09/06/2025 7:30 PM

Translate Language

Home » ಲೈವ್ ನ್ಯೂಸ್ » ಅನ್ನಭಾಗ್ಯ ಯೋಜನೆ: ನೇರ ನಗದು ವರ್ಗಾವಣೆ
ಬದಲಾಗಿ 05 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರ ಆದೇಶ

ಅನ್ನಭಾಗ್ಯ ಯೋಜನೆ: ನೇರ ನಗದು ವರ್ಗಾವಣೆ
ಬದಲಾಗಿ 05 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರ ಆದೇಶ

Facebook
X
WhatsApp
Telegram

ಬೀದರ.14ಮಾರ್ಚ.25:-  ಸಾರ್ವಜನಿಕ ವಿತರಣಾ ಪದ್ದತಿಯಡಿ ಆದ್ಯತಾ ಪಡಿತರ ಚೀಟಿಯ (ಅಂತ್ಯೋದಯ+ಬಿಪಿಎಲ್) ಫಲಾನುಭವಿಗೆ ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ ಕೇಂದ್ರ ಸರ್ಕಾರದ 05ಕೆ.ಜಿ ಅಕ್ಕಿಯೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 05 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ ರೂ.34.00 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ರೂ.170.00 ರಂತೆ ಹಣವನ್ನು ವರ್ಗಾಯಿಸಲಾಗುತ್ತಿರುತ್ತದೆ.

ಆದರೆ ಫೆಬ್ರವರಿ-2025 ರ ಮಾಹೆಯಿಂದ ಜಾರಿಗೆ ಬರುವಂತೆ ನೇರ ನಗದು ವರ್ಗಾವಣೆ ಬದಲಾಗಿ ಅನ್ನಭಾಗ್ಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 05 ಕೆ.ಜಿ ಅಕ್ಕಿಯನ್ನು ವಿತರಿಸಲು ಸರ್ಕಾರ ಆದೇಶಿಸಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ.


ಫೆಬ್ರುವರಿ-2025ರ ಮಾಹೆಯ ವಿತರಣೆಯು ಪೂರ್ಣಗೊಂಡಿರುವುದರಿoದ ಫೆಬ್ರವರಿ-2025ರ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ಮಾರ್ಚ್-2025ರ ಮಾಹೆಯ ಹಂಚಿಕೆಯೊAದಿಗೆ ವಿತರಣೆ ಮಾಡಲಾಗುವುದು.

ಆದ್ದರಿಂದ ಮಾರ್ಚ್-2025ರ ಮಾಹೆಯಲ್ಲಿ ಆದ್ಯತಾ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗಳಿಗೆ ಒಟ್ಟು 15 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು ಹಾಗೂ 4 ಸದಸ್ಯರಿಗಿಂತ ಕಡಿಮೆ ಇರುವ ಅಂತ್ಯೋದಯ ಪಡಿತರ ಚೀಟಿದಾರರಿಗೆ 35 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.


4 ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ 45 ಕೆ.ಜಿ ಅಕ್ಕಿ, 5 ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ 65 ಕೆ.ಜಿ ಅಕ್ಕಿ, 6 ಸದಸ್ಯರಿರುವ ಎಎವೈ ಪಡಿತರ ಚೀಟಿದಾರರಿಗೆ 85 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದು.

ಮುಂದುವರೆದು ವಿತರಣೆ ಮಾಡಿದ ಪಡಿತರ ಅಕ್ಕಿಯನ್ನು ಪಡಿತರ ಚೀಟಿದಾರರು ಯಾವುದೇ ಕಾರಣPಕ್ಕೂ ಮಾರಾಟ ಮಾಡುವಂತಿಲ್ಲ ಒಂದು ವೇಳೆ ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಪಡಿತರ ಚೀಟಿದಾರರ ಪಡಿತರ ಚೀಟಿಯನ್ನು ಅಮಾನತ್ತುಗೊಳಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಯಾವುದೇ ದೂರುಗಳು ಇದ್ದಲ್ಲಿ ಆಹಾರ ಇಲಾಖೆಯ ಸಿಬ್ಬಂದಿಯನ್ನು ಸಂಪರ್ಕಿಸಬಹುದಾದ ವಿವರ:

>ಬೀದರ ಗ್ರಾಮಾಂತರ ಆಹಾರ ಶಿರಸ್ತೆದಾರ ಅನಿಲ್‌ಕುಮಾರ ವ್ಯಾಸ್ (6360177221),

>ಬೀದರ ಗ್ರಾಮಾಂತರ ಆಹಾರ ನಿರೀಕ್ಷಕರು ಅರುಣ್‌ಕುಮಾರ (7892199014),

ಬೀದರ ಪಟ್ಟಣ ಆಹಾರ ನಿರೀಕ್ಷಕರು ರಾಮರತನ ದೆಗಲಿ (9844302280),

>ಬೀದರ ಪಟ್ಟಣ ಆಹಾರ ನಿರೀಕ್ಷಕರು ಶೋಭಾ (9740226135),

>ತಾಲ್ಲೂಕು ಕಛೇರಿ ಭಾಲ್ಕಿ: ಆಹಾರ ಶಿರಸ್ತೆದಾರರು ವೆಂಕಟರಾವ (9110413724),

> ಆಹಾರ ನಿರೀಕ್ಷಕರು ರಾಜೇಂದ್ರಕುಮಾರ (9972460457)

ತಾಲ್ಲೂಕು ಕಛೇರಿ ಹುಮನಾಬಾದ:

ಆಹಾರ ಶಿರಸ್ತೆದಾರರು ಪರಮೇಶ್ವರ (9448349496),

ಆಹಾರ ನಿರೀಕ್ಷಕರು ಶ್ರೀಮತಿ.ಬಿಂದುಕುಮಾರಿ (9449382228),

ತಾಲ್ಲೂಕು ಕಛೇರಿ ಚಿಟಗುಪ್ಪಾ:

ಆಹಾರ ನಿರೀಕ್ಷಕರು ಶೇಖರ್ (9964874917),

ತಾಲ್ಲೂಕು ಕಛೇರಿ ಬಸವಕಲ್ಯಾಣ: ಆಹಾರ ಶಿರಸ್ತೆದಾರರು ನಿಂಗಯ್ಯಾ (9916241166),

ಆಹಾರ ನಿರೀಕ್ಷಕರು ನಾಗರಾಜ (8951753186),

ದ್ವಿ.ದ.ಸ ಶ್ರೀಮತಿ. ರಾಜೇಶ್ವರಿ (9986775659),

ತಾಲ್ಲೂಕು ಕಛೇರಿ ಹುಲಸೂರು: ಆಹಾರ ನಿರೀಕ್ಷಕರು ಪ್ರದೀಪ್ (8095453026),

ತಾಲ್ಲೂಕು ಕಛೇರಿ ಔರಾದ (ಬಿ):ಆಹಾರ ಶಿರಸ್ತೆದಾರರು ಪರಮೇಶ್ವರ (9448349496),

ಆಹಾರ ನಿರೀಕ್ಷಕರು ಶ್ರೀಮತಿ.ಪೆ್ರoಮಲತಾ (9901741151),

ತಾಲ್ಲೂಕು ಕಛೇರಿ ಕಮಲನಗರ: ಆಹಾರ ನಿರೀಕ್ಷಕರು ಶಿವಾನಂದ ಪಾಟೀಲ್ (9741614855).

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!