09/06/2025 6:51 AM

Translate Language

Home » ಲೈವ್ ನ್ಯೂಸ್ » ಅಧಿಕಾರ ದುರ್ಬಳಕೆ ಮಾಡಿದ ತಾ. ಪಂ. ಇ.ಒ.ಗೆ
ಸಸ್ಪೆಂಡ್ ಮಾಡಲು ರಮೇಶ ಬಿರಾದಾರ ಒತ್ತಾಯ.!

ಅಧಿಕಾರ ದುರ್ಬಳಕೆ ಮಾಡಿದ ತಾ. ಪಂ. ಇ.ಒ.ಗೆ
ಸಸ್ಪೆಂಡ್ ಮಾಡಲು ರಮೇಶ ಬಿರಾದಾರ ಒತ್ತಾಯ.!

Facebook
X
WhatsApp
Telegram

ಬೀದರ್:-೨೨, ಬೀದರ ತಾಲ್ಲೂಕಾ ಪಂಚಾಯತನ ಕಾರ್ಯನಿರ್ವಾಹಕ ಅಧಿಕಾರಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಲಿಯಂಬರ ಗ್ರಾಮ ಪಂಚಾಯತಿಯ ಮಮದಾಪೂರ ಗ್ರಾಮದ ನಿವೃತ್ತ ಶಿಕ್ಷಕ ಶ್ರೀಕಾಂತ ಮೂಲಗೆ ಅವರ ನಿವೇಶನ ಕಾನೂನು ಬಾಹಿರವಾಗಿ ಡಿಜಿಟಲ್ ಖಾತೆ ರದ್ದು ಮಾಡಿರುತ್ತಾರೆ. ಅವರಿಗೆ ತಕ್ಷಣವೇ ಸಸ್ಪೆಂಡ್ ಮಾಡಿ ಇಲಾಖಾ ತನಿಖೆ ನಡೆಸಿ ಕಾನೂನು ರಿತ್ಯ ಸೂಕ್ತ ಕ್ರಮ ಕೈಕೊಂಡು ಶಿಕ್ಷೆಗೆ ಗುರಿಪಡಿಸಬೇಕೆಂದು ಬೀದರ ಜಿಲ್ಲಾ ವಿಕಾಸ ವೇದಿಕೆಯ ಮತ್ತು ಬೀದರ ಜಿಲ್ಲಾ ಬರಹಗಾರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ರಮೇಶ ಬಿರಾದಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾಡಳಿತ ಮತ್ತು ಬೀದರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದ್ದಾರೆ.


ಬೀದರ್ ಜಿಲ್ಲಾ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮಮದಾಪುರ ಗ್ರಾಮ. ಅಲ್ಲಿಯ ನಿವಾಸಿ ನಿವೃತ್ತ ಶಿಕ್ಷಕ ಶ್ರೀಕಾಂತ ಶರಣಪ್ಪ ಮೂಲಿಗೆ ಅವರು ತಮ್ಮ ನಿವೇಶನವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡುವಂತೆ  ಪಿಡಿಓ ರವರಿಗೆ ಅರ್ಜಿ ಸಲ್ಲಿಸಿರುವರು.

ಅಲ್ಲಿ ಅವರ ಸ್ಥಳದಲ್ಲಿ ಬೇರೆ ಇಬ್ಬರು ವ್ಯಕ್ತಿಗಳು ದನದ ಕೊಟ್ಟಿಗೆಗಳನ್ನು ಹಾಕಿದ್ದರು. ಈ ಕುರಿತು ಜನವಾಡ ಪೊಲೀಸ್ ಠಾಣೆಗೆ ಜಿಲ್ಲಾ ಪಂಚಾಯತಿಯ ಸಿಇಓ ರವರಿಗೆ ತಾಲೂಕ ಪಂಚಾಯತಿಯ ಕಾರ್ಯನಿರ್ವಕ ಅಧಿಕಾರಿಗಳಿಗೆ ಮಾಹಿತಿ ಮತ್ತು ದೂರುಗಳನ್ನು ನೀಡಿದರು. ಪಿ ಡಿಯೋ ರವರು ಮ್ಯುಟೇಶನ್  ಮಾಡಿ ಡಿಜಿಟಲ್  ಖಾತೆ  ಮಾಡಿಕೊಟ್ಟರುವರು.

ಈ ನಿಟ್ಟಿನಲ್ಲಿ ಬೀದರ್ ತಾಲೂಕು ಪಂಚಾಯಿತಿನ ಇ.ಓ ರವರು  ದಾಖಲೆ ಪತಗಳು ಸರಿಯಾಗಿಲ್ಲವೆಂದು ಕಾರಣ ನೀಡಿ ರದ್ದು ಪಡಿಸುವರು. ಆದರೆ ನಿವೇಶನಕ್ಕೆ ಸಂಬoಧಪಟ್ಟoತೆ ಎಲ್ಲ ದಾಖಲೆಯ ಪತ್ರಗಳು ಸರಿಯಾಗಿ ಇದ್ದವು ಆದರೆ ನೀವು ಸೂಕ್ತ ಸೂಕ್ತ ಮಾಹಿತಿ ನೀಡದೆ ನಿಯಮ ಬಾರಿಗೆ ರದ್ದುಪಡಿಸುವುದು ಅನ್ಯಾಯ ಮಾಡಿದಂತಾಗಿದೆ. ಜಿಲ್ಲಾ ಪಂಚಾಯತಿಯ ಸಿಇಒ ಮತ್ತು ಜಿಲ್ಲಾಧಿಕಾರಿಗಳು ಬರೆದ ಪತ್ರದ ವಿವರ ಹೀಗಿದೆ.


ಶ್ರೀಕಾಂತ ತಂದೆ ಶರಣಪ್ಪ ಮೂಲಗೆ ವಯಸ್ಸು ೬೧ ವರ್ಷ ನಿವೃತ್ತ ಮುಖ್ಯ ಗುರುಗಳಾಗಿದ್ದು, ಬೀದರ ತಾಲ್ಲೂಕಿನ ಅಲಿಯಂಬರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಮದಾಪೂರ ಗ್ರಾಮದವರಾಗಿದ್ದು,  ಅವರ ತಂದೆಯವರ ಅನುವಂಶಿಕo ಆಸ್ತಿಯಲ್ಲಿನ ಅವರ ಹೆಸರಿನ ಖಾಲಿ ಜಾಗ ಅಳತೆ ೩೮ಘಿ೮೦ ಚ. ಅಡಿ ಭೂಮಿಯನ್ನು ೧೧-೪-೨೦೦೮ ರಂದು ಅವರ ತಂದೆಗಿರುವ ಮೂರು ಜನ ಅಣ್ಣ-ತಮ್ಮಂದಿರರಲ್ಲಿ ದೊಡ್ಡವನಾದ ಶ್ರೀಕಾಂತ ಮೂಲಗೆರವರಿಗೆ ಹಂಚಿಕೆ ಪತ್ರ ದಿ. ೧೧-೪-೨೦೦೮ ರಂದು ಬರೆದು ಈ ನಿವೇಶನ ಅವರ ಹೆಸರಿಗೆ ನೀಡಲಾಗಿದೆ ಎಂದು ಲಿಖಿತ ರೂಪದಲ್ಲಿ ತಿಳಿಸಿರುತ್ತಾರೆ ದಿ. ೪-೧೨-೨೦೦೯ ರಂದು ದಾದಾರಾವ ಕೋಳೆಕರ್ ವಕೀಲರ ಮೂಲಕ ನೋಟರಿ ಮಾಡಿ ಬರೆದುಕೊಟ್ಟಿರುವರು.

ಸದರಿ ಭೂಮಿಯಲ್ಲಿ ಮಮದಾಪೂರ ಗ್ರಾಮದವರೆ ಆದ ಭೀಮರಾವ ಧೂಳೆ ಮತ್ತು ಮಾಣಿಕಪ್ಪಾ ಧೂಳೆ ಅಕ್ರಮವಾಗಿ ಅಲ್ಲಿ ತಲಾ ಒಂದರoತೆ ಎರಡು ದನದ ಕೊಟ್ಟಿಗೆಗಳನ್ನು ಅತಿಕ್ರಮಣ ಮಾಡಿ ನಿರ್ಮಿಸಿಕೊಂಡಿರುವರು. ಈ ನಿಟ್ಟಿನಲ್ಲಿ ಅತಿಕ್ರಮಣ ತೆರವುಗೊಳಿಸುವಂತೆ ಅವರಿಗೆ ತಿಳಿಹೇಳಿದ್ದೆ. ದಿ. ೫-೭-೨೦೨೧ ರಂದು ಜಿಲ್ಲಾ ಪಂಚಾಯತಿಯ ಸಿಇಒ ರವರಿಗೆ ಪತ್ರ ಬರೆದು ಮ್ಯೂಟೇಶನಗಾಗಿ ಮತ್ತು ಕಟ್ಟಡ ನಿರ್ಮಿಸಲು ಅನುಮತಿ ಕೊಡುವಂತೆ ಕೋರಿದ್ದೆ. ಅವರು ೨೨-೭-೨೦೨೧ ರಂದು ಅಲಿಯಂಬರ ಗ್ರಾಮ ಪಂಚಾಯತಿಯ ಪಿಡಿಒರವರಿಗೆ ಪರಿಶೀಲಿಸಲು ಪತ್ರ ಬರೆದಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿ. ೧೯-೧೨-೨೦೨೨ ರಂದು ಭೂಮಿ ಮೇಲಿನ ತೆರಿಗೆ ೩೬೦೦ ರೂ. ಕರ ವಸೂಲಿಗಾರನ ಮೂಲಕ ರಸೀದಿ ಸಂಖ್ಯೆ: ೪೦೭ ರಲ್ಲಿನಂತೆ ಹಣ ಪಾವತಿಸಿ ರಸೀದಿ ಪಡೆದಿರುತ್ತಾರೆ. ಆಗಿನ ಪಿಡಿಒ ೭-೬-೨೦೨೩ ರಂದು ಡಿಜಿಟಲ್ ಖಾತಾ ಮಾಡಿಕೊಟ್ಟಿರುವರು. ಈ ಬಗ್ಗೆ ಶ್ರೀಕಾಂತ ಮೂಲಗೆ ಅವರು ದಿ. ೩-೧೧-೨೦೨೩ ರಂದು ಜನವಾಡಾ ಪೊಲೀಸ್ ಠಾಣೆಗೆ ದೂರಿರುವರು. ಪಿಎಸ್‌ಐ ರವರು ೭-೧೧-೨೦೨೩ ರಂದು ಪಿಡಿಒರವರಿಗೆ ಪತ್ರ ಪರೆದು ಪರಿಶಿಲಿಸುವಂತೆ ತಿಳಿಸಿದ್ದರು.

ಅತಿಕ್ರಮಣ ತೆರವಿಗಾಗಿ ಬೀದರ ತಾಲ್ಲೂಕು ಪಂಚಾಯತನ ಕಾರ್ಯನಿರ್ವಹಕಾದಿಕಾರಿಗಳಿಗೆ ದಿ.೧೪-೮-೨೦೨೩ ರಂದು ಪತ್ರ ಬರೆದು ಕೋರಿರುವರು. ಅವರು ಪಿಡಿಒರವರಿಗೆ ೧೪-೯-೨೦೨೩ ರಂದು ಪತ್ರ ಬರೆದು ನಿಯಮಾನುಸಾರ ಕ್ರಮ ಜರುಗಿಸಿ ಕೈಕೊಂಡ ಕ್ರಮದ ಕುರಿತು ಈ ಕಚೇರಿಗೆ ವರದಿ ಸಲ್ಲಿಸಲು ತಿಳಿಸಿದರು.

ನಂತರ ಪರಿಶೀಲಿಸಿ ವಿಚಾರಣೆಗೆ ದಿ. ೨೧-೩-೨೦೨೪ ರಂದು, ೨೨-೪-೨೦೨೪ ರಂದು ಮತ್ತು ೨೭-೫-೨೦೨೪ ರಂದು ವಿಚಾರಣೆ ನಡೆಸಿ ಶ್ರೀಕಾಂತ ಮೂಲಗೆ ಅವರಿಗೆ ನೀಡಿದ ಡಿಜಿಟಲ್ ಖಾತಾ ಅನುಮತಿಯನ್ನು ಇಒ ರವರು ೩೧-೧೨-೨೦೨೪ ರ ಪತ್ರದಲ್ಲಿ ಶ್ರೀಕಾಂತರ ದಾಖಲೆ ಪತ್ರಗಳು ಸರಿಯಾಗಿಲ್ಲವೆಂದು ಡಿಜಿಟಲ್ ಖಾತೆ ರದ್ದು ಮಾಡಿ ಆದೇಶ ಹೊರಡಿಸಿ ಸಂಚು ನಡೆಸಿ ಕುತಂತ್ರದಿAದ ಅಧಿಕಾರ ದುರ್ಬಳಕೆ ಮಾಡಿಕೊಂಡು ಶ್ರೀಕಾಂತರಿಗೆ ಅನ್ಯಾಯ ಮಾಡಿರುತ್ತಾರೆ.

ತಕ್ಷಣವೇ ತಾವು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಕೊಂಡು ಅವರ ಜಾಗ ಅಳತೆ ೩೮ಘಿ೮೦ ಚ. ಅಡಿ ಭೂಮಿಯನ್ನು ಶ್ರೀಕಾಂತರ ಹೆಸರಿಗೆ ಆದೇಶದ ಮೂಲಕ ಪುನಃ ಡಿಜಿಟಲ್ ಖಾತಾ ಮಾಡಿಕೊಡುವಂತೆ ಬೀದರ ಜಿಲ್ಲಾ ವಿಕಾಸ ವೇದಿಕೆ ಮತ್ತು ಬೀದರ ಜಿಲ್ಲಾ ಬರಹಗಾರರ ಮತ್ತು ಕಲಾವಿದರ ಸಮಗದ ಅಧ್ಯಕ್ಷÀ ರಮೇಶ ಬಿರಾದಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


ನ್ಯಾಯ ಸಿಗದಿದ್ದರೆ ಮುಂಬರುವ ದಿನಗಳಲ್ಲಿ ಕಚೇರಿ ಮುಂದೆ ಹೋರಾಟ ಮಾಡಲಾಗುವುದೆಂದು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!