“GTTC COURSE” ಜಿಟಿಟಿಸಿ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ:

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ಯುವ ಜನತೆ ಕೌಶಲಾಧಾರಿತ GTTC COURSE” ಜಿಟಿಟಿಸಿ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ .

ವಿದ್ಯಾರ್ಥಿಗಳು ಗಿಟಿಟಿಸಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳು ತಮ್ಮ ಎಸ್‍ಎಸ್‍ಎಲ್‍ಸಿ ನಂತರ ವೃತ್ತಿ ಶಿಕ್ಷಣದತ್ತ ಹೊರಳುವ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಉದ್ಯೋಗ ಭರವಸೆಯ ಕೋರ್ಸ್‍ಗಳನ್ನು ನೀಡುವಲ್ಲಿ ಮುಂಚೂಣೆಯಲ್ಲಿದೆ.

ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿಗೆ ಡಿಪ್ಲೋಮಾ ಪ್ರವೇಶಾತಿಯು ಪ್ರಾರಂಭವಾಗಿದ್ದು,

1. ಡಿಪ್ಲೋಮಾ ಇನ್‍ಟೂಲ್ ಅಂಡ್ ಡೈ ಮೇಕಿಂಗ್

2. ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್

3. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಬ ಮೂರು ಕೋರ್ಸ್‍ಗಳಿವೆ.

ಈ ಕೋರ್ಸ್‍ಗಳ ಅವಧಿ ಮೂರು ವರ್ಷ ಹಾಗೂ 1 ವರ್ಷ ಕಡ್ಡಾಯವಾಗಿ ಕೈಗಾರಿಕೆಗಳಿಗೆನಿಯೋಜಿಸಲಾಗುವುದು.


ಡಿಪ್ಲೋಮಾ ಆದ ನಂತರ ದೇಶ ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಗಳಿರುತ್ತವೆ. ಹಾಗೂ ಚಿತ್ರದುರ್ಗ ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೋಮಾ ಕೋರ್ಸ್‍ಗಳಿಗೆ ಶೇ.70 ಪ್ರಾಯೋಗಿಕ ತರಬೇತಿ ಹಾಗೂ ಶೇ.30 ಥೇರಿ ಅನುಗುಣವಾಗಿ 20ಕ್ಕೂ ಹೆಚ್ಚು ಸುಸಜ್ಜಿತವಾಗಿರುವ ಪ್ರಯೋಗಾಲಗಳಿದ್ದು, ಉತ್ತಮವಾದ ತರಬೇತಿ ನೀಡಲಾಗುತ್ತದೆ.

ವಿಶೇಷವಾಗಿ ದ್ವೀತಿಯ ಪಿಯುಸಿ (ವಿಜ್ಞಾನ) ಹಾಗೂ ಐಟಿಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರವಾಗಿ ದ್ವೀತಿಯ ವರ್ಷಕ್ಕೆ ಜಿಟಿಟಿಸಿ ಡಿಪ್ಲೋಮಾಗೆ ದಾಖಲಾತಿ ಪಡೆಯಬಹುದು. ಅಲ್ಲದೇ ಡಿಪ್ಲೋಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ನೇರವಾಗಿ ದ್ವೀತಿಯ ವರ್ಷದ ಇಂಜಿನಿಯರಿಂಗ್‍ಗೆ ಪ್ರವೇಶ ಪಡೆಯಬಹುದು. ಈಗಾಗಲೇ ಆನ್‍ಲೈನ್ ಪ್ರವೇಶ ಅರ್ಜಿಗಳು ಆರಂಭವಾಗಿದ್ದು “ಮೊದಲು ಬಂದವರಿಗೆ ಮೊದಲ ಆದ್ಯತೆ” ಮೇರೆಗೆ ಪ್ರವೇಶಾತಿ ಮಾಡಿಕೊಳ್ಳಲಾಗುತ್ತಿದೆ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿಟಿಟಿಸಿ) ಕರ್ನಾಟಕ ರಾಜ್ಯ ಸರ್ಕಾರ ಮತ್ತು ಡೆನ್ಮಾರ್ಕ್ ಸರ್ಕಾರದ ನಡುವಿನ ಒಂದು ಒಪ್ಪಂದಕ್ಕನುಗುಣವಾಗಿ 1972 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಈ ಕೇಂದ್ರದ ಮುಖ್ಯ ಉದ್ದೇಶವೆನೆಂದರೆ ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕ ಕ್ಷೇತ್ರಕ್ಕೆ ಒದಗಿಸುವುದು ಹಾಗೂ ಕೈಗಾರಿಕ ಸಂಸ್ಥೆಗಳ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು.

ಕೈಗಾರಿಕ ಕ್ಷೇತ್ರದಲ್ಲಿ ಯುವಕರನ್ನು ಪ್ರೋತ್ಸಾಹಿಸಲು ಯಂತ್ರಗಳ ಬಗ್ಗೆ ಇನ್ನಷ್ಟೂ ಅರಿವು ಮೂಡಿಸುವ ಸಲುವಾಗಿ 2021ರಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಲಾಯಿತು. ಇಲ್ಲಿಯವರೆಗೆ ಹಲವಾರು ಬಡ ಹಿಂದುಳಿದ ರೈತರ ಮಕ್ಕಳು ತಾಂತ್ರಿಕ ತರಬೇತಿಯನ್ನು ಪಡೆದು ದೇಶ-ವಿದೇಶದ ದೊಡ್ಡದೊಡ್ಡ ಕಂಪನಿಗಳಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಾರೆ.

ಏಕಕಾಲದಲ್ಲಿ ಉದ್ಯೋಗ ಕೇಂದ್ರಿತ, ಸ್ವಯಂ ಉದ್ಯೋಗಿಗಳಾಗಲು ತರಬೇತಿ: ಜಿಟಿಟಿಸಿ ಚಿತ್ರದುರ್ಗಕೇಂದ್ರದಲ್ಲಿ ಉತ್ತಮವಾದ ಕ್ಯಾಂಪಸ್ ವ್ಯವಸ್ಥೆ, ವಿಶಾಲವಾದ ಕಟ್ಟಡಗಳು, ಅತ್ಯುತ್ತಮ ಪ್ರಾಯೋಗಿಕ ಕಲಿಕೆಗೆ ಪೂರಕವಾದ ವರ್ಕ್‍ಶಾಪ್, ಲ್ಯಾಬೋರೇಟರಿ ಸೌಲಭ್ಯಗಳಿಂದ ಉದ್ಯೋಗಾಧಾರಿತ ಪ್ರಾಯೋಗಿಕತಾಂತ್ರಿಕ ಶಿಕ್ಷಣ ಕಲಿಕೆಗೆ ಗಡಿಭಾಗದ ಹಾಗೂ ಸುತ್ತಲಿನ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ಜಿಟಿಟಿಸಿ ಮುಖ್ಯ ಪರಿಕಲ್ಪನೆ ಯಂತ್ರೋಪಕರಣಗಳ ಚಾಲನೆ, ನಿರ್ವಹಣೆ ಉದ್ಯೋಗಾದಾರಿತ ತಾಂತ್ರಿಕ ತರಬೇತಿ ನೀಡುವುದೇ ಆಗಿರುವುದರಿಂದ ಇದು ಏಕ ಕಾಲದಲ್ಲಿ ಉದ್ಯೋಗ ಕೇಂದ್ರಿತವು ಸ್ವಯಂ ಉದ್ಯಮಿಗಳಾಗಲೂ ತರಬೇತಿ ನೀಡುವ ಶಿಕ್ಷಣವೂ ಆಗಿದೆ.

ಈ ಮೇಲ್ಕಾಣಿಸಿದ ಡಿಪ್ಲೋಮಾ ಕೋರ್ಸ್‍ಗಳ ವಿಶೇಷತೆಗಳೆಂದರೆ ಡಿಪ್ಲೋಮಾ ಇನ್‍ಟೂಲ್ ಅಂಡ್‍ಡೈ ಮೇಕಿಂಗ್ ಒಂದು ಕಾರಿನ ಬಾಡಿ ಪಾಟ್ರ್ಸ್ ತಯಾರಿಸಲಿಕ್ಕೆ ಏನೇನು ಬೇಕೋ ಅಂತ ಮೌಲ್ಡ್ ಡಿಸೈನ್ ಮತ್ತಿತರೆ ಸಂಗತಿಗಳನ್ನು ಕಲಿಯುತ್ತಾರೆ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಹಾಗೂ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ಈ 2 ಕೋರ್ಸ್‍ಗಳಲ್ಲಿ ಆಟೋಮೇಶನ್ ಹಾಗೂ ರೋಬೋಟಿಕ್ ಮಾಡೋದು ಹೇಗೆ? ಅವುಗಳಿಗೆ ಕೋಡಿಂಗ್ ಮಾಡುವುದು ಹೇಗೆ? ಅನ್ನೋದನ್ನು ಕಲಿಯುತ್ತಾರೆ. ಪಠ್ಯದಲ್ಲಿ ಓದಿದ್ದನ್ನು ಪ್ರಾಯೋಗಿಕವಾಗಿ ಕಲಿತಾಗ ಮಾತ್ರ ಕೌಶಲ್ಯ ಕಲಿಕೆಯಲ್ಲಿ ನಿಖರತೆ ಬರುತ್ತದೆ.

ಕಡಿಮೆ ವೆಚ್ಚದಲ್ಲಿ ಜಿಟಿಟಿಸಿ ಶಿಕ್ಷಣ: ಇನ್ನಿತರ ಖಾಸಗಿ ಕಾಲೇಜಿಗಳಿಗೆ ಹೋಲಿಸಿದಾಗ ಜಿಟಿಟಿಸಿ ಶಿಕ್ಷಣವನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು. ಜಿಟಿಟಿಸಿಯಲ್ಲಿ ವಿದ್ಯಾರ್ಥಿಗೆ ವಾರ್ಷಿಕ ಕೇವಲ 34 ಸಾವಿರದಷ್ಟು ಖರ್ಚು ಬರುತ್ತದೆ. ಕರ್ನಾಟಕ ಸರ್ಕಾರ ಪ್ರತಿ ವಿದ್ಯಾರ್ಥಿಗೂ 26 ಸಾವಿರದಿಂದ 28 ಸಾವಿರದ ತನಕ ವಿದ್ಯಾರ್ಥಿಗೆ ವೇತನ ರೂಪದಲ್ಲಿ ವಾಪಸ್ ಕೊಡುತ್ತದೆ ಬೇರೆ ಬೇರೆ ಯೋಜನೆಗಳಡಿ ಈ ಸಹಾಯ ಸಿಗಲಿದೆ ಯೂನಿಫಾರಂ, ಕ್ಯಾಲುಕೇಲಟರ್, ಸೇಫ್ಟಿ ಶೂ ನಂತರ ಸಣ್ಣ ಪುಟ್ಟ ಖರ್ಚುಗಳು ಮಾತ್ರ ಬರುತ್ತವೆ.

ಡಿವೈಡಿಂಗ್ ಸಿಸ್ಟಂ ಹಾಸ್ಟೆಲ್ ಸೌಲಭ್ಯವಿದೆ. SC ಎಸ್ಸಿ, ST  ಎಸ್ಟಿ, OBC ಒಬಿಸಿ ವಿದ್ಯಾರ್ಥಿಗಳು ಆಯಾ ಇಲಾಖೆ ವಿದ್ಯಾರ್ಥಿ ನಿಲಯಗಳಿಗೆ ಸೇರಬಹುದು.

ಇಲಾಖೆ ಹಾಸ್ಟೆಲ್‍ಗಳು ದೂರವಾಗುತ್ತವೆ. ಓಡಾಟ ಕೂಡದು ಬಾರಿ ಎನ್ನುವ ಕಾರಣಕ್ಕೆ ಜಿಟಿಟಿಸಿ ಹಾಸ್ಟೆಲ್‍ಗೆ ಬಹುತೇಕರು ಸೇರುತ್ತಾರೆ. ಇಲ್ಲಿ ವಿದ್ಯಾರ್ಥಿಗಳೇ ಹಾಸ್ಟೆಲ್ ಆಗು ಹೋಗುಗಳನ್ನು ನಿರ್ವಹಿಸುತ್ತಾರೆ. ಬಡ ಹಾಗೂ ಮಧ್ಯಮವರ್ಗದ ವಿದ್ಯಾರ್ಥಿಗಳು ಈ ಜಿಟಿಟಿಸಿಗಳ ಮೂಲಕ ತಾಂತ್ರಿಕ ಶಿಕ್ಷಣ ಪಡೆಯುವುದು ಅತ್ಯಂತ ಸುಲಭದ ಮಾರ್ಗವಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಚಿತ್ರದುರ್ಗ ಕುಂಚಿಗನಾಳ್ ಕಣಿವೆ ಮಾರಮ್ಮ ದೇವಸ್ಥಾನ ಹಿಂಭಾಗದ ಹಳೆಯ ಬೆಂಗಳೂರು ರಸ್ತೆಯ ಸರ್ವೇ ನಂ.44ರ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ,

ದೂರವಾಣಿ ಸಂಖ್ಯೆ :

9738465834, 9481866855, 9945616114ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಜಿಟಿಟಿಸಿ ಪ್ರಾಂಶುಪಾಲರಾದ ಬಿ.ಎಸ್.ಸುಹಾಸ್ ತಿಳಿಸಿದ್ದಾರೆ.

prajaprabhat

Recent Posts

ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೇ ವಿವಿಧ ಸ್ಕಾಲರ್ ಶಿಪ್’ಗಳು

ಹೊಸ ದೆಹಲಿ.10.ಜೂನ್.25:- ವಿದ್ಯಾರ್ಥಿಗಳಿಗೆ ಸರ್ಕಾರದ ಪ್ರಧಾನಮಂತ್ರಿ ಯೋಜನೆಗಳು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಸಹಾಯದಲ್ಲಿ ಸಮಗ್ರ ಬೆಂಬಲವನ್ನು ಒದಗಿಸಲು…

7 hours ago

ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ

ಹಲಸೂರು.10.ಜೂನ್.25:- ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಾ.ಹುಲಸೂರನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಸಲುವಾಗಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.…

9 hours ago

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಡ್‌ನ್ಯೂಸ್‌; ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಿಂದ 2,423 ಹುದ್ದೆಗಳ ಭರ್ತಿ

ಹೊಸ ದೆಹಲಿ.10.ಜೂನ್.25:- ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಿಂದ ವಿವಿಧ ಹೂದೆಗಳಿಗಾಗಿ  ಅರ್ಜಿಖಾಲಿ ಇರುವ 2,423 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ .…

11 hours ago

ಗುಣಮಟ್ಟದ ಬಿತ್ತನೆ ಬೀಜ ಸರಬರಾಜು ಮಾಡಿ: ಡಾ.ಸಿಂಧೆ ಮನವಿ

ಔರಾದ.10.ಜೂನ್.25:- ಡಾ.ಸಿಂಧೆ ಭೀಮಸೇನ್ ರಾವ್ ಅವರು ಸೋಮವಾರ ರಾಜ್ಯ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿ ಔರಾದ ಮತ್ತು…

11 hours ago

ISRO ಇಸ್ರೋದಿಂದ ಬಂಪರ್ ಆಫರ್, ಉಚಿತ ಆನ್‌ಲೈನ್ ಕೋರ್ಸ್: Free Admission

ಹೊಸ ದೆಹಲಿ.10.ಜೂನ್.25:- ನೀವು ಮನೆಯಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಿಂದ ಉಚಿತ ಕೋರ್ಸ್ ಮಾಡಬಹುದು.…

12 hours ago

ರಾಜ್ಯ ಸರ್ಕಾರಿ  ಪ್ರಾಥಮಿಕ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ವಿತರಣೆ : ರಾಜ್ಯ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು.10.ಜೂನ್.25:- 2025-26ನೇ ಸಾಲಿನ ಶೂ-ಸಾಕ್ಸ್ ಕಾರ್ಯಕ್ರಮಕ್ಕೆ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರಿ ಶಾಲೆಗಳ ಎಸ್.ಡಿ.ಎಂ.ಸಿ ಖಾತೆಗಳ ಮಾಹಿತಿಯನ್ನು ದೃಡೀಕರಿಸಿ ಸಲ್ಲಿಸುವ…

14 hours ago