ಬೆಂಗಳೂರು.11.ಮಾರ್ಚ.25:- ರಾಜ್ಯ ಉನ್ನತ ಶಿಕ್ಷಣ ಇಲಾಖೆಯೆಲ್ಲಿ ಆರಂಭಗೊಂಡಿರುವ ಹತ್ತು ಹೊಸ ವಿಶ್ವವಿದ್ಯಾನಿಲಯಗಳನ್ನು ಪೈಕಿ ಒಂಬತ್ತು ವಿಶ್ವವಿದ್ಯಾಲಯಗಳು ಮುಚ್ಚಬೇಕೇ ಬೇಡವೇ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಆದರೆ ಇರುವ ಹಳೆಯ ವಿಶ್ವವಿದ್ಯಾಲಯಗಳ ಆರ್ಥಿಕ ಮತ್ತು ಆಡಳಿತಾತ್ಮಕ ಸ್ಥಿತಿಗತಿ ಚಿಂತಾಜನಕವಾಗಿದ್ದು, ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿ ರುವುದು ಇದಕ್ಕಿಂತ ಆಘಾತಕಾರಿ ವಿಷಯ.
ರಾಜ್ಯದ 32 ವಿಶ್ವವಿದ್ಯಾಲಯಗಳಲ್ಲಿ ಬಹುತೇಕ ಕಡೆ ಸಿಬಂದಿ ಇಲ್ಲ, ಅನುದಾನ ಇಲ್ಲ, ಕುಲಪತಿಯೂ ಇಲ್ಲ!
ರಾಜ್ಯದಲ್ಲಿರುವ 32 ವಿಶ್ವವಿದ್ಯಾಲಯಗಳ ಪೈಕಿ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಉಚಯಂ ಬೋಧಕರು ಮತ್ತು ಸಿಬಂದಿಯ ತೀವ್ರ ಕೊರತೆ ಇದ್ದು, ಅಭಿವೃದ್ಧಿ ಚಟುವಟಿಕೆಗೆ ಹಣಕಾಸಿನ ಅಭಾವದತೆಗೆ ಸಿಬಂದಿಗೆ ಪಿಂಚಣಿ ನೀಡಲು, ಸ್ಥಳೀಯ ಸಂಸ್ಥೆಗಳ ತೆರಿಗೆ ಕಟ್ಟಲು, ವಿದ್ಯುತ್ ಬಿಲ್ ಪಾವತಿಸಲು ಹಣ ಹೊಂದಿಸಲು ಪರದಾಡುವ ಸ್ಥಿತಿ ಇದೆ. ಇದರ ಜತೆಗೆ ಕೆಲವು ವಿಶ್ವವಿದ್ಯಾಲಯ ಗಳಲ್ಲಿ ಖಾಯಂ ಕುಲಪತಿಗಳೂ ಇಲ್ಲ. ಒಟ್ಟಾರೆ ರಾಜ್ಯದ ಸರಕಾರಿ ಉನ್ನತ ಶಿಕ್ಷಣ ವ್ಯವಸ್ಥೆ ಕೋಮಾ ಸ್ಥಿತಿ ತಲುಪುವತ್ತ ಸಾಗುತ್ತಿದೆ.
ಮಂಗಳೂರು ವಿಶ್ವವಿದ್ಯಾಲಯಲ್ಲಿ ಸ್ಥಳೀಯ ಪಂಚಾಯತ್ಗೆ ಕೊಡಬೇಕಿರುವ 40 ಲಕ್ಷ ರೂ. ತೆರಿಗೆ ಪಾವತಿಸಲು ಹಣ ಇಲ್ಲದಿರುವುದು, ಧಾರವಾಡ ಸಹಿತ ಹಲವು ವಿಶ್ವವಿದ್ಯಾಲಯಗಳ ದೈನಂದಿನ ನಿರ್ವಹಣೆಗೂ ಹಣಕಾಸು ಕೊರತೆ ಸಹಿತ ರಾಜ್ಯದ ಸರಕಾರಿ ಉನ್ನತ ಶಿಕ್ಷಣ ವ್ಯವಸ್ಥೆ ಅಧೋಗತಿಯತ್ತ ಸಾಗುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಉಪನ್ಯಾಸಕರ ನೇಮಕಾತಿ ಬಗ್ಗೆ ಪ್ರಸ್ತಾವಿಸಿದರೂ ಹಳೆಯ ವಿಶ್ವವಿದ್ಯಾಲಯಗಳಿಗೆ ಶಕ್ತಿ ತುಂಬುವ, ಅವುಗಳ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ನಿಟ್ಟಿನಲ್ಲಿ ಅನುದಾನವನ್ನಾಗಲಿ, ಕಾರ್ಯಕ್ರಮವನ್ನಾಗಲಿ ಪ್ರಕಟಿಸಿಲ್ಲ. ಇದು ರಾಜ್ಯದ ವಿ.ವಿ.ಗಳ ಭವಿಷ್ಯವನ್ನು ಮಸುಕಾಗಿಸಿದೆ.
ಅರ್ಧಕ್ಕಿಂತ ಹೆಚ್ಚು ಸಿಬಂದಿ ಇಲ್ಲ
ರಾಜ್ಯದ 32 ವಿ.ವಿ.ಗಳಿಗೆ 4,709 ಬೋಧಕ ಹುದ್ದೆ ಮಂಜೂರಾಗಿದೆ. ಈ ಪೈಕಿ 2,732 ಅಂದರೆ ಶೇ. 58 ಹುದ್ದೆಗಳು ಖಾಲಿ ಇವೆ. ಇನ್ನು ಬೋಧಕೇತರ 9,217 ಹುದ್ದೆಗಳು
ಮಂಜೂರಾಗಿದ್ದು, ಈ ಪೈಕಿ 6,328 ಅಂದರೆ ಶೇ. 69 ಹುದ್ದೆಗಳು ಖಾಲಿ ಇವೆ. ರಾಜ್ಯದ ಪ್ರಮುಖ ವಿ.ವಿ. ಆಗಿರುವ ಮೈಸೂರು ವಿ.ವಿ.ಗೆ 572 ಬೋಧಕ ಸಿಬಂದಿ ಮಂಜೂರಾಗಿದ್ದರೆ, 379 ಹುದ್ದೆ ಖಾಲಿಯಿದೆ. 799 ಬೋಧಕೇತರ ಹುದ್ದೆಗಳಲ್ಲಿ 366 ಹುದ್ದೆ ಖಾಲಿ ಇದೆ. ಕರ್ನಾಟಕ ವಿಶ್ವವಿದ್ಯಲಯಲ್ಲಿ ಮಂಜೂರಾದ 620 ಬೋಧಕರ ಹುದ್ದೆಗಳಲ್ಲಿ 414, ಮಂಜೂರಾದ 1,201 ಬೋಧಕೇತರ ಹುದ್ದೆಗಳಲ್ಲಿ 849 ಹುದ್ದೆ, ಬೆಂಗಳೂರು ವಿ.ವಿ.ಯ 365 ಬೋಧಕರ ಹುದ್ದೆಗಳಲ್ಲಿ 234, ಮಂಜೂರಾದ 1,176 ಬೋಧಕೇತರ ಹುದ್ದೆಗಳಲ್ಲಿ 780 ಖಾಲಿ ಉಳಿದಿವೆ. ಇನ್ನು ಉಳಿದ ವಿಶ್ವವಿದ್ಯಾಲಯಗಳ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಹೊಸ ವಿ.ವಿ.ಗಳಲ್ಲಿ ಖಾಯಂ ಬೋಧಕರು, ಬೋಧಕೇತರರೇ ಇಲ್ಲ.
ಅಭಿವೃದ್ಧಿಗೆ ಬರೀ ಶೇ. 3 ಅನುದಾನ
ವಿಶ್ವವಿದ್ಯಾಲಯಗಳು ಸಂಬಳ ಮತ್ತು ಪಿಂಚಣಿಯ ಹೊರೆಯಿಂದ ನಲುಗಿವೆ. ರಾಜ್ಯದ ಹಳೆಯ 22 ವಿಶ್ವವಿದ್ಯಾಲಯಗಳಿಗೆ 2022-23ರ ಸಾಲಿನಲ್ಲಿ 810.62 ಕೋಟಿ ರೂ.ಗಳನ್ನು ವೇತನಕ್ಕೆ ಮತ್ತು 234.63 ಕೋಟಿ ರೂ.ಗಳನ್ನು ಪಿಂಚಣಿಗೆ, ಹಾಗೆಯೇ 2023-24ರ ಸಾಲಿನಲ್ಲಿ 705.7 ಕೋಟಿ ರೂ.ಗಳನ್ನು ವೇತನಕ್ಕೆ ಮತ್ತು 205.54 ಕೋಟಿ ರೂ.ಗಳನ್ನು ಪಿಂಚಣಿಗೆ ನೀಡಲಾಗಿದೆ. ಅದೇ ಹಳೇ ವಿಶ್ವವಿದ್ಯಾಲಯಗಳ ಅಭಿವೃದ್ಧಿ ಚಟುವಟಿಕೆಗಾಗಿ ಕೇವಲ 33.50 ಕೋಟಿ ರೂ. ಮಾತ್ರ ನೀಡಲಾಗಿದೆ. ಅಂದರೆ ವಿ.ವಿ.ಗಳಿಗೆ ಸರಕಾರ ಕೊಡುವ ಅನುದಾನದಲ್ಲಿ ಶೇ. 3ರಷ್ಟು ಮಾತ್ರ ವಿ.ವಿ.ಗಳ ಅಭಿವೃದ್ಧಿ ಚಟುವಟಿಕೆಗೆ ಬಳಕೆಯಾಗುತ್ತಿದೆ. ಮತ್ತೂಂದು ಆಘಾತಕಾರಿ ಅಂಶವೆಂದರೆ ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ, ಬೆಂಗಳೂರು, ಗುಲ್ಬರ್ಗಾ, ದಾವಣಗೆರೆ, ಬೆಂಗಳೂರು ನಗರ ವಿಶ್ವವಿದ್ಯಾಲಯಗಳಿಗೆ ಈ ಹಿಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿಲ್ಲ. ಉಳಿದಂತೆ ಮಂಗಳೂರು ವಿಶ್ವಿದ್ಯಾನಿಲಯ., ಕುವೆಂಪು, ಮಹಿಳಾ, ವಿಜಯನಗರ, ಬೆಳಗಾವಿ, ಮಂಡ್ಯ, ರಾಯಚೂರು, ಸಂಸ್ಕೃತ ವಿಶ್ವಿದ್ಯಾಲಯಗಳಿಗೆ ಒಂದು ವರ್ಷದಲ್ಲಷ್ಟೇ ಅಭಿವೃದ್ಧಿ ಅನುದಾನ ಸಿಕ್ಕಿದೆ.
ಖಾಯಂ ಕುಲಪತಿಗಳೇ ಇಲ್ಲ
ಕರ್ನಾಟಕ ವಿ.ವಿ., ಡಾ| ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್, ಮಂಡ್ಯ ವಿಶ್ವವಿದ್ಯಾಲಯ ., ನೃಪತುಂಗ, ಮಹಾರಾಣಿ ಕ್ಲಸ್ಟರ್, ರಾಯಚೂರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ., ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್, ಗುಲ್ಬರ್ಗಾ ವಿ.ವಿ.ಗಳಿಗೆ ಖಾಯಂ ಕುಲಪತಿಗಳ ನೇಮಕವಾಗದಿರುವ ಹಿನ್ನೆಲೆಯಲ್ಲಿ ಹಂಗಾಮಿ ಕುಲಪತಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯ. ಸ್ಥಿತಿಯೇನು?
ರಾಜ್ಯದಲ್ಲಿ ಈಗ ವಿಶ್ವವಿದ್ಯಾ ನಿಲಯಗಳ ಭವಿಷ್ಯದ ಕುರಿತ ಚರ್ಚೆ ಬಿರುಸಾಗಿದೆ. ಈ ಮಧ್ಯೆ ಮಂಗಳೂರು ವಿಶ್ವವಿದ್ಯಾಲಯ. 1980ರಷ್ಟು ಹಿಂದೆ ಆರಂಭವಾಗಿ ಹಲವು ಸಾಧಕರನ್ನು ಸಮಾಜಕ್ಕೆ ಕೊಟ್ಟಿದೆ.
ರಾಕೇಶ್ ಎನ್.ಎಸ್.,
ಹೊಸ ದೆಹಲಿ.09.ಜೂನ್.25:- ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ನಗರದ ಪರಿಸರವನ್ನು ಸುಧಾರಿಸಲು ಈ ಋತುವಿನಲ್ಲಿ 70 ಲಕ್ಷ ಮರಗಳನ್ನು…
ಬೀದರ.09.ಜೂನೆ.25:- ನಾಳೆ ದಿನಾಂಕ 10. ಜೂನ್ ಬೆಳಿಗ್ಗೆ 10.00 ಗಂಟೆಗೆ ಪತ್ರಿಕಾ ಗೋಷ್ಟಿಗೆ ಅವ್ಹಾನ ನಾಳೆ(10/06/2025) ಮಂಗಳವಾರ ಬೆಳಿಗ್ಗೆ 10.00…
ಬೀದರ.09.ಜೂನ್.25:- ಕ್ರೀಡಾ ತರಬೇತಿ ಸಂಪನ್ನ, ಪ್ರಮಾಣ ಪತ್ರ ವಿತರಣೆ ಕ್ರೀಡೆಗಳಿಂದ ದೈಹಿಕ, ಬೌದ್ಧಿಕ ಬೆಳವಣಿಗೆಯಾಗುತ್ತದೆ - ರಾಜಶೇಖರ ಜವಳೆ ಕ್ರೀಡೆಗಳಿಂದ…
ಬೀದರ.09.ಜೂನ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ, ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡ ರಸ್ತೆ, ಬೀದರನಲ್ಲಿ ಎರಡು ದಿವಸ…
ಬೀದರ.09.ಜೂನ್.25:- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಬೆಸ್ತ, ಅಂಬಿಗ/ಅAಬಿ, ಗಂಗಾಮತ, ಕಬ್ಬಲಿಗೆ, ಕೋಲಿ, ಮತ್ತು ಇದರ ಉಪಜಾತಿಗಳ ಅಭಿವೃದ್ಧಿಗಾಗಿ…
ಬೀದರ.09.ಜೂನ್.25:- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ…