Categories: ರಾಜ್ಯ

ಕಣ್ಣ ರೆಪ್ಪೆಯ ಕೊನೆಯ ಕೂದಲಿನ ಫೋಟೋ ಹಂಚಿಕೊಂಡ ನಟಿ ಹಿನಾ ಖಾನ್! ನೆಟ್ಟಿಗರು ಭಾವುಕ!

‘ಬಿಗ್ ಬಾಸ್’ ಖ್ಯಾತಿಯ ಹಿನಾ ಖಾನ್ (hina Khan) ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಸ್ತನ ಕ್ಯಾನ್ಸರ್ (breast Cancer) ಕಾಯಿಲೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಕಳೆದ ಜುಲೈನಲ್ಲಿ ಮಾಹಿತಿ ನೀಡಿದ್ದರು. ರೋಗ ಗೊತ್ತಾದ ನಂತರವೂ ಜೀವನಶೈಲಿಯಲ್ಲಿ ಸಕ್ರಿಯವಾಗಿದ್ದ ನಟಿ ಹಿನಾ ಖಾನ್‌ ಅವರ ಜೀವನೋತ್ಸಾಹ ಚೂರು ಕಮ್ಮಿಯಾದಂತಿರಲಿಲ್ಲ. ಇತ್ತೀಚೆಗೆ ಅವರು ಲೆಹಂಗಾ ಧರಿಸಿ ರ‍್ಯಾಂಪ್ (Ramp Walk) ವಾಕ್ ಕೂಡ ಮಾಡಿದ್ದರು. ಕೆಲ ದಿನಗಳ ಹಿಂದೆ ವಿಗ್‌ (wig) ಮಾಡಿಕೊಳ್ಳಲು ತಮ್ಮ ಕೂದಲನ್ನು ತಾವೇ ಕತ್ತರಿಸಿಕೊಳ್ಳುತ್ತಿರುವ ವಿಡಿಯೋ (video) ಹಂಚಿಕೊಂಡಿದ್ದರು. ಆ ವಿಡಿಯೋದಲ್ಲೂ ಹಿನಾ ಖಾನ್‌ ರೋಗದ ವಿರುದ್ಧ ಧೈರ್ಯವಾಗಿ ನಿಂತಿರೋದನ್ನು ಕಾಣಬಹುದಾಗಿತ್ತು.

ಜಾಹೀರಾತು

ಕಣ್ಣ ರೆಪ್ಪೆಯ ಕೊನೆಯ ಕೂದಲಿನ ಫೋಟೋ ಹಂಚಿಕೊಂಡ ನಟಿ ಹಿನಾ ಖಾನ್
ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವ ಇವರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕಣ್ಣಿನ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ನೋಡಿದವರಿಗೆ ನಿಜಕ್ಕೂ ಬೇಸರವಾಗದೇ ಇರಲಾರದು. ಸಾಮಾನ್ಯವಾಗಿ ಕ್ಯಾನ್ಸರ್‌ ಪೀಡಿತ ವ್ಯಕ್ತಿಗಳಲ್ಲಿ ಕೂದಲು ಉದುರುವುದು ಸಹಜ. ಹಾಗೆಯೇ‌ ಕಿಮೋ ಥೆರಪಿ ಸಂದರ್ಭದಲ್ಲಿ ಕೂದಲು ಸೇರಿ ಕಣ್ಣ ರೆಪ್ಪೆಯು ಉದುರಿ ಹೋಗುತ್ತದೆ.

ಹಿನಾ ಖಾನ್‌ ಕೂಡ ತಮ್ಮ ಕಣ್ಣುಗಳ ರೆಪ್ಪೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಇದು ನನ್ನ ಕಣ್ಣ ರೆಪ್ಪೆ ಎಂಬುವುದಾಗಿ ತಮ್ಮ ಕಣ್ಣಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಜಾಹೀರಾತು

ಹಿನಾ ಪೋಸ್ಟ್‌ ನೋಡಿ ಭಾವುಕರಾದ ನೆಟ್ಟಿಗರು
ಈ ಫೋಟೋ ನೋಡಿದ ಪ್ರತೊಯೊಬ್ಬರೂ ಭಾವುಕರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಿನಾ ತನ್ನ ಕಣ್ಣುಗಳ ಕ್ಲೋಸ್‌ಅಪ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಜೊತೆಗೆ ಕ್ಯಾಪ್ಷನ್‌ ಕೂಡ ನೀಡಿದ್ದಾರೆ. ನನ್ನ ಕೀಮೋ ಚಿಕಿತ್ಸೆಯ ಕೊನೆಯ ಹಂತದಲ್ಲಿ ಉಳಿದ ನನ್ನ ಕಣ್ಣ ರೆಪ್ಪೆಯ ಕೊನೆಯ ಕೂದಲಿದು. ಇದೇ ನನ್ನ ಪ್ರೇರಣೆ, ಧೈರ್ಯ ಎಂದು ಹೇಳಿದ್ದಾರೆ.

ಹಿನಾ ಅವರ ಪೋಸ್ಟ್‌ಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಜೂಹಿ ಪರ್ಮಾರ್, “ಕೆಚ್ಚೆದೆಯ ಸುಂದರ ಹೃದಯ ಹೊಂದಿರುವ ಸುಂದರ ಹುಡುಗಿ ನೀನು” ಎಂದು ಕಾಮೆಂಟ್‌ ಮಾಡಿದ್ದಾರೆ.

ಜಾಹೀರಾತು

ದಾಲ್ಜಿತ್ ಕೌರ್, ನೀವು ಶೀಘ್ರ ಗುಣಮುಖರಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ ಎಂದು ಬರೆದಿದ್ದಾರೆ. ಅಭಿಮಾನಿಗಳು ಸಹ ನಟಿಯ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ರೋಗದ ವಿರುದ್ಧ ಗೆದ್ದು ಬರುತ್ತೀರಿ, ಧೈರ್ಯವಾಗಿರಿ ಎಂದಿದ್ದಾರೆ. ಈ ರೋಗದ ಈ ಪ್ರಯಾಣವನ್ನು ದೇವರು ಸುಲಭಗೊಳಿಸಲಿ ಮತ್ತು ಮುಂದೆ ನಿಮಗೆ ದೀರ್ಘ ಆರೋಗ್ಯಕರ ಜೀವನವನ್ನು ನೀಡಲಿ ಎಂದು ಹಾರೈಕೆಯ ಸುರಿಮಳೆ ಸುರಿಸಿದ್ದಾರೆ.

ಕೂದಲು ಕತ್ತರಿಸಿಕೊಳ್ಳುವ ವಿಡಿಯೋ ಶೇರ್

ಇತ್ತೀಚೆಗೆ ಇವರು ತಮ್ಮ ತಲೆಯನ್ನು ಬೋಳಿಸಿಕೊಳ್ಳುವ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕ್ಯಾನ್ಸರ್‌ ಚಿಕಿತ್ಸೆಯ ಪರಿಣಾಮ ಪ್ರತಿನಿತ್ಯ ಕೂದಲು ಉದುರುವ ದೃಶ್ಯವು ನನಗೆ ನೋವು ಮತ್ತು ಒತ್ತಡ ಉಂಟು ಮಾಡುತ್ತಿದೆ. ಇದೇ ಕಾರಣಕ್ಕೆ ತಲೆಯನ್ನು ಬೋಳಿಸುತ್ತಿದ್ದೇನೆ ಎಂದು ಅವರು ಹೇಳಿದ್ದರು.

ಜಾಹೀರಾತು

ಈ ವರ್ಷ ಜುಲೈನಲ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹಿನಾ ತನ್ನ ಕ್ಯಾನ್ಸರ್ ರೋಗನಿರ್ಣಯವನ್ನು ಬಹಿರಂಗಪಡಿಸಿದರು. ನನ್ನ ಅಭಿಮಾನಿಗಳ ಜೊತೆ ಈ ಬಗ್ಗೆ ಹೇಳಲು ಬಯಸುತ್ತೇನೆ. ನನಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇದೆ ಎಂದು ಹೇಳಿದ್ದರು. ಈ ಚಿಕಿತ್ಸೆಯ ಸಂದರ್ಭದಲ್ಲಿ ಉಂಟಾಗುವ ದೈಹಿಕ ಯಾತನೆಯ ಅರಿವು ನನಗಿದೆ. ಆದರೆ, ನಾನು ಸ್ಟ್ರಾಂಗ್‌ ಆಗಿರಲು ಬಯಸುವೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುವೆ” ಎಂದಿದ್ದಾರೆ.


ಸಮುದ್ರದ ತೀರದಲ್ಲಿ ಈ ಕಲ್ಲುಗಳು ಯಾಕೆ ಇರುತ್ತೆ?!

ಕ್ಯಾನ್ಸರ್‌ ಎಂಬ ಮಹಾಮಾರಿ ಎಂತೆಥೋರನ್ನೇ ನಡುಗಿಸುತ್ತಿದೆ. ಈ ರೋಗಕ್ಕೆ ಸಂಬಂಧಿಸಿದಂತೆ ಕೇಸ್‌ಗಳು ಸಹ ಇತ್ತೀಚೆಗೆ ಹೆಚ್ಚಾಗುತ್ತಿವೆ. ಒಟ್ಟಿನಲ್ಲಿ ಈ ಒಂದು ರೋಗ ಎಲ್ಲರಲ್ಲೂ ಕಳವಳವನ್ನು ಹುಟ್ಟು ಹಾಕಿದೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

prajaprabhat

Recent Posts

ಡಿಪ್ಲೊಮಾ ನರ್ಸಿಂಗ್‌ ತರಬೇತಿಯೂ ಸ್ಥಗಿತ

ಬೆಂಗಳೂರು.10.ಜೂನ್.25:- ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರಗಳನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರ, ಈಗ ಡಿಪ್ಲೊಮಾ ನರ್ಸಿಂಗ್‌ ಶಾಲೆಗಳನ್ನು (ಜಿಎನ್‌ಎಂ) ಬಿ.ಎಸ್‌ಸಿ…

43 minutes ago

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ `ಪೋಸ್ಟರ್’ ಅಭಿಯಾನ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!

ಬೆಂಗಳೂರು.10.ಜೂನ್.25:-ರಾಜ್ಯಾದ್ಯಂತ ಶಾಲೆಗಳು ಪುನಾರಂಭವಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಸಂಬಂಧಿಸಿದ ಪೋಸ್ಟ‌ರ್ ಗಳನ್ನು ಪ್ರದರ್ಶಿಸುವ ಬಗ್ಗೆ…

2 hours ago

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸುಲಭದಲ್ಲಿ ಕೈಗೆಟಕುತ್ತಿದೆ ಉನ್ನತ ಶಿಕ್ಷಣ

ವಿಜಯಪುರ.10.ಜೂನ್.25:-ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣಕ್ಕಾಗಿ ಹತ್ತು ಹಲವು ವಿನೂತನ ಮಹಿಳೆಯರಿಗೆ ಉನ್ನತ ಶಿಕ್ಷಣದ ಅವಕಾಶಗಳ ಹೆಬ್ಬಾಗಿಲನ್ನು ತೆರೆದಿರುವ  ಶೈಕ್ಷಣಿಕ…

3 hours ago

SSC 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ

ಜೂನ್ 9 ರಂದು 14,582 ಹುದ್ದೆಗಳಿಗೆ SSC CGL 2025 ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು…

4 hours ago

2000 ವರ್ಷಗಳ ಹಿಂದೆ ಬೌದ್ಧಧರ್ಮದ ಆಗಮನವನ್ನು ಗುರುತಿಸುವ ಪೋಸನ್ ಪೋಯವನ್ನು ಶ್ರೀಲಂಕಾ ಆಚರಿಸುತ್ತಿದೆ.

ಶ್ರೀಲಂಕಾ ಇಂದು ಪವಿತ್ರ ಪೋಸನ್ ಪೋಯ ಹಬ್ಬವನ್ನು ಆಚರಿಸುತ್ತಿದೆ, ಇದು 2,000 ವರ್ಷಗಳ ಹಿಂದೆ ಬೌದ್ಧಧರ್ಮದ ಐತಿಹಾಸಿಕ ಆಗಮನವನ್ನು ಸೂಚಿಸುತ್ತದೆ.…

5 hours ago

ದಕ್ಷಿಣ ಭಾರತದಲ್ಲಿ ಭಾರೀ ಮಳೆ, ಪೂರ್ವ-ಮಧ್ಯ ಭಾರತದಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ

ಹೊಸ ದೆಹಲಿ.10.ಜೂನ್.25:- ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ಒಳನಾಡು, ಕೇರಳ, ಮಾಹೆ, ಒಡಿಶಾ, ರಾಯಲಸೀಮಾ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್…

6 hours ago