ರಾಯಚೂರು.09.ಆಗಸ್ಟ್.25: ಭಾರತೀಯ ಸೇನೆ ಸೇರ ಬಯಸಲು ಅಗ್ನಿವೀರ್ ಸೇನಾ ಭರ್ತಿಗಾಗಿ ರಾಯಚೂರು ನಗರಕ್ಕೆ ಆಗಮಿಸುತ್ತಿರುವ ಅಭ್ಯರ್ಥಿಗಳಿಗೆ ನಗರದ ಶ್ರೀ ಈಶ್ವರ ದೇವಸ್ಥಾನದ ಸರ್ವ ಸದಸ್ಯರು ಹಾಗೂ ರಾಯಚೂರಿನ ದಾನಿಗಳು ಮತ್ತು ಸೇವಾ ಕಾರ್ಯಕರ್ತರು ಪ್ರಸಾದ ವ್ಯವಸ್ಥೆಗೆ ಏರ್ಪಾಡು ಮಾಡಿದ್ದಾರೆ.
ಈ ಸೇವಾ ಕಾರ್ಯಕರ್ತರು ಪ್ರಸಾದ ಸೇವೆಗಾಗಿ ಸತತ ನಾಲ್ಕು ಗಂಟೆ ಸಮಯ ಮೀಸಲಿಟ್ಟು, ಒಳ್ಳೆಯ ಕಾರ್ಯದಲ್ಲಿ ಪಾಲ್ಗೊಳ್ಳುವುದು. ಈ ಮೂಲಕ ನಾವು ಸಹ ಭಾರತೀಯ ಸೇನೆ ಜೊತೆಗೆ ಇದ್ದೇವೆ ಎಂದು ಹೆಮ್ಮೆಯಿಂದ ಹೇಳುವುದು ಇತರರಿಗೆ ಸ್ಪೂರ್ತಿದಾಯಕವಾದ ಕಾರ್ಯವಾಗಿದೆ.