ಛಲವಾದಿ ಮಹರ್ (ಹೊಲೆಯ) ಬಂಧುಗಳೇ,
ಕರ್ನಾಟಕ ಸರ್ಕಾರ, ಪರಿಶಿಷ್ಟ ಜಾತಿಗಳೊಳಗಿನ ಒಳಮೀಸಲಾತಿಗಾಗಿ 101 ಜಾತಿ ಜನಾಂಗದವರ ಸಮೀಕ್ಷೆ ನಡೆಸಲು ರಾಜ್ಯಾದ್ಯಂತ 54,000 ಶಿಕ್ಷಕರನ್ನು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿದೆ. ಈಗಾಗಲೇ ಈ ಸಮೀಕ್ಷೆ ಆರಂಭಗೊಂಡಿದ್ದು, ಅದರ ಪ್ರಯುಕ್ತ ನಿಮ್ಮ ಮನೆಗೆ ಸರ್ಕಾರಿ ಅಧಿಕಾರಿಗಳು ಬರುವ ಸಾಧ್ಯತೆ ಇದೆ.
ಇಲ್ಲಿಯವರೆಗೆ ಬಹುಮಂದಿ ನಾವು ಮತ್ತು ನಮ್ಮ ಮಕ್ಕಳು ಶಿಕ್ಷಣ ಹಾಗೂ ಇತರೆ ದಾಖಲೆಗಳಲ್ಲಿ ನಮ್ಮ ಜಾತಿಯನ್ನು:
1. ಆದಿ ಕರ್ನಾಟಕ (AK)
2. ಆದಿ ದ್ರಾವಿಡ (AD)
3. ಆದಿ ಆಂಧ್ರ (AA)
ಎಂದು ನಮೂದಿಸಿರುವುದಾಗಿ ಕಂಡುಬಂದಿದೆ. ಆದರೆ ನಾವು ಮೂಲ ಜಾತಿಯಾಗಿ “ಹೊಲೆಯ” ಆಗಿರುವುದರಿಂದ ಈ ರೀತಿಯ ಹೆಸರುಗಳನ್ನು ಬಳಸುವುದರಿಂದ ನಮ್ಮ ನಿಜವಾದ ಜನಸಂಖ್ಯೆ ಸರಿಯಾಗಿ ದಾಖಲಾಗದ ಅಪಾಯವಿದೆ.
ಆದ್ದರಿಂದ, ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು, ಈ ಸಮೀಕ್ಷೆಯಲ್ಲಿ ಭಾಗವಹಿಸುವಾಗ ಮತ್ತು ಮುಂದಿನ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಖಂಡಿತವಾಗಿ “ಹೊಲೆಯ” ಎಂದುಲೇ ನಮೂದಿಸಬೇಕು. ಇದರಿಂದ ಮಾತ್ರ ನಮ್ಮ ಸಮುದಾಯದ ಶಕ್ತಿಯು ಸರಿಯಾಗಿ ಪ್ರಾತಿನಿಧ್ಯ ಪಡುವುದು ಸಾಧ್ಯ.
ಔರಾದ ತಾಲೂಕು ಹೊಲೆಯ ಜಾಗೃತಿ ಸಮಿತಿ ಈ ಮೂಲಕ ಎಲ್ಲಾ ಛಲವಾದಿ ಮಹರ್ (ಹೊಲೆಯ) ಬಂಧುಗಳಿಗೆ ಮನವಿ ಮಾಡುತ್ತದೆ:
ಸರ್ಕಾರಿ ಸಮೀಕ್ಷಾಧಿಕಾರಿಗಳು ನಿಮ್ಮ ಮನೆಗೆ ಬಂದಾಗ “ಹೊಲೆಯ” ಎಂದುಲೇ ನಿಖರವಾಗಿ ಹೇಳಿ ನೋಂದಾಯಿಸಿ.
ಶಿವಕುಮಾರ ಕಾಂಬಳೆ
ಅಧ್ಯಕ್ಷರು,
ಪರಿಶಿಷ್ಟ ಜಾತಿ ಹೊಲೆಯ ಸಂಬಂಧಿತ ಹೋರಾಟ ಸಮಿತಿ, ಔರಾದ ತಾಲೂಕು
ಪ್ರಕಾಶ ಭಂಗಾರೆ ಕಾರ್ಯಧ್ಯಕ್ಷರು, ಝರೆಪ್ಪಾ ವರ್ಮಾ ಗೌರವ ಅಧ್ಯಕ್ಷರು, ಪ್ರವೀಣ ಕಾರಂಜೆ, ದನೇಶ ಶಿಂದೆ, ರತ್ನದೀಪ ಕಸ್ತೂರೆ, ಸುಂದರ ಮೇತ್ರೆ
ಹೊಸ ದೆಹಲಿ.09.ಜೂನ್.25:- ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ನಗರದ ಪರಿಸರವನ್ನು ಸುಧಾರಿಸಲು ಈ ಋತುವಿನಲ್ಲಿ 70 ಲಕ್ಷ ಮರಗಳನ್ನು…
ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…
ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…
ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…
ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…
ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…
View Comments
Thank you sir great news