ್ಮಗಳ ಸ್ವರ್ಗ ದೊರೆಯುತ್ತಿತ್ತು ಎಂದು ಮಾತನಾಡಿದ್ದಾರೆ.

ಇಂದು ಪರಮ ಪೂಜ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಮತ್ತು ಸಂವಿಧಾನ ವಿರೋಧಿ ಮನಸ್ಥಿತಿ ಇರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ತಕ್ಷಣ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಬಹುಜನ ಸಮಾಜ ಪಾರ್ಟಿ, ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟçಪತಿಯವರಿಗೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಪೀಲ ಗೋಡಬೊಲೆ, ರಾಜ್ಯ ಕಾರ್ಯದರ್ಶಿಗಳಾದ ಅಶೋಕ ಮಂಠಾಳಕರ್,ಜ್ಞಾನೇಶ್ವರ ಸಿಂಗಾರೆ, ಶಕ್ತಿಕಾಂತ ಬಾವಿದೊಡ್ಡಿ, ರಾಹುಲ ಖಂದಾರೆ, ದತ್ತಾತ್ರಿ ಗಾಯಕವಾಡ, ಮಹೇಶ ಭೋಲಾ, ಪ್ರದೀಪ ಫುಲೆ, ಸತೀಶ ದೊಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Source: www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!