ಬೀದರ.24ಜನವರಿ.25:- ಸಾರ್ವಜನಿಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕೇಂದ್ರದ ಫಲಾನುಭವಿಗಳು ಅಪರಿಚಿತ ವ್ಯಕ್ತಿಗಳಿಂದ ದೂರವಾಣಿ ಕರೆಗಳೂ ಬಂದಲ್ಲಿ ಕರೆಗಳನ್ನು ಸ್ವೀಕರಿಸಬಾರದು ಹಾಗೂ ಯಾವುದೇ ರೀತಿಯ ಓಟಿಪಿ ಗಳನ್ನು ನೀಡಬಾರದೆಂದು ಔರಾದ (ಬಾ) ತಾಲ್ಲೂಕಿನ ಸಂತಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಂಗನವಾಡಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಫಲಾನುಭವಿಗಳ ಮಾಹಿತಿಯನ್ನು ಪೋಷಣ ಟ್ರಾö್ಯಕರ್ ಆ್ಯಪ್ನಲ್ಲಿ ಅಳವಡಿಸಿರುತ್ತಾರೆ. ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಅಪರಿಚಿತ ವ್ಯಕ್ತಿಗಳಿಂದ ದೂರವಾಣಿ ಕರೆಗಳು ಸ್ವೀಕರಿಸುತ್ತಿದ್ದು, ತಮ್ಮನ್ನು ಮೇಲಾಧಿಕಾರಿಗಳ ಕಛೇರಿಯಿಂದ ಕರೆ ಮಾಡಿರುವುದಾಗಿ ತಿಳಿಸಿ ನಿಮ್ಮ ಮೊಬೈಲ್ಗೆ ಓಟಿಪಿ ಬಂದಿರುತ್ತದೆ ಅದನ್ನು ನೀಡಲು ಕೇಳುತ್ತಾರೆ.
ಕೆಲವು ಅಂಗನವಾಡಿ ಕಾರ್ಯಕರ್ತೆಯರು ತಾವು ಯಾರು? ತಮಗೆಕೆ ಓಟಿಪಿ ನೀಡಬೇಕು ಎಂದು ಕೇಳಿದಾಗ ಅವರು ನಾವು ಮೇಲಾಧಿಕಾರಿಗಳ ಕಚೇರಿಯಿಂದ ಕರೆ ಮಾಡಿರುತ್ತೇವೆ ಹಾಗೂ ವಲಯ ಮೇಲ್ವಿಚಾರಕಿಯರ ಹೆಸರನ್ನು ಹೇಳಿ ತಮ್ಮ ಮೇಲೆ ಕ್ರಮ ವಹಿಸುವುದಾಗಿ ಬೇದರಿಸಿ ಓಟಿಪಿಯನ್ನು ತೆಗೆದುಕೊಂಡು ಪೋಷಣಾ ಟ್ರಾö್ಯಕರ್ ಆ್ಯಪ್ನಲ್ಲಿ ಫಲಾನುಭವಿಗಳಿಗೆ ಕರೆ ಮಾಡಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಹಣ ವರ್ಗಾಯಿಸಲು ಖಾತೆ ನಂಬರ ಕೇಳುತ್ತಿದ್ದಾರೆ.
ಕಾರಣ ತಾವುಗಳು ಎಚ್ಚರ ವಹಿಸಬೇಕೆಂದು ಅವರು ತಿಳಿಸಿದ್ದಾರೆ.