14/08/2025 2:04 AM

Translate Language

Home » ಲೈವ್ ನ್ಯೂಸ್ » ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧನಿದ್ದರೇ ಮಾತ್ರ ವ್ಯಾಪಾರದಲ್ಲಿ ಯಶಸ್ಸು – ಸಿದ್ದಣ್ಣ

ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧನಿದ್ದರೇ ಮಾತ್ರ ವ್ಯಾಪಾರದಲ್ಲಿ ಯಶಸ್ಸು – ಸಿದ್ದಣ್ಣ

Facebook
X
WhatsApp
Telegram

ಕೊಪ್ಪಳ.13.ಆಗಸ್ಟ್.25:- ವ್ಯಾಪಾರ ವ್ಯವಹಾರ ಮಾಡುವವರು ಅಂಗಿ ಕಳೆದು ಹಮಾಲಿ ಮಾಡಲು ಸಿದ್ಧರಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ನಾಲ್ವಡ ಅವರು ಹೇಳಿದ್ದಾರೆ.

ನಗರದ ಶೋಭಾ ಹಾಲ್ ನಲ್ಲಿ ಹುಬ್ಬಳ್ಳಿಯ ಛೇಂಬರ್ ಆಫ್ ಕಾಮರ್ಸ್  ಕೊಡಮಾಡಿದ ವಾಣಿಜ್ಯ ರತ್ನ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಛೋಪ್ರಾ ಕುಟುಂಬ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕಾರ  ಮಾಡಿ ಅವರು ಮಾತನಾಡಿದರು.

ರಾಜ್ಯ ಸದಸ್ಯ ಸಿ. ವಿ. ಚಂದ್ರಶೇಖರ ಮಾತನಾಡಿ, ಸಿದ್ದಣ್ಣ ನಾಲ್ವಡ ಅವರು ಶ್ರೀ ಗವಿಸಿದ್ದಶ್ವರ ಅವರ ಪರಮ ಭಕ್ತರಾಗಿದ್ದಾರೆ. ಅವರ ವ್ಯಾಪಾರ ಕ್ಷೇತ್ರದಲ್ಲಿ ಬಹುದೊಡ್ಡ ಸೇವೆ ಮಾಡಿದ್ದಾರೆ. ಹಾಗೆ ಸಮಾಜ‌ ಮುಖಿ ಕಾರ್ಯದಲ್ಲಿಯೂ ಸದಾ ಮುಂಚೂಣಿಯಲ್ಲಿದ್ದಾರೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯ ಮಹೇಂದ್ರ ಛೋಪ್ರಾ ಅವರು ಮಾತನಾಡಿ, ವಾಣಿಜ್ಯೋದ್ಯಮಿಗಳಾದ ಸಿದ್ದಣ್ಣ ನಾಲ್ವಡ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ಬಂದಿರುವುದು ಕೊಪ್ಪಳದ ಹೆಮ್ಮೆಯಾಗಿದೆ. ಅವರು ವರ್ತಕರಾಗಿ ದೊಡ್ಡ ಸೇವೆ ಮಾಡಿದ್ದಾರೆ ಎಂದರು. ಅತ್ಯಂತ ಕಿರಿದಾದ ವ್ಯಾಪಾರ ಮಾಡುತ್ತಲೇ ಮೇಲೆ ಬಂದಿದ್ದಾರೆ ಎಂದರು. ಯಾರಾದರೂ ಜಗಳವಾಡಿಕೊಂಡು ಬಂದರೆ ಅದನ್ನು ಅತ್ಯಂತ ಸೂಕ್ಷ್ಮವಾಗಿ ಇತ್ಯರ್ಥ ಮಾಡುತ್ತಾರೆ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸವರಾಜ ಪುರದ ಅವರು ಮಾತನಾಡಿ, ಸಿದ್ದಣ್ಣ ನಾಲ್ವಡ ಅವರಿಗೆ ವಾಣಿಜ್ಯ ರತ್ನ ಬಂದಿದ್ದು ಅತ್ಯಂತ ಸೂಕ್ತವಾಗಿದೆ ಎಂದರು
ಕಾಂತಿಲಾಲ ಛೊಪ್ರಾ, ಮಲ್ಲಣ್ಣ ಬಳ್ಳೊಳ್ಳಿ, ಸಿಎ ಅಸೋಸಿಯೇಷನ್ ಅಧ್ಯಕ್ಷರಾದ ಸಂಜಯ ಕೊತ್ಬಾಳ, ಚಂದ್ರಕಾಂತ ತಾಲೆಡ, ಭಾರತಿ ನಾಲ್ವಡ, ಲಲಿತಾ ಛೊಪ್ರಾ ಇದ್ದರು. ಪದಮ ಮೇಹತಾ ಅವರು ಕಾರ್ಯಕ್ರಮ ನಿರೂಪಿಸಿದರು.

13ಕೆಪಿಎಲ್32 ಕೊಪ್ಪಳ ನಗರದ ಶೋಬಾ ಹಾಲ್ ನಲ್ಲಿ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ  ಸಿದ್ದಣ್ಣ ನಾಲ್ವಡ ಅವರನ್ನು ಸನ್ಮಾನಿಸಲಾಯಿತು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD