21/06/2025 6:02 AM

Translate Language

Home » ಲೈವ್ ನ್ಯೂಸ್ » ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ

ಅಪರಿಚಿತ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ

Facebook
X
WhatsApp
Telegram

ಬೀದರ.21.ಜೂನ್.25:- ಬೀದರ ತಾಲ್ಲೂಕಿನ ನೇಮತಾಬಾದ ಗ್ರಾಮದ ಶಿವಾರದ ಜಮೀನಿನ ಹತ್ತಿರ ಮಾಂಜ್ರಾ ನದಿಯಲ್ಲಿ ಅಂದಾಜು 50 ರಿಂದ 55 ವರ್ಷ ವಯಸ್ಸಿನ ಒಬ್ಬ ಅಪರಿಚಿತ ಗಂಡು ವ್ಯಕ್ತಿಯ ಮೃತ ದೇಹವು ಕಂಡುಬಂದಿದ್ದು, ಇಲ್ಲಿವರೆಗೆ ಮೃತ ವ್ಯಕ್ತಿಯ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲವೆಂದು ಜನವಾಡಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನೇಮತಾಬಾದ ಗ್ರಾಮದ ಉತ್ತಮ ಅವರ ದೂರಿನ ಮೇರೆಗೆ ಯು.ಡಿ.ಆರ್.ಸಂಖ್ಯೆ: 11/2025 ಕಲಂ. 194 ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.


ಮೃತ ವ್ಯಕ್ತಿಯು 5 ಅಡಿ 2 ಇಂಚ್ ಎತ್ತರ ಇದ್ದು, ಬೋಳು ತಲೆ, ಮೈಮೇಲೆ ಒಂದು ಬಿಳಿ ಬಣ್ಣದ ಶರ್ಟ, ಒಂದು ಕಪ್ಪು ಬಣ್ಣದ ಪ್ಯಾಂಟ, ಒಂದು ಬಿಳಿ ಬನಿಯನ್, ಒಂದು ಚಾಕ್ಲೇಟ ಬಣ್ಣದ ಅಂಡರವಿಯರ್ ಧರಿಸಿರುತ್ತಾನೆ.

ಈ ಮೃತ ವ್ಯಕ್ತಿಯ ವಾರಸುದಾರರ ಯಾರಾದರೂ ಇದ್ದಲ್ಲಿ ಜನವಾಡಾ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ: 9480803450, ಸಿಪಿಐ ಬೀದರ ಗ್ರಾಮೀಣ ವೃತ್ತ ಮೊಬೈಲ್ ಸಂಖ್ಯೆ: 9480803439, ಡಿಎಸ್‍ಪಿ, ಬೀದರ ಮೊಬೈಲ್ ಸಂಖ್ಯೆ: 9480803420 ಹಾಗೂ ಕಂಟ್ರೋಲ್ ರೂ. ನಂಬರ  ದೂರವಾಣಿ ಸಂಖ್ಯೆ: 08482-226700 ಗೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!