ಬೆಂಗಳೂರು.19.ಮೇ.25:- ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿರುವ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಬಗ್ಗೆ ಹೊಸ ಆದೇಶ..
ಕನಿಷ್ಠ ಸೇವಾ ಅವಧಿ ನೌಕರರ ವರ್ಗಾವಣೆ ಕುರಿತು ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಅದೇನೆಂದರೆ, ಈ ಮಾರ್ಗಸೂಚಿಗಳ ಅನುಸಾರ ಗ್ರೂಪ್ ಎ, ಬಿ, ಸಿ ಮತ್ತು ಡಿ ವರ್ಗದ ನೌಕರರ ವರ್ಗಾವಣೆ ಪ್ರಕ್ರಿಯೆ ಮೇ 15ರಿಂದ ಜೂನ್ 14ರೊಳಗಾಗಿ ನೆರವೇರಬೇಕಾಗಿದೆ. ಅಲ್ಲದೇ ಈ ಹೊಸ ನಿಯಮದ ಅನುಸಾರ ಪ್ರತಿಯೊಂದು ಗುಂಪಿನಲ್ಲೂ ವರ್ಗಾವಣೆಗಳ ಪ್ರಮಾಣವು, ಒಟ್ಟು ಸಿಬ್ಬಂದಿ ಬಲದ 6% ಮೀರಬಾರದು ಎಂಬ ಗಟ್ಟಿದನಿಯ ಮಿತಿ ಜಾರಿಯಲ್ಲಿದೆ.ಹೊಸ ರೂಲ್ಸ್..ಸರ್ಕಾರಿ ನೌಕರರ ಟ್ರಾನ್ಸ್ಫರ್ ಬಗ್ಗೆ ಹೊಸ ಆದೇಶ..ಕನಿಷ್ಠ ಸೇವಾ ಅವಧಿ, ವಿನಾಯಿತಿಗಳ ಸಂಪೂರ್ಣ ಪಟ್
ಇನ್ನು ಸರ್ಕಾರದ ಈ ಹೊಸ ಮಾರ್ಗಸೂಚಿಯ ಅನುಸಾರ ಗ್ರೂಪ್ ಎ ಮತ್ತು ಬಿ ವಿಭಾಗದ ಅಧಿಕಾರಿ ವರ್ಗಾವಣೆಗಳಿಗೆ ಆಯಾ, ಸಂಬಂಧಪಟ್ಟ ಇಲಾಖೆಯ ಸಚಿವರೇ ಅನುಮೋದನೆ ನೀಡಬೇಕು. ಮತ್ತು ಇತ್ತು ಬಹಳ ಅತ್ಯಗತ್ಯ. ಹಾಗೆಯೇ ಇದಕ್ಕೆ ಬದಲಿ, ಗ್ರೂಪ್ ಸಿ ಮತ್ತು ಡಿ ನೌಕರರ ವರ್ಗಾವಣೆ ನಿರ್ಧಾರಗಳು ನೇಮಕಾತಿ ಅಧಿಕಾರಿಗಳ ಅಡಿಯಲ್ಲಿ ಬಂದಿರುತ್ತವೆ. ಯಾವುದೇ ವರ್ಗಾವಣೆಯಲ್ಲಿಯೂ ಕೆಲಸಗಾರರನ್ನು ಮರುನಿಯೋಜನೆಗಾಗಿ ಕಾಯುವುದಿಲ್ಲ, ಬದಲಾಗಿ ತಕ್ಷಣದ ಕಡ್ಡಾಯ ನಿಯೋಜನೆ ಜಾರಿಗೆ ಬರಬೇಕಾಗಿದೆ.
ತನಿಖೆಗೊಳಗಾದ ನೌಕರರ ನೇಮಕಾತಿಗೆ ವಿಶೇಷ ನಿಯಮ:
ವಿಭಾಗೀಯ ಅಥವಾ ಅಪರಾಧ ತನಿಖೆಯಡಿಯಲ್ಲಿ ಇರುವ ಅಥವಾ ಗಂಭೀರ ಆರೋಪ ಎದುರಿಸುತ್ತಿರುವ ನೌಕರರನ್ನು ಯಾವುದೇ ಪ್ರಭಾವ ಬೀರುವ ಅಥವಾ ನಿರ್ಣಾಯಕ ಸ್ಥಾನಗಳಿಗೆ ನಿಯೋಜನೆ ಮಾಡಬಾರದು. ಬದಲಾಗಿ, ಈ ನೌಕರರನ್ನು ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ಕಾರ್ಯನಿರ್ವಾಹಕೇತರ ಸ್ಥಾನಗಳಿಗೆ ನಿಯೋಜಿಸಬೇಕು. ಇದರೊಂದಿಗೆ, ಅವರ ಇಚ್ಛೆಯ ಹುದ್ದೆ ಅಥವಾ ಸ್ಥಳಕ್ಕೆ ನಿಯೋಜಿಸುವುದನ್ನು ತಪ್ಪಿಸಬೇಕು.
ಕನಿಷ್ಠ ಸೇವಾ ಅವಧಿ, ವರ್ಗದ ಪ್ರಕಾರ ನಿರ್ಧಿಷ್ಟ ಮಿತಿ:
ವರ್ಗಾವಣೆಗಳಿಗೆ ಅರ್ಹತೆ ಪಡೆಯಲು ನೌಕರರು ತಮ್ಮ ಪ್ರಸ್ತುತ ಹುದ್ದೆಯಲ್ಲಿ ನಿರ್ದಿಷ್ಟ ಸೇವಾವಧಿ ಪೂರೈಸಿರಬೇಕು. ಅಂದರೆ ಗ್ರೂಪ್ ಎ ಮತ್ತು ಬಿ ನೌಕರರು ಕನಿಷ್ಠ 2 ವರ್ಷಗಳು, ಗ್ರೂಪ್ ಸಿ ನೌಕರರು ಕನಿಷ್ಠ 4 ವರ್ಷಗಳು ಹಾಗೆಯೇ ಗ್ರೂಪ್ ಡಿ ನೌಕರರು ಕನಿಷ್ಠ 7 ವರ್ಷಗಳು ಪೂರೈಸಿರಲೇಬೇಕು. ಆದರೆ, ಮುಖ್ಯಮಂತ್ರಿಯವರ ಪೂರ್ವಾನುಮತಿಯೊಂದಿಗೆ ಕೆಲವೊಂದು ಸೂಕ್ಷ್ಮ ಹುದ್ದೆಗಳಿಗೆ ಈ ಅವಧಿಯನ್ನು ಕ್ರಮೇಣ ಪರಿಷ್ಕರಿಸಲು ಆಡಳಿತ ಇಲಾಖೆಗಳಿಗೆ ಅವಕಾಶವಿದೆ.
ಹೈದರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ಮೀಸಲು:
ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ನೇಮಕಗೊಂಡ ಸಿಬ್ಬಂದಿಯನ್ನು, ಸ್ಥಳೀಯ ಮೀಸಲು ನಿಯಮಗಳಂತೆ, ನೇಮಕಾತಿಯಾದ ದಿನಾಂಕದಿಂದ ಕನಿಷ್ಠ 10 ವರ್ಷಗಳವರೆಗೆ ಇತರೆ ಪ್ರದೇಶಗಳಿಗೆ ವರ್ಗಾಯಿಸಬಾರದು. ಇದರಿಂದ ಸ್ಥಳೀಯ ಪ್ರತಿಭೆಗಳ ಉಳಿವಿಗೆ ಸರ್ಕಾರ ಬದ್ಧವಾಗಿದೆ ಎಂಬ ಸ್ಪಷ್ಟ ಸಂದೇಶ ದೊರೆಯುತ್ತದೆ.
ವರ್ಗಾವಣೆ ನಿಯಮಗಳಿಗೆ ವಿನಾಯಿತಿಗಳು:
ಇಂತಹ ನಿಯಮಗಳ ನಡುವೆಯೂ, ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಕನಿಷ್ಠ ಸೇವಾವಧಿಯನ್ನು ಸಡಿಲಿಸಬಹುದು. ಅಂದರೆ ಸೇವಾನಿವೃತ್ತಿಗೆ 2 ವರ್ಷ ಅಥವಾ ಕಡಿಮೆ ಬಾಕಿಯಿರುವವರು. ತಾಂತ್ರಿಕ ಅರ್ಹತೆ ಅಥವಾ ಅಪರೂಪದ ಅನುಭವ ಹೊಂದಿದ ನೌಕರರು, ಬದಲಿ ಲಭ್ಯವಿಲ್ಲದಿದ್ದರೆ, ಮುಖ್ಯ ಯೋಜನೆಗಳಲ್ಲಿ ನಿರ್ಣಾಯಕ ಪಾತ್ರವಹಿಸಿ ನಿರಂತರ ಸೇವೆಯ ಅಗತ್ಯವಿರುವವರು, ದಂಪತಿಗಳಿಬ್ಬರೂ ಸರ್ಕಾರಿ ನೌಕರರಾಗಿದ್ದರೆ, ಒಬ್ಬರ ವರ್ಗಾವಣೆಗೆ ಅನುಸಾರವಾಗಿ ಇನ್ನೊಬ್ಬರ ವೀಕ್ಷಣೆಯವರಿಲ್ಲದೆಯೇ ಸಮೀಪದ ಸ್ಥಳಕ್ಕೆ ವರ್ಗಾವಣೆಯಾಗುವುದು. ಹಾಗೂ ವಿಧವೆ, ವಿಚ್ಛೇದಿತ ಅಥವಾ ಅವಿವಾಹಿತ ಮಹಿಳೆಯರಿಗೆ ಅವರ ಇಚ್ಛೆಯ ಸ್ಥಳಕ್ಕೆ ವರ್ಗಾವಣೆ, ಖಾಲಿ ಹುದ್ದೆಗೆ ಆಧಾರವಾಗಿರಬೇಕು.
ಈ ಮಾರ್ಗಸೂಚಿಗಳ ಪರಿಣಾಮವಾಗಿ ವರ್ಗಾವಣೆ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗುತ್ತದೆ, ಯಾವುದೇ ಪ್ರಭಾವ ಅಥವಾ ಪಕ್ಷಪಾತಗಳಿಲ್ಲದ ವ್ಯವಸ್ಥೆಯ ಮೂಲಕ ಆಡಳಿತ ಸುಧಾರಣೆ ಸಾಧ್ಯವಾಗುತ್ತದೆ. ವರ್ಗಾವಣೆಯು ಆಡಳಿತ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ನೌಕರರ ಜೀವನದ ಗುಣಮಟ್ಟಕ್ಕೂ ಆಪ್ತವಾಗಿ ಸಂಬಂಧಿಸಿದ ವಿಷಯ. ಈ ಹೊಸ ನೀತಿ, ನೈತಿಕತೆ, ನ್ಯಾಯ ಹಾಗೂ ದಕ್ಷತೆಯ ಸಮತೋಲನವನ್ನು ಸಾಧಿಸುವತ್ತ ಗಟ್ಟಿದಾರಿಯಾಗಿದೆ.
ಬೆಂಗಳೂರು.ಯುಜಿಸಿ ಅತಿಥಿ ಅಧ್ಯಾಪಕರ ಕುರಿತಾದ ಇತ್ತೀಚಿನ ಸುತ್ತೋಲೆಗಳು ಸಾಮಾನ್ಯವಾಗಿ ಅವರ ನೇಮಕಾತಿ, ಅರ್ಹತೆಗಳು ಮತ್ತು ಗೌರವ ಧನಕ್ಕೆ ಸಂಬಂಧಿಸಿದ ವಿಷಯಗಳನ್ನು…
ದಾವಣಗೆರೆ.11.ಜೂನ್.25:- ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ಕಾರ್ಯದ ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸಲು ಮೇ.5 ರಿಂದ ಮನೆ ಮನೆ ಭೇಟಿ…
ಬಾಗಲಕೋಟ.11.ಜೂನ್.25:- ರಾಜ್ಯ ಸರ್ಕಾರ ಇನ್ಮುಂದೆ ಫೆಸಿಯಲ್ ಅಟೆಂಡೆನ್ಸ್ ಮಾಡೋಕೆ ನಿರ್ಧರಿಸಿದೆ. ಡಿಜಿಟಲ್ ಯುಗ ಆಗಿರುವ ಕಾರಣ ಸರ್ಕಾರಿ ಶಾಲೆಗಳ ಮಕ್ಕಳಿಗೂ…
ಬೆಂಗಳೂರು.11.ಜೂನ್.25:- ರಾಜ್ಯದ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಲ್ಲಿ ಎನ್ ಪಿ ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿ ಮಾಡುವುದಾಗಿದೆ. ರಾಜ್ಯ…
ಬಾಗಲಕೋಟ.11.ಜೂನ್.25:- ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾದ ನಂತರ 16, 500 ಶಿಕ್ಷಕರ ನೇಮಕ ಮಾಡುತ್ತೇವೆ. ಮತ್ತು ಪ್ರತಿಒಂದು ಆದರ್ಶ ಶಾಲೆಗಳಲ್ಲಿ ಈ…
ಹೊಸ ದೆಹಲಿ.10.ಜೂನ್.25:- ವಿದ್ಯಾರ್ಥಿಗಳಿಗೆ ಸರ್ಕಾರದ ಪ್ರಧಾನಮಂತ್ರಿ ಯೋಜನೆಗಳು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಸಹಾಯದಲ್ಲಿ ಸಮಗ್ರ ಬೆಂಬಲವನ್ನು ಒದಗಿಸಲು…