ಮೈಸೂರು.17.ಜೂನ್.25:- ರಾಜ್ಯದಲ್ಲಿ ಕಾರ್ಯ ನಿರ್ವಹಿಸ್ತಿರುವ ಅತಿಥಿ ಉಪನ್ಯಾಸಕರು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಪ್ರತಿನಿಧಿಸುವ ತಿ.ನರಸೀಪುರ ಕ್ಷೇತ್ರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಒಂದು ವರ್ಷದಿಂದಲೂ ಗೌರವಧನ ದೊರೆಯದೇ, ಅವರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.
ಶೈಕ್ಷಣಿಕ ವರ್ಷಪೂರ್ತಿ ಅಂದರೆ, ಹೋದ ವರ್ಷದ ಜೂನ್ನಿಂದ ಈ ಮಾರ್ಚ್ವರೆಗೂ ತಮಗೆ ವಹಿಸಿದ ಬೋಧನೆಯ ಕೆಲಸವನ್ನು ಅವರು ಮಾಡಿದ್ದಾರೆ. ಅದಕ್ಕೆ ತಕ್ಕಂತೆ ದೊರೆಯಬೇಕಾದ ‘ಗೌರವಧನ’ ಅವರಿಗೆ ಸಿಕ್ಕಿಲ್ಲ. ಪ್ರಸಕ್ತ ಸಾಲಿನಲ್ಲಿ ಅವರನ್ನು ಕೆಲಸದಲ್ಲಿ ಮುಂದುವರಿಸುವ ಖಾತ್ರಿಯೂ ಸಿಗದಿರುವುದು ಅವರಿಗೆ ದಿಕ್ಕೇ ತೋಚದಂತಾಗಿದೆ.
ತಿ.ನರಸೀಪುರ ಪಟ್ಟಣದಲ್ಲಿರುವ ಆ ಕಾಲೇಜಿನಲ್ಲಿ ಹೋದ ವರ್ಷ ಪ್ರಥಮ ಪಿಯು ಹಾಗೂ ದ್ವಿತೀಯ ಪಿಯು ಸೇರಿ 832 ವಿದ್ಯಾರ್ಥಿಗಳಿದ್ದರು. ಒಟ್ಟು ಏಳು ಸಂಯೋಜನೆಗಳಿವೆ (ಪಿಸಿಎಂಬಿ, ಪಿಸಿಎಂಸಿಎಸ್, ಎಚ್ಇಬಿಎ, ಇಜಿಬಿಎ, ಇಬಿಎಸಿಎಸ್, ಎಚ್ಇಎಸ್ಪಿ, ಎಚ್ಇಜಿಪಿ). ತಿ.ನರಸೀಪುರ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಮಾತ್ರವಲ್ಲದೇ, ನಂಜನಗೂಡು, ಕೊಳ್ಳೇಗಾಲ ತಾಲ್ಲೂಕಿನ ಮಕ್ಕಳೂ ಇಲ್ಲಿಗೆ ಅಧ್ಯಯನಕ್ಕೆ ಬರುತ್ತಾರೆ. ಅವರಿಗೆ ಬೋಧಿಸಲು ಉಪನ್ಯಾಸಕರ ಕೊರತೆ ಇರುವುದರಿಂದಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಒಬ್ಬ ಕಾಯಂ ಉಪನ್ಯಾಸಕರಿಗೆ 320 ಮಂದಿಯ ಅನುಪಾತವಿದೆ! ಕನ್ನಡ ಹಾಗೂ ಇಂಗ್ಲಿಷ್ಗೆ ತಲಾ ಒಬ್ಬರು, ಪಿಸಿಎಂಸಿ, ಸಮಾಜವಿಜ್ಞಾನ, ಅರ್ಥಶಾಸ್ತ್ರ ವಿಷಯಗಳಿಗೆ ಕಾಯಂ ಉಪನ್ಯಾಸಕರಿದ್ದಾರೆ.
ಕೊರತೆಯ ಕಾರಣದಿಂದ: ಉಪನ್ಯಾಸಕರ ಕೊರತೆ ಕಾರಣದಿಂದಾಗಿ, ಅಂಜನ್ ಕುಮಾರ್ (ಅರ್ಥಶಾಸ್ತ್ರ), ಕವಿತಾ, ಗಿರೀಶ್ (ಇಂಗ್ಲಿಷ್), ರಾಜೇಂದ್ರಪ್ರಸಾದ್ (ವಾಣಿಜ್ಯ), ರಾಜಮ್ಮ (ಇತಿಹಾಸ) ಹಾಗೂ ಮಣಿ ಜೆ. (ಕನ್ನಡ) ಎನ್ನುವವರನ್ನು ಗೌರವಧನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಎಂ.ಎ. ಬಿಇಡಿ ವಿದ್ಯಾರ್ಹತೆಯ ಇವರು, ಕಾಯಂ ಕೆಲಸ ಸಿಗದೆ ಇರುವುದರಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಗೆ ತಿಂಗಳಿಗೆ ತಲಾ ₹ 12ಸಾವಿರದಂತೆ 10 ತಿಂಗಳ ಗೌರವಧನ ಬರುವುದು ಬಾಕಿ ಇದೆ.
ಇವರು ಅಲ್ಲಿ ಅತಿಥಿ ಉಪನ್ಯಾಸಕರಾಗಿ ಐದು ವರ್ಷಗಳಿಂದ ಕೆಲಸ ಮಾಡಿದ್ದಾರೆ, ಹಿಂದೆಲ್ಲವೂ ಗೌರವಧನ ಬಂದಿತ್ತು. ಆದರೆ, ಕಳೆದ ವರ್ಷದ್ದು ಮಾತ್ರ ಬಾಕಿ ಇದೆ.
‘ಗೌರವಧನ’ಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳನ್ನೂ ಭೇಟಿಯಾಗಿದ್ದಾರೆ. ಅದು ಫಲ ಕೊಟ್ಟಿಲ್ಲ. ಕ್ಷೇತ್ರದ ಶಾಸಕ ಮಹದೇವಪ್ಪ ಅವರೇ ಕಾಲೇಜು ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಅವರೂ ಗಮನಿಸಿಲ್ಲ. ಅವರತ್ತ ಇವರು, ಇವತ್ತ ಅವರು ಕೈತೋರುತ್ತಿದ್ದಾರೆ.
ಈ ಅತಿಥಿ ಉಪನ್ಯಾಸಕರನ್ನು ಮುಂದುವರಿಸಿಲ್ಲವಾದ್ದರಿಂದ, ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಕ್ಕೆ ತೊಂದರೆ ಆಗುತ್ತಿದೆ ಎನ್ನಲಾಗುತ್ತಿದೆ.
6 ಮಂದಿಗೆ ಬಾರದ ಗೌರವಧನ ಹೆಚ್ಚುವರಿ ವಿದ್ಯಾರ್ಥಿಗಳ ಕಾರಣದಿಂದ ತಾಂತ್ರಿಕ ತೊಂದರೆ ಮನವಿ ಕೊಟ್ಟು ಸಾಕಾಗಿದೆ ಎನ್ನುವ ‘ಅತಿಥಿ’ಗಳು
ಡಿ.ಸಿ. ಲಿಂಗರಾಜು ಪ್ರಾಂಶುಪಾಲನಮ್ಮಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ಮೂವರು ಅತಿಥಿ ಉಪನ್ಯಾಸಕರಿಗೆ ಸಿಡಿಸಿಯಿಂದ ಗೌರವಧನ ಕೊಡಲಾಗಿದೆ. ಉಳಿದ 6 ಮಂದಿಗೆ ಅಲ್ಲಿ ಹಣವಿಲ್ಲ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಆಲಗೂಡು ಶಿವಕುಮಾರ್ ಜಿಲ್ಲಾ ಸಂಚಾಲಕ ದಸಂಸತಾಂತ್ರಿಕ ಕಾರಣಗಳೇನೇ ಇರಲಿ ದುಡಿಸಿಕೊಂಡ ಮೇಲೆ ಗೌರವಧನ ಕೊಡಲೇಬೇಕು. 10 ತಿಂಗಳ ಗೌರವಧನ ಬಾರದಿದ್ದರೆ ಅವರ ಜೀವನ ನಿರ್ವಹಣೆ ಹೇಗೆ?
‘ಅಲೆದಾಡುತ್ತಲೇ ಇದ್ದೇವೆ’ ‘ಕಳೆದ ವರ್ಷ ಸಂಪೂರ್ಣವಾಗಿ ಕೆಲಸ ಮಾಡಿದ್ದೇವೆ. ಇದಕ್ಕೆ ಪ್ರತಿಯಾಗಿ ಗೌರವಧನ ಸಿಕ್ಕಿಲ್ಲ. ಪ್ರಾಂಶುಪಾಲರು ಉಪನಿರ್ದೇಶಕರ ಕಚೇರಿ ಪದವಿಪೂರ್ವ ಶಿಕ್ಷಣ ಇಲಾಖೆ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಎರಡು ಬಾರಿ ಮನವಿ ಕೊಟ್ಟಿದ್ದೇವೆ.
ಇಷ್ಟಾಗಿಯೂ ದೊರೆತಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿಯಿಂದಾಗಲಿ ಇಲಾಖೆಯಿಂದಾಗಲಿ ಕೊಟ್ಟಿಲ್ಲ. ಇದರಿಂದಾಗಿ ಅತಂತ್ರವಾಗಿದ್ದೇವೆ. ಪ್ರಾಂಶುಪಾಲರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಅಂಜನ್ಕುಮಾರ್ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು. ‘ಜೀವನ ನಿರ್ವಹಣೆಗೆ ತುಂಬಾ ತೊಂದರೆಯಾಗಿದೆ. ಕಚೇರಿಗಳಿಗೆ ಸುತ್ತಿ ಸಾಕಾಗಿದೆ’ ಎಂದು ತಿಳಿಸಿದರು.