11/06/2025 12:42 PM

Translate Language

Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಸಭೆ ಜಿಲ್ಲಾ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ.!

ಅತಿಥಿ ಉಪನ್ಯಾಸಕರ ಸಭೆ ಜಿಲ್ಲಾ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ.!

Facebook
X
WhatsApp
Telegram

ಬೀದರ.16.ಮಾರ್ಚ.25:-ಬೀದರ ಜಿಲ್ಲೆಯ ಔರಾದ (ಬಾ) ತಾಲ್ಲೂಕಿನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರುಗಳ ಸಭೆ ದಿ. ೧೫-೦೩-೨೦೨೫ ರಂದು ಜರುಗಿತು. ಸಭೆಯಲ್ಲಿ ಅತಿಥಿ ಉಪನ್ಯಾಸಕರುಗಳ ಸಮಸ್ಯೆಗಳು, ಸಂಘದ ಬಲವರ್ಧನೆ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ಸಭೆಯ ಅಧ್ಯಕ್ಷತೆ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಪ್ರವೀಣಕುಮಾರ ಮೀರಾಗಂಜಕರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ನಮ್ಮ ಸಮಸ್ಯೆಗಳಿಗೆ ಹಾಗೂ ನಮ್ಮ ಹಕ್ಕುಗಳನ್ನು ಪಡೆಯಲು ಸಂಘ ಅತ್ಯಂತ ಅವಶ್ಯಕವಾಗಿದೆ. ತಾವೆಲ್ಲರೂ ಸಂಘಟಿತರಾಗಿರಬೇಕು. ಏನೇ ಸಮಸ್ಯೆಗಳು ಎದುರಾದಾಗ ನಮ್ಮ ಸಂಘ ಸಂಪೂರ್ಣ ತಮ್ಮ ಜೊತೆಗೆ ಇರುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕಾರ್ಯದಶಿಗಳಾದ ಶ್ರೀ ಸಂತೋಷ ಲದ್ದೆ ಅವರು ಮಾತನಾಡಿ ರಾಜ್ಯಾಧ್ಯಕ್ಷರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಒಂದಾಗಿ ನಡೆಯೋಣ ಎಂದು ನುಡಿದರು.  ಇದೇ ಸಂದರ್ಭದಲ್ಲಿ ಔರಾದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಆಯ್ಕೆ ಎಲ್ಲರ ಸಮ್ಮುಖದಲ್ಲಿ ನಡೆಯಿತು.

ಔರಾದ ತಾಲೂಕು ಘಟಕದ ನೂತನ

ಅಧ್ಯಕ್ಷರಾಗಿ-ಆಶೀಷಕುಮಾರ ಶೇಳಕೆ, ಉಪಾಧ್ಯಕ್ಷರಾಗಿ-ಶಾಂತಕುಮಾರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ-ಪುಷ್ಪರಾಜ ಖರಾತ್,  ಜಂಟಿ ಕಾರ್ಯದರ್ಶಿಯಾಗಿ-ಶಿವಕುಮಾರ ಹಾಗೂ ಕು. ಪೂರ್ಣಿಮಾ, ಸಂಘಟನಾ ಕಾರ್ಯದರ್ಶಿಯಾಗಿ- ಅನೀಲ, ಸುಮಿತಾ, ಲೂಸಿ, ಕೋಶಾಧ್ಯಕ್ಷರಾಗಿ- ಅಭಿಷೇಕ, ಸಲಹೆಗಾರರಾಗಿ- ಸಂದೀಪ ಕುಲಕರ್ಣಿ, ಬಾಲಾಜಿ, ಅಶ್ವಿನಿ ಲಕ್ಕಾ,  ರಾಣಿ, ಸದಸ್ಯರಾಗಿ- ಸಂತೋಷಿ, ಆರತಿ, ಅಂಬಿಕಾ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

ಮತ್ತು ಇವರೆಲ್ಲರೂ ತಕ್ಷಣವೇ ತಮ್ಮ ತಮ್ಮ ಜವಾಬ್ದಾರಿಗಳನ್ನು ತಕ್ಷಣವೇ ವಹಿಸಿಕೊಂಡು ಕಾರ್ಯಪ್ರವೃತ್ತರಾಗಿ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.


ಈ ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಕು. ಕೀರ್ತಿ ಜಿಲ್ಲಾ ಕೋಶಾಧ್ಯಕ್ಷರಾದ ಅಶ್ವಿನಿ ಸುನೀಲ, ಮತ್ತು ಔರಾದ ಪಾಲಿಟೆಕನಿಕ್ ಕಾಲೇಜಿನ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದಶಿಗಳಾದ ಜಗದೀಶ ದೇಸಾಯಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!