10/06/2025 3:23 AM

Translate Language

Home » ಲೈವ್ ನ್ಯೂಸ್ » ಅಂಬಳೆ ಗ್ರಾಮಪಂಚಾಯತಿ ಅಧ್ಯಕ್ಷರಾಗಿ ಅಂಬಳೆ ನವೀನ್ ಅವಿರೋಧವಾಗಿ ಆಯ್ಕೆ.

ಅಂಬಳೆ ಗ್ರಾಮಪಂಚಾಯತಿ ಅಧ್ಯಕ್ಷರಾಗಿ ಅಂಬಳೆ  ನವೀನ್  ಅವಿರೋಧವಾಗಿ ಆಯ್ಕೆ.

Facebook
X
WhatsApp
Telegram



ಚಾಮರಾಜನಗರ.16.ಏಪ್ರಿಲ್.25:- ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮಪಂಚಾಯತಿಯಲ್ಲಿ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ  ಅಂಬಳೆ ನವೀನ್ ಎಂಬುವವರು ಬುಧವಾರ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಇವರು ಯಳಂದೂರು ತಾಲ್ಲೂಕಿನಲ್ಲಿ ಯುವ ಮುಖಂಡರಾಗಿ ಪರಿಚಯವಾಗಿ ಅಪಾರ ಯುವಕರ ಬಳಗವನ್ನು ಹೊಂದಿದ್ದಾರೆ.


ಇವರು ಬಿ ಇ ಪದವಿ ಮುಗಿಸಿದ್ದಾರೆ. ಜನ ಸೇವೆ ಗೋಸ್ಕರ ಗ್ರಾಮ ಪಂಚಾಯತಿಯಲ್ಲಿ ಸದಸ್ಯರಾಗಿ ಸೇವೆಸಲ್ಲಿಸಿ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ.

ಅಂಬಳೆ  ಗ್ರಾಮಪಂಚಾಯತಿ ಅಧ್ಯಕ್ಷರಾಗಿ ನಂಜುಂಡಸ್ವಾಮಿ ರವರು  ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವುಗೊಂಡಿದ್ದ ಸ್ಥಾನಕ್ಕೆ  ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ನವೀನ್  ಮಾತ್ರ ನಾಮ ಪತ್ರ ಸಲ್ಲಿಸಿದರು ಉಳಿದವರು ಯಾರು?  ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಚಂದ್ರಶೇಖರ ಮೂರ್ತಿ‌ರವರು ಎಲ್ ನವೀನ್ ರವರನ್ನು ಅಂಬಳೆ ಗ್ರಾಮಪಂಚಾಯತಿ ಅಧ್ಯಕ್ಷರೆಂದು  ಅವಿರೋಧವಾಗಿ ಆಯ್ಕೆಮಾಡಿದರು.
ನೂತನ ಅಧ್ಯಕ್ಷರಿಗೆ  ಸೇಬಿನಹಾರ,  ಹೂವಿನಹಾರ ಮೈಸೂರು ಪೇಟತೊಡಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ನೂತನ ಅಧ್ಯಕ್ಷ ಎಲ್ ನವೀನ್  ಮಾತನಾಡಿ ಅಂಬಳೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಇನ್ನಷ್ಟು ಜವಾಬ್ದಾರಿ ಹೆಚ್ಚಾಗಿದೆ.  ಸರಕಾರದಿಂದ ಬರುವ ಸವಲತ್ತುಗಳನ್ನು ಗ್ರಾಮಪಂಚಾಯತಿ ಅಭಿವೃದ್ಧಿಗೆ ಬಳಸುತ್ತೇವೆ ಹಾಗೂ ಸಾರ್ವಜನಿಕರ ಸೇವೆಗೆ ಸದಾ ಸಿದ್ದರಾಗಿರುತ್ತೇವೆ  ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ಅಗತ್ಯವಾಗಿದೆ. ನಮ್ಮ‌ ಗ್ರಾಮಪಂಚಾಯತಿಯನ್ನು  ಮಾದರಿಯನ್ನಾಗಿಸುವುದಕ್ಕೆ ದುಡಿಯುವುತ್ತೇನೆ ಸಹಕರಿಸಿದ ಎಲ್ಲಾರಿಗೂ ಅಭಿನಂದನೆಗಳು  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರಾದ  ಸಿದ್ದನಾಯಕ, ರಾಜಣ್ಣ, ಸ್ವಾಮಿ, ಸುಜಾತ, ನಾಗಮ್ಮ, ನಂಜರಾಜು,ಮಹೇಶ್ವರಿ ಚಾಮರಾಜು,ರೇವಣ್ಣ,ರಾಣಿ, ಮಾಲಾಸಿದ್ದರಾಜು,ಮಹದೇವಸ್ವಾಮಿ, ಗೀತಾ ಮಹೇಶ್, ಅರುಣಕುಮಾರಿ ಮಹೇಶ್ ಸ್ನೇಹಿತರಾದ ಆನಂದ್, ಸಂದೀಪ್ , ಪಿಡಿಒ ಕಾವ್ಯ, ಕಾರ್ಯದರ್ಶಿ ಪುಟ್ಟರಾಜು, ಗ್ರಾಪಂ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು

ವರದಿಗಾರ: ಜಿ ಪ್ರಸ್ಸನ್ ಕುಮಾರ್ ಕಿತ್ತೂರ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!