ಛಲವಾದಿ ಮಹರ್ (ಹೊಲೆಯ) ಬಂಧುಗಳೇ,
ಕರ್ನಾಟಕ ಸರ್ಕಾರ, ಪರಿಶಿಷ್ಟ ಜಾತಿಗಳೊಳಗಿನ ಒಳಮೀಸಲಾತಿಗಾಗಿ 101 ಜಾತಿ ಜನಾಂಗದವರ ಸಮೀಕ್ಷೆ ನಡೆಸಲು ರಾಜ್ಯಾದ್ಯಂತ 54,000 ಶಿಕ್ಷಕರನ್ನು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿದೆ. ಈಗಾಗಲೇ ಈ ಸಮೀಕ್ಷೆ ಆರಂಭಗೊಂಡಿದ್ದು, ಅದರ ಪ್ರಯುಕ್ತ ನಿಮ್ಮ ಮನೆಗೆ ಸರ್ಕಾರಿ ಅಧಿಕಾರಿಗಳು ಬರುವ ಸಾಧ್ಯತೆ ಇದೆ.
ಇಲ್ಲಿಯವರೆಗೆ ಬಹುಮಂದಿ ನಾವು ಮತ್ತು ನಮ್ಮ ಮಕ್ಕಳು ಶಿಕ್ಷಣ ಹಾಗೂ ಇತರೆ ದಾಖಲೆಗಳಲ್ಲಿ ನಮ್ಮ ಜಾತಿಯನ್ನು:
1. ಆದಿ ಕರ್ನಾಟಕ (AK)
2. ಆದಿ ದ್ರಾವಿಡ (AD)
3. ಆದಿ ಆಂಧ್ರ (AA)
ಎಂದು ನಮೂದಿಸಿರುವುದಾಗಿ ಕಂಡುಬಂದಿದೆ. ಆದರೆ ನಾವು ಮೂಲ ಜಾತಿಯಾಗಿ “ಹೊಲೆಯ” ಆಗಿರುವುದರಿಂದ ಈ ರೀತಿಯ ಹೆಸರುಗಳನ್ನು ಬಳಸುವುದರಿಂದ ನಮ್ಮ ನಿಜವಾದ ಜನಸಂಖ್ಯೆ ಸರಿಯಾಗಿ ದಾಖಲಾಗದ ಅಪಾಯವಿದೆ.
ಆದ್ದರಿಂದ, ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು, ಈ ಸಮೀಕ್ಷೆಯಲ್ಲಿ ಭಾಗವಹಿಸುವಾಗ ಮತ್ತು ಮುಂದಿನ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಖಂಡಿತವಾಗಿ “ಹೊಲೆಯ” ಎಂದುಲೇ ನಮೂದಿಸಬೇಕು. ಇದರಿಂದ ಮಾತ್ರ ನಮ್ಮ ಸಮುದಾಯದ ಶಕ್ತಿಯು ಸರಿಯಾಗಿ ಪ್ರಾತಿನಿಧ್ಯ ಪಡುವುದು ಸಾಧ್ಯ.
ಔರಾದ ತಾಲೂಕು ಹೊಲೆಯ ಜಾಗೃತಿ ಸಮಿತಿ ಈ ಮೂಲಕ ಎಲ್ಲಾ ಛಲವಾದಿ ಮಹರ್ (ಹೊಲೆಯ) ಬಂಧುಗಳಿಗೆ ಮನವಿ ಮಾಡುತ್ತದೆ:
ಸರ್ಕಾರಿ ಸಮೀಕ್ಷಾಧಿಕಾರಿಗಳು ನಿಮ್ಮ ಮನೆಗೆ ಬಂದಾಗ “ಹೊಲೆಯ” ಎಂದುಲೇ ನಿಖರವಾಗಿ ಹೇಳಿ ನೋಂದಾಯಿಸಿ.
ಶಿವಕುಮಾರ ಕಾಂಬಳೆ
ಅಧ್ಯಕ್ಷರು,
ಪರಿಶಿಷ್ಟ ಜಾತಿ ಹೊಲೆಯ ಸಂಬಂಧಿತ ಹೋರಾಟ ಸಮಿತಿ, ಔರಾದ ತಾಲೂಕು
ಪ್ರಕಾಶ ಭಂಗಾರೆ ಕಾರ್ಯಧ್ಯಕ್ಷರು, ಝರೆಪ್ಪಾ ವರ್ಮಾ ಗೌರವ ಅಧ್ಯಕ್ಷರು, ಪ್ರವೀಣ ಕಾರಂಜೆ, ದನೇಶ ಶಿಂದೆ, ರತ್ನದೀಪ ಕಸ್ತೂರೆ, ಸುಂದರ ಮೇತ್ರೆ
ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…
ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…
ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ್ಯಾಲಿ…
ಬಂಧುಗಳೇ, ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…
ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…
ಅಲ್ಪಸಂಖ್ಯಾತರ ಯೋಜನೆಗಳ ಅನುಷ್ಠಾನಕ್ಕೂ ಒತ್ತು ನೀಡಿ- ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳಕೊಪ್ಪಳ.13.ಆಗಸ್ಟ್.25: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ…
View Comments
Thank you sir great news