ಬೀದರ.14.ಮೇ.25:- ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯವರು ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಾತಿಗಾಗಿ ಹೊಸದಾಗಿ ಜಾರಿಗೆ ತಂದಿರುವ ಪ್ರವೇಶ ಪರೀಕ್ಷೆ ಎಂಬ ಮಾನದಂಡವನ್ನು ಕೂಡಲೇ ರದ್ದುಗೊಳಿಸುವ ಕುರಿತು.
ಹೊಸದಾಗಿ ಜಾರಿಗೆ ತಂದಿರುವ ಪ್ರವೇಶ ಪರೀಕ್ಷೆ ಎಂಬ ಮಾನದಂಡವನ್ನು ಕೂಡಲೇ ರದ್ದುಗೊಳಿಸುವ ಕುರಿತು. ಅಲ್ಪ ಸಂಖ್ಯಾತರ ಕಲ್ಯಾಣ ಎಲಾಖೆಯೆಲ್ಲಿ ಅತಿಥಿ ಶಿಕ್ಷಕರ/ಉಪನ್ಯಾಸಕರ ನೇಮಕಾತಿಗಾಗಿ ಪರೀಕ್ಷೆ ರದ್ದುಗೊಳಿಸುವ ಕುರಿತು.
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಬೀದರ ಜಿಲ್ಲೆಯ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರು ತಮ್ಮಲ್ಲಿ ವಿನಂತಿಸುವುದೇನೆಂದರೆ, ಸುಮಾರು 8-10 ವರ್ಷಗಳಿಂದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಸತಿ ಶಾಲೆಗಳಲ್ಲಿ ಹಾಗೂ ವಸತಿರಹಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾವುಗಳು ಕಡಿಮೆ ವೇತನವಿದ್ದರೂ ಕೂಡ ನಮ್ಮ ಕರ್ತವ್ಯ ನಿಷ್ಠೆಯಿಂದ ಖಾಯಂ ನೌಕರರಂತೆ ಕಾರ್ಯನಿರ್ವಹಿಸಿ ಉತ್ತಮ ಫಲಿತಾಂಶವನ್ನು ನೀಡುತ್ತಾ ಬಂದಿದ್ದೇವೆ.
ಈ ವರ್ಷ ಇಲಾಖೆಯವರು ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮಕಾತಿಗಾಗಿ ಪ್ರವೇಶ ಪರೀಕ್ಷೆ ಎಂಬ ಹೊಸ ಮಾನದಂಡವನ್ನು ಜಾರಿ ಮಾಡಿದ್ದು ಇದರ ಜೊತೆಗೆ ಅರ್ಹತೆ (ಮೆರಿಟ್) ಅಧಾರದ ಮೇಲೆ ಆಯ್ಕೆ ಪ್ರಕ್ರಿಯೆಗೆ ಮುಂದಾಗಿರುವುದು ತುಂಬಾ ನೋವಿನ ಸಂಗತಿ.
ಕಾರಣ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರೆ ಇಲಾಖೆಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಘ ಇವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಒಂದು ವಸತಿ ಶಾಲೆಗಳಲ್ಲಿ ಈ ನೇಮಕಾತಿ ಪುಕ್ರಿಯೆ ಇರುವುದಿಲ್ಲ. ಹಾಗಾಗಿ ಈ ಒಂದು ನಿಯಮವು ಸಂಪೂರ್ಣ ಅವೆ, ಜ್ಞಾನಿಕವಾಗಿದೆ ಎಂದು ತಿಳಿಸುತ್ತಾ, ಅರ್ಹತೆ (ಮೆರಿಟ್) ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವುದರಿಂದ 2015ರ ಅವಧಿಗೆ ಮುಂಚೆ ಪದವಿ, ಬಿ.ಇಡಿ. ಸ್ನಾತಕೋತ್ತರ ಪದವಿ ಪಡೆದು ಕಾರ್ಯನಿರ್ವಹಿಸುತ್ತಿರುವ ಹಲವಾರು ಶಿಕ್ಷಕ/ಉಪನ್ಯಾಸಕರ ಫಲಿತಾಂಶಗಳು ಕಡಿಮೆ ಇರುವುದರಿಂದ ಹಾಗೆ 2015ರ ನಂತರದಲ್ಲಿ ಪದವಿ, ಬಿ.ಇಡಿ, ಸ್ನಾತಕೋತ್ತರ ಪದವಿ ಮುಗಿಸಿದ ಹಲವಾರು ಅಭ್ಯರ್ಥಿಗಳ ಫಲಿತಾಂಶಗಳು ಉತ್ತಮವಾಗಿ ಇರುವುದರಿಂದ ಈ ಪರೀಕ್ಷಾ ಕ್ರಮವು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ/ಉಪನ್ಯಾಸಕರ ಶ್ರಮಕ್ಕೆ ಅನ್ಯಾಯ ಮತ್ತು ಆಗೌರವ ತೋರಿದಂತೆ ಕಾಣುತ್ತದೆ. ಅರ್ಹತೆ (ಮೆರಿಟ್) ಪದ್ಮತಿಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದೆ ಆದರೆ, ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ತುಂಬಾ ಅನ್ಯಾಯವಾಗಿ, ಇದೇ ವೃತ್ತಿಯ ಮೇಲೆ ಅವಲಂಬನೆ ಆಗಿರುವ ಅವರ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂಬ ನೋವಿನ ಸಂಗತಿಯನ್ನು ತಿಳಿಸುತ್ತಾ, ಕಳೆದ 5-6 ವರ್ಷಗಳಲ್ಲಿ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಶ್ರಮದ ಸೇವೆಯ ಪ್ರಭಾವದಿಂದ 100ಕ್ಕೆ 90ರಷ್ಟು ಫಲಿತಾಂಶವನ್ನು ನೀಡುತ್ತಾ ಬಂದಿದ್ದು, ಇದನ್ನು ಇಲಾಖೆಯ ಕಡೆಯಿಂದ ತಾವುಗಳು ಮಾಹಿತಿ ಪಡೆಯಬಹುದು ಎಂಬುದನ್ನು ಮನವರಿಕೆ ಮಾಡುತ್ತಾ, ವೇತನ ತಾರತಮ್ಯವಿದ್ದರೂ ಕೂಡ ಮಕ್ಕಳ ಭವಿಷ್ಯದ ದೃಷ್ಟಿಯಿಂದ, ಇಲಾಖೆಯ ಗೌರವದ ಪ್ರತಿಷ್ಠೆಯನ್ನು ಹೆಚ್ಚಿಸುವ ಕಾರಣದಿಂದ ನಮ್ಮ ವೈಯಕ್ತಿಕ ಕಷ್ಟಗಳನ್ನು ಮೆಟ್ಟಿನಿಂತು ನಮ್ಮ ಕಾರ್ಯ ಕ್ಷಮತೆಯಿಂದ ಸೇವೆಯನ್ನೂ ಸಲ್ಲಿಸುತ್ತಾ ಬಂದಿದ್ದೇವೆ. ಕಲ್ಯಾಣ ಅಧಿಕಾರಿಗಳ ಕಛೇರಿ, ಬೀದರ.