10/06/2025 12:35 AM

Translate Language

Home » ಲೈವ್ ನ್ಯೂಸ್ » ಅಂಗವಿಕಲರಿಗೆ ಬ್ಯಾಂಕ ಕೆವೈಸಿ KYC ಮಾರ್ಗಸೂಚಿ ಪರಿಷ್ಕರಿಸಿ: ಸುಪ್ರೀಂ ಕೋರ್ಟ್.!

ಅಂಗವಿಕಲರಿಗೆ ಬ್ಯಾಂಕ ಕೆವೈಸಿ KYC ಮಾರ್ಗಸೂಚಿ ಪರಿಷ್ಕರಿಸಿ: ಸುಪ್ರೀಂ ಕೋರ್ಟ್.!

Facebook
X
WhatsApp
Telegram

ಹೊಸ ದೆಹಲಿ.01.ಮೇ.25:-ಅಂಗವಿಕಲರು ಮತ್ತು ದೃಷ್ಟಿ ನ್ಯೂನತೆ ಇರುವವರಿಗೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಾಗೂ ಬ್ಯಾಂಕ್‌ ಖಾತೆ ತೆರೆಯಲು, ಸೌಲಭ್ಯಗಳ ಲಭ್ಯತೆಯೂ ಮೂಲಭೂತ ಹಕ್ಕು ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್‌, ಅಂಗವಿಕಲರು, ಅಂಧರು, ಆಯಸಿಡ್‌ ದಾಳಿಯ ಸಂತ್ರಸ್ತರಿಗೆ ಡಿಜಿಟಲ್‌ ಕೆವೈಸಿ ಸರಾಗವಾಗು ವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ಇದಕ್ಕಾಗಿ ಡಿಜಿಟಲ್‌ ಕೆವೈಸಿ ಮಾರ್ಗಸೂಚಿಯಲ್ಲಿ ಬದಲಾವಣೆಗಳನ್ನು ತರುವಂತೆಯೂ ಕೇಂದ್ರಕ್ಕೆ ನಿರ್ದೇಶನ ನೀಡಿದೆ.

ಅಂಗವಿಕಲರು ಮತ್ತು ದೃಷ್ಟಿ ನ್ಯೂನತೆ ಇರುವವರಿಗೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಾಗೂ ಬ್ಯಾಂಕ್‌ ಖಾತೆ ತೆರೆಯಲು, ಕ್ಷೇಮಾಭಿವೃದ್ಧಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಅಂಥವರಿಗೆ ಕೆವೈಸಿಯಂತಹ ಡಿಜಿಟಲ್‌ ಪ್ರಕ್ರಿಯೆ ಸರಳವಾಗಬೇಕು. ಡಿಜಿಟಲ್‌ ಸೌಲಭ್ಯ ಲಭ್ಯತೆಯ ಹಕ್ಕು ಎನ್ನುವುದು ಸಂವಿಧಾನದ 21ನೇ ವಿಧಿಯಡಿ ಬರುವ ಜೀವಿಸುವ ಹಕ್ಕು ಎಂದಿದೆ.

ಯಾವುದೇ ಬ್ಯಾಂಕ್‌ ಖಾತೆ ತೆರೆಯಲು ಮತ್ತು ಸರ್ಕಾರಿ ಯೋಜನೆಗಳ ಲಾಭಪಡೆಯಲು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ. ಆದರೆ, ಆನ್‌ಲೈನ್‌ ಕೈವಿಸಿಯಿಂದ ಅಂಧರು ಮತ್ತು ಆಯಸಿಡ್‌ ದಾಳಿಗೊಳಗಾದವರು ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಲಿ ಇರುವ ಕೆವೈಸಿ ನಿಯಮವಾಳಿಯಿಂದ ಇಂಥವರು ಡಿಜಿಟಲ್ ವ್ಯವಸ್ಥೆಯಿಂದಲೇ ದೂರವುಳಿಯುವ ಸಾಧ್ಯತೆ ಇದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಹೀಗಾಗಿ ಕೈವಿಸಿ ವಿನ್ಯಾಸವನ್ನು ಎಲ್ಲರಿಗೂ ಸರಿಹೊಂದುವಂತೆ ಬದಲಾಯಿಸುವ ಅಗತ್ಯವನ್ನು ನ್ಯಾಯಾಲಯ ಮನಗಂಡಿದೆ

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!