ರಾಜ್ಯ ಸರ್ಕಾರಕ್ಕೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಆಗ್ರಹ | ಮೃತರಿಗೆ ಪರಿಹಾರ ನೀಡಿ.
ಚಿಕ್ಕಬಳ್ಳಾಪುರ.23.ಮಾರ್ಚ್.25:- ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಆಧಾರ ಸ್ತಂಭಗಳಾಗಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಎರಡು ದಶಕದ ಬೇಡಿಕೆ ಯನ್ನು ಮಾನವೀಯತೆ ಆಧಾರದಲ್ಲಿ ಈಡೇರಿಸಲು ಸರ್ಕಾರ ಮನಸ್ಸು ಮಾಡ ಬೇಕು, ಅಕಾಲಿಕ ಮರಣಕ್ಕೀಡಾ ದಲ್ಲಿ 20 ಲಕ್ಷ ಪರಿಹಾರ ನೀಡಬೇಕು, ಸರ್ಕಾರ ಘೋಷಣೆ ಮಾಡಿರುವ ಇಡಿಗಂಟನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರಹೊರವಲಯಸರ್ಕಾರಿಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ಏರ್ಪಡಿಸಿದ್ದಮೃತ ಅತಿಥಿ ಉಪನ್ಯಾಸಕ ನರಸಿಂಹಪ್ಪ ಅವರ ಸಹಾಯರ್ಥಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಹಾರ ಕೊಡಿಸುವ ಭರವಸೆ:
ಚಿಂತಾ ಮಣಿ ನಗರದ ಬಾಲಕರ ಪದವಿ ಕಾಲೇಜಿ ನಲ್ಲಿ ಅತಿಥಿ ಉಪನ್ಯಾಸಕನಾಗಿದ್ದ ನರಸಿಂಹಪ್ಪ ಬೊಮ್ಮೆಕ್ಕಲ್ಲು ಗ್ರಾಮದವ ರಾಗಿದ್ದು, ಅಕಾಲಿಕ ಮರಣಕ್ಕೆ ತುತ್ತಾಗಿ ದ್ದಾರೆ. ಅವರನ್ನು ನಂಬಿಕೊಂಡಿದ್ದ ಕುಟುಂಬ ಬೀದಿಗೆ ಬಿದ್ದಿದೆ.
ಉನ್ನತ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಈ ಕುಟುಂಬಕ್ಕೆ 10 ಲಕ್ಷ ಪರಿಹಾರ, ಆತನ ಮಡದಿಗೆ ಉದ್ಯೋಗ ನೀಡಲು ಮುಂದಾಗಬೇಕು. ಈ ಬಗ್ಗೆ ಶೀಘ್ರವೇ ಡಾ.ಎಂ.ಸಿ. ಸುಧಾಕರ್ ಅವರೊಂದಿಗೆ ಚರ್ಚಿಸಿನೆರವು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಪರಿಹಾರದ ಚೆಕ್ ಹಸ್ತಾಂತರ:
ಜೆ.ಹೆಚ್ .ಪಟೇಲ್ಫೌಂಡೇಷನ್ನಿಂದನರಸಿಂಹಪ್ಪ ಅವರಮಡದಿಪುಷ್ಪ ಅವರಿಗೆ 10ಸಾವಿರದ ಚೆಕ್ ನೀಡಲಾಯಿತು.ಅಂತೆಯೇ ಜೆಡಿ ಯು ಪಕ್ಷದಿಂದ ಆಗೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿರುವ ಡಾ.ನಾಗ ರಾಜ್5ಸಾವಿರನಗದುನೀಡಿದರು.ಇದೇ ವೇಳೆ ಜಿಲ್ಲಾ ಅತಿಥಿ ಉಪನ್ಯಾಸಕ ಸಂಘದ ಮನವಿಗೆ ಓಗೊಟ್ಟು ನೆರವಿನ ರೂಪದಲ್ಲಿ ನೀಡಿದ್ದ 54 ಸಾವಿರ ರೂಗಳನ್ನು ಕೂಡ ಹಸ್ತಾಂತರಿಸಲಾಯಿತು.
ಈವೇಳೆಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲಜಿ.ಡಿ.ಚಂದ್ರಯ್ಯ, ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಎಂ ಅರಿಕೆರೆ, ಪ್ರಧಾನ ಕಾರ್ಯದರ್ಶಿ ವೆಂಕಟೋಣಪ್ಪ, ಪದಾಧಿ ಕಾರಿಗಳಾದ ರಾಜಶೇಖರ್, ಹರೀಶ್,ಸಿ ಗಂಗಾಧರ್, ಗಂಗಾಧರಪ್ಪ ಎನ್ ಮತ್ತಿತರರು ಇದ್ದರು.