ಬೀದರ.18.ಜೂನ್.25:- NABL ಜಾಗೃತಿ ಕಾರ್ಯಕ್ರಮವು ಜನರಲ್ಲಿ ಮಾನ್ಯತೆ ಸಂಬoಧಿತ ಲಾಭಗಳ ಬಗ್ಗೆ ತಿಳಿವು ನೀಡುವ ದಿಕ್ಕಿನಲ್ಲಿ ಒಳ್ಳೆಯ ಹೆಜ್ಜೆಯಾಗಿದೆ. ಇಂದಿನ ಕಾಲಘಟ್ಟದಲ್ಲಿ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಗುಣಮಟ್ಟ ಎಷ್ಟೊಂದು ಪ್ರಮುಖ ಎಂಬುದುರ ಕುರಿತು ಬೀದರ ತೋಟಗಾರಿಕೆ ಕಾಲೇಜಿನ ಡೀನ್ ಪ್ರೊ.ಡಾ.ಎಸ್.ವಿ.ಪಾಟೀಲ ತಿಳಿಸಿದರು.
ಅವರು ಸೋಮವಾರ QCI–NABL ಪ್ರಾದೇಶಿಕ ಕಚೇರಿ, ಬೆಂಗಳೂರು ಇವರು ಗುಣಮಟ್ಟದ ಕುರಿತು ಜಾಗೃತಿ ಮೂಡಿಸಲು ಹಾಗೂ ಎನ್ಎಬಿಎಲ್ ಮಾನ್ಯತೆ ಮತ್ತು ಅದರ ಲಾಭಗಳು, ಜೊತೆಗೆ ಕ್ಯೂಸಿಐ ಚಟುವಟಿಕೆಗಳ ಪರಿಚಯ ನೀಡಲು ಕರ್ನಾಟಕದ ತೋಟಗಾರಿಕೆ ಕಾಲೇಜು ಬೀದರ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೀದರ ಕೆಆರ್ಇ ಸೊಸೈಟಿಯ ಕರ್ನಾಟಕ ಆರ್ಟ್ಸ್ ಆ್ಯಂಡ್ ಕಾಮರ್ಸ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ.ರಾಜಮೋಹನ ಪರದೇಶಿ ಮಾತನಾಡಿ, ಇದು ಜೈವಿಕ ತಂತ್ರಜ್ಞಾನ, ಕೃಷಿ, ಆಹಾರ, ಮಣ್ಣು ಪರೀಕ್ಷೆ ಮತ್ತು ಇತರ ಹಲವಾರು ಕ್ಷೇತ್ರಗಳಿಗೆ ಹೇಗೆ ಸಹಕಾರಿ ಎಂಬುದನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎನ್ಎಬಿಎಲ್ ನಿರ್ದೇಶಕ ಶ್ರೀಕಾಂತ್ ಆರ್. ಮಾತನಾಡಿ, ಬೆಂಗಳೂರು ಪ್ರಾದೇಶಿಕ ಕಚೇರಿ ಐದು ದಕ್ಷಿಣ ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ಎನ್ಎಬಿಎಲ್ ಮಾನ್ಯತೆ, ಕ್ಯೂಸಿಐ ಯ ಚಟುವಟಿಕೆಗಳು ಹಾಗೂ ಅದರ ಮಂಡಳಿಗಳು ಮತ್ತು ವಿಭಾಗಗಳ ಬಗ್ಗೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿಯನ್ನು ಒದಗಿಸುತ್ತಿರುವುದಾಗಿ ವಿವರಿಸಿದರು.
ಎನ್ಎಬಿಎಲ್ ಸಮನ್ವಯಕರಾದ ಅಕ್ಷಯ್ ಜಿ.ಎಂ. ಅವರು ಎನ್ಎಬಿಎಲ್ ಮಾನ್ಯತೆ ಪಡೆಯುವ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ವಿವರಿಸಿದರು.
ಎನ್ಎಬಿಎಲ್ ಸಮನ್ವಯಕರಾದ ಮಾನಸಿ ಕುಲಕರ್ಣಿ ಅವರು ಎನ್ಎಬಿಎಲ್ಯ recognition schemes ಹಾಗೂ QCI ಯ ವಿವಿಧ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಗುಣವತ್ತ ಯಾತ್ರದಲ್ಲಿ ವಿವಿಧ ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳಾದ 35 ಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ಗುಲ್ಬರ್ಗಾ.18.ಜೂನ್.25:-ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ ಇಲ್ಲಿ ಲಿ ⁹óದಶಕಗಳ ಹಿಂದೆಯೇ ಪ್ರಭಾವ ಬಳಸಿಕೊಂಡು, ಇಲ್ಲದ ಹುದ್ದೆಗಳನ್ನು ಸೃಷ್ಟಿಸಿ ಹೊರಗುತ್ತಿಗೆ ಆಧಾರದಲ್ಲಿ ನುಸುಳಿ…
ಪಾಕಿಸ್ತಾನದೊಂದಿಗಿನ ಸಮಸ್ಯೆಗಳನ್ನು ಪರಿಹರಿಸಲು ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ ಮತ್ತು ಅದನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ…
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಕೊಂಡಮೊಡಲು ಅರಣ್ಯ ಪ್ರದೇಶದಲ್ಲಿ ಇಂದು ಭದ್ರತಾ ಸಿಬ್ಬಂದಿ ಮತ್ತು ಶಸ್ತ್ರಸಜ್ಜಿತ ಮಾವೋವಾದಿಗಳ ನಡುವಿನ…
ಕೊಪ್ಪಳ.18.ಜೂನ್.25:- ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಕ್ಯಾಬಿನೆಟ್ ಸಚಿವರಾದ ಶಿವರಾಜ್ ತಂಗಡಗಿ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ವಾಹನದಲ್ಲಿದ್ದ ಎಎಸ್ಐಗೆ ಗಂಭೀರ…
ಚಾಮರಾಜನಗರ.18.ಜೂನ್.25:- ಯಳಂದೂರು: ಸರಕಾರಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಕಡು ಬಡವರ ಮಕ್ಕಳಿರುವುದರಿಂದ ಪಂಚಾಯತಿಯ ಅನುದಾನವನ್ನು ಸದ್ಬಳಿಕೆ ಮಾಡಿಕೊಂಡು ಚೇರ್, ಆಟಿಕೆ…
ಬೆಂಗಳೂರು.18.ಜೂನ್.25:- ರಾಜ್ಯ ಸರ್ಕಾರ ಸಮುದಾಯದ ವಿದ್ಯಾರ್ಥಿಗಳಿಗೆ ಶುಭ ಸುಧಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ…