Ai ಕ್ರಾಂತಿಗೆ ಹೆಜ್ಜೆ: ಯತಿಕಾರ್ಪ್‌ನಿಂದ ರಾಜ್ಯದ 10,000 ಮಂದಿಗೆ ರೂ 20,000 ಮೌಲ್ಯದ ಉಚಿತ AI ಶಿಕ್ಷಣ ಕಿಟ್ ಪಡೆಯಲು ಸುವರ್ಣಾವಕಾಶ!

ಮಂಗಳೂರು.26.ಜುಲೈ.25:- ಕೃತಕ ಬುದ.26.ಜುಲೈ.25:- (AI) ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿರುವ ಯತಿಕಾರ್ಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಿಶ್ವದ ಮೊದಲ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಗಮನ ಸೆಳೆದಿದೆ. ಇದೀಗ. ಈ ಕಾರ್ಡ್ ಅನ್ನು ಒಳಗೊಂಡ AI ಸಾಕ್ಷರತೆಯನ್ನು ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಸಂಸ್ಥೆಯು ಮುನ್ನಡೆಯುತ್ತಿದೆ. ಇದರ ಭಾಗವಾಗಿ, ಪ್ರತಿ ತಾಲೂಕಿನಲ್ಲಿ ಆಯ್ದ 40 ಫಲಾನುಭವಿಗಳಿಗೆ ತಲಾ ರೂ. 20,000 ಮೌಲ್ಯದ AI ಶಿಕ್ಷಣ ಕಿಟ್‌ಗಳನ್ನು ವಿತರಿಸುವ ವಿಶೇಷ ಪೈಲಟ್ ಯೋಜನೆಯನ್ನು ಯತಿಕಾರ್ಪ್‌ ಆರಂಭಿಸಿದೆ.



ಈ ಯೋಜನೆಯಡಿ, ಪ್ರತಿ ತಾಲೂಕಿನಲ್ಲಿ 10 ಯುವ ಉದ್ಯೋಗಾಕಾಂಕ್ಷಿಗಳು, 5 ಪ್ರಗತಿಪರ ಕೃಷಿಕರು, 15 ಉತ್ಸಾಹಿ ವಿದ್ಯಾರ್ಥಿಗಳು, 5 ಪೊಲೀಸ್ ಅಧಿಕಾರಿಗಳು ಹಾಗೂ 5 ಪತ್ರಕರ್ತರು ಸೇರಿದಂತೆ ಒಟ್ಟು 40 ಮಂದಿಯನ್ನು ಆಯ್ಕೆ ಮಾಡಲಾಗುವುದು. ಹೀಗೆ, ರಾಜ್ಯದಾದ್ಯಂತ ಒಟ್ಟು 10,000 ಫಲಾನುಭವಿಗಳಿಗೆ AI ಶಿಕ್ಷಣ ಕಿಟ್‌ಗಳನ್ನು ಉಚಿತವಾಗಿ ವಿತರಿಸಿ, ಕೃತಕ ಬುದ್ಧಿಮತ್ತೆಯನ್ನು ಅವರವರ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಲು ತರಬೇತಿ ನೀಡಲಾಗುವುದು. ಈ ಮೂಲಕ ಒಟ್ಟು 20 ಕೋಟಿ ರೂ. ಮೌಲ್ಯದ AI ಶಿಕ್ಷಣವನ್ನು ಉಚಿತವಾಗಿ ವಿತರಿಸಲಾಗುವುದು.

ಈ ಕಾರ್ಯಕ್ರಮದ ಮೂಲಕ ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ವಿವಿಧ ಕ್ಷೇತ್ರದ 10 ಸಾವಿರ AI ತಂತ್ರಜ್ಞರನ್ನು ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದರಿಂದಾಗಿ ಸಮಾಜದಲ್ಲಿ AI ಬಗೆಗಿನ ತಪ್ಪು ಕಲ್ಪನೆಗಳು ದೂರವಾಗಿ, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರಲು ಸಹಾಯವಾಗಲಿದೆ.



ವಿಶೇಷ ಆಯ್ಕೆ ಪ್ರಕ್ರಿಯೆ :
ಪ್ರತಿ ತಾಲೂಕಿನಲ್ಲಿ 40 ಸೂಕ್ತ ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಮಾಡುವುದು ಸಂಸ್ಥೆಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ರೋಟರಿ, ಲಯನ್ಸ್, ಜೆಸಿಐ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಸರ್ಕಾರೇತರ ಸಂಸ್ಥೆಗಳ (ಎನ್‌ಜಿಓ) ಮೂಲಕ ಆಯ್ಕೆ ಮಾಡಲಾಗುತ್ತದೆ. ಎನ್‌ಜಿಓಗಳು ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ, ಯತಿಕಾರ್ಪ್ ಸಂಸ್ಥೆಯು ಉಚಿತ AI ಶಿಕ್ಷಣ ಕಿಟ್‌ಗಳನ್ನು ಈ ಸ್ಥಳೀಯ ಸಂಸ್ಥೆಗಳಿಗೆ ಪೂರೈಸಲಿದೆ. ಸ್ಥಳೀಯ ಸಂಸ್ಥೆಗಳು ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸಿ ಫಲಾನುಭವಿಗಳಿಗೆ ಕಿಟ್‌ಗಳನ್ನು ಹಸ್ತಾಂತರಿಸುವಾಗ, ಯತಿಕಾರ್ಪ್‌ನ ಸಂಪನ್ಮೂಲ ವ್ಯಕ್ತಿಗಳು ಕಿಟ್‌ ಬಳಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.

ಏನಿದರ ಉದ್ದೇಶ?
ಇಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಅತ್ಯಂತ ಅಗತ್ಯವಾಗಿದೆ. AI ಮಾನವ ಸಮಾಜಕ್ಕೆ ವರದಾನವಾಗುವ ಸಾಮರ್ಥ್ಯದ ಜೊತೆಗೆ ಶಾಪವಾಗಬಲ್ಲ ಅಪಾಯವನ್ನೂ ಹೊಂದಿದೆ. ಈ ತಂತ್ರಜ್ಞಾನವು ನಿರುದ್ಯೋಗ, ಆರ್ಥಿಕ ಅಸಮಾನತೆ, ಖಾಸಗಿತನದ ಉಲ್ಲಂಘನೆ, ತಪ್ಪು ಮಾಹಿತಿ ಹರಡುವಿಕೆ, ದಾರಿತಪ್ಪಿಸುವಿಕೆ ಮತ್ತು ಸ್ವಾಯತ್ತ ಶಸ್ತ್ರಾಸ್ತ್ರಗಳಂತಹ ಗಂಭೀರ ಅಪಾಯಗಳನ್ನು ತಂದೊಡ್ಡಬಹುದು.

ಮಾನವನ ಅಸ್ತಿತ್ವಕ್ಕೆ ಸವಾಲಾಗಬಲ್ಲ ಈ ತಂತ್ರಜ್ಞಾನವನ್ನು, ನೈತಿಕ ಚೌಕಟ್ಟಿನಲ್ಲಿ ಜವಾಬ್ದಾರಿಯುತವಾಗಿ ಬಳಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮಾನವಕುಲದ ಉಳಿವಿಗಾಗಿ AI ಮೇಲೆ ನಿಯಂತ್ರಣ ಸಾಧಿಸುವುದು ಅನಿವಾರ್ಯ. ಒಂದು ವೇಳೆ AI ಬಳಕೆಯು ಮಾನವನ ನೈತಿಕ ಚೌಕಟ್ಟಿನಿಂದ ಹೊರಗುಳಿದರೆ ಅಥವಾ ಕೆಲವೇ ವ್ಯಕ್ತಿ/ಸಂಸ್ಥೆಗಳ ಕೈಯಲ್ಲಿ ಕೇಂದ್ರೀಕೃತವಾದರೆ, ಅದು ಸಮಾಜದಲ್ಲಿ ಭೀಕರ ಅನಾಹುತಗಳಿಗೆ ಕಾರಣವಾಗಬಹುದು.
AI ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯನ್ನು ಪ್ರತಿಯೊಬ್ಬರಲ್ಲಿ ಬೆಳೆಸುವುದು ಇಂದಿನ ಯುಗದ ಅನಿವಾರ್ಯತೆ. ಹಾಗಾಗಿ, ‘ಎಲ್ಲರಿಗೂ AI ಕಲಿಕೆ ಸಾಧ್ಯ’ ಎಂಬುದನ್ನು ಸಾಬೀತುಪಡಿಸಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮೇಲೆ ತಿಳಿಸಿದ ಎಲ್ಲಾ ಗಂಭೀರ ಚಿಂತನೆಗಳನ್ನು ಮನಗಂಡು, ‘AI ಈಗ ಆಯ್ಕೆಯಲ್ಲ, ಅವಶ್ಯಕತೆ’ ಎಂಬ ಧೈಯವಾಕ್ಯದೊಂದಿಗೆ ಯತಿಕಾರ್ಪ್ ಸಂಸ್ಥೆಯು ಕರ್ನಾಟಕದಲ್ಲಿ AI ಸಾಕ್ಷರತಾ ಯೋಜನೆಯನ್ನು ಆರಂಭಿಸಿದೆ.

AI ಕಿಟ್‌ನಲ್ಲಿ ಏನಿದೆ?                                                                                   
  ಯತಿಕಾರ್ಪ್‌ ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ, ಫಲಾನುಭವಿಗಳಿಗೆ ನೀಡಲಾಗುವ 20,000 ರೂ. ಮೌಲ್ಯದ AI ಶಿಕ್ಷಣ ಕಿಟ್‌ಅತ್ಯಾಧುನಿಕ ಸಂಪನ್ಮೂಲಗಳನ್ನು ಒಳಗೊಂಡಿದೆ. AI ಶಿಕ್ಷಣದ ಜೊತೆಗೆ ಇಪ್ಪತ್ತಕ್ಕಿಂತಲೂ ಅಧಿಕ Ai ಟೂಲ್ಗಳನ್ನು ಬಳಕೆಯನ್ನು ತರಬೇತಿನೀಡುವುದಲ್ಲದೆ ಈ ಕೆಳಗಿನವು ಸೇರಿವೆ:

1.⁠ ⁠AI ಆಕ್ಸೆಸ್ ಕಾರ್ಡ್
2.⁠ ⁠ಪ್ರಿಂಟೆಡ್ ಹ್ಯಾಂಡ್‌ಬುಕ್
3.⁠ ⁠ಡಿಜಿಟಲ್ ಆಕ್ಸೆಸ್ ಮೆಟೀರಿಯಲ್
4.⁠ ⁠AI ವರ್ಕ್‌ ಬುಕ್
5.⁠ ⁠ನೋಟ್‌ ಪ್ಯಾಡ್
6.⁠ ⁠ಮಾಸ್ಕಾಟ್ ಬ್ಯಾಡ್ಜ್
7.⁠ ⁠ವೆಲ್‌ಕಮ್ ಲೆಟರ್
8.⁠ ⁠ಸರ್ಟಿಫಿಕೇಟ್ ಆಫ್ ಎನ್‌ರೋಲ್‌ಮೆಂಟ್
9.⁠ ⁠ಲರ್ನಿಂಗ್ ಟ್ರ್ಯಾಕ‌ರ್

ವಿಶ್ವದ ಮೊದಲ AI ಕಾರ್ಡ್ :
ಯತಿಕಾರ್ಪ್ ಸಂಸ್ಥೆಯ ಸಂಶೋಧನಾ ವಿಭಾಗವು 2022ರಿಂದಲೇ AI ಕಾರ್ಡ್‌ಗೆ ಸಂಬಂಧಿಸಿದಂತೆ ನಿರಂತರ ಸಂಶೋಧನೆ ನಡೆಸಿ ವಿಶ್ವದ ಮೊದಲ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸಿ ಯಶಸ್ಸು ಕಂಡಿದೆ. ಅಮೆರಿಕಾದ ಪ್ರಖ್ಯಾತ AI ವಿಜ್ಞಾನಿ ಪ್ರೊ. ಎಸ್.ಎಸ್. ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಈ AI ಕಾರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳ ಒಂದು ಲಕ್ಷಕ್ಕೂ ಅಧಿಕ ಬಳಕೆದಾರರನ್ನು ತಲುಪಿದೆ.ವಿದ್ಯಾರ್ಥಿಗಳು, ವೈದ್ಯರು, ವಕೀಲರು, ಪತ್ರಕರ್ತರು ಸೇರಿದಂತೆ ೩೨ ವಿವಿಧ ಕ್ಷೇತ್ರದ ವೃತ್ತಿಪರರು ಈ ಕಾರ್ಡ್‌ ನಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಕೈಜೋಡಿಸಿ, ಮಾಹಿತಿ ತಲುಪಿಸಿ :
ಈ ಮಹತ್ವದ ಯೋಜನೆ ಯಶಸ್ವಿಗೊಳಿಸಲು ಸಮಾಜದ ಎಲ್ಲ ಸ್ತರಗಳ ಬೆಂಬಲ ಅನಿವಾರ್ಯ. ಸೋಷಿಯಲ್ ಮೀಡಿಯಾ ಪ್ರಭಾವಿಗಳು, ಸಾರ್ವಜನಿಕ ವ್ಯಕ್ತಿಗಳು, ಚಿತ್ರರಂಗದ ಗಣ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ನಮ್ಮೊಂದಿಗೆ ಕೈಜೋಡಿಸಬೇಕೆಂದು ಯತಿಕಾರ್ಪ್ ಸಂಸ್ಥೆಯು ಮನವಿ ಮಾಡುತ್ತದೆ. ಈ ಸುದ್ದಿಯನ್ನು ನಿಮ್ಮ ವೇದಿಕೆಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ. ಅರ್ಹ ಫಲಾನುಭವಿಗಳಿಗೆ ಈ ಉಚಿತ AI ಶಿಕ್ಷಣದ ಅವಕಾಶವನ್ನು ತಲುಪಿಸಲು ಸಹಾಯ ಮಾಡಿ. ನಿಮ್ಮ ಸಹಕಾರವು ಕರ್ನಾಟಕದಲ್ಲಿ AI ಸಾಕ್ಷರತಾ ಕ್ರಾಂತಿಗೆ ನಿರ್ಣಾಯಕ ಕೊಡುಗೆ ನೀಡಲಿದೆ.

ಈ ಮಹತ್ವಾಕಾಂಕ್ಷೆಯ AI ಸಾಕ್ಷರತಾ ಯೋಜನೆಯ ಮೂಲಕ, ಯತಿಕಾರ್ವ್ ಸಂಸ್ಥೆಯು 10.000 ಫಲಾನುಭವಿಗಳಿಗೆ AI ಸಾಕ್ಷರತೆಯನ್ನು ಮಾತ್ರವಲ್ಲದೆ, ಸಮಗ್ರ ತಾಂತ್ರಿಕ ಪ್ರಗತಿಗೆ ಒತ್ತು ನೀಡಿದೆ. AI ಕಾರ್ಡ್‌ಗಳ ಅಭಿವೃದ್ಧಿ ಮತ್ತು ವಿತರಣೆಯು ಈಗಾಗಲೇ 1,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದ್ದು, ರಾಜ್ಯದಲ್ಲಿ ಹೊಸ ವ್ಯಾಪಾರ ಅವಕಾಶಗಳಿಗೂ ರಹದಾರಿ ಮಾಡಿಕೊಟ್ಟಿದೆ ಶಿಕ್ಷಣ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ, ಕರ್ನಾಟಕದಲ್ಲಿ AI ಕ್ರಾಂತಿಗೆ ನಾಂದಿ ಹಾಡುವ ಮೂಲಕ, ಯತಿಕಾರ್ಪ್ ಸಂಸ್ಥೆಯು ಭವಿಷ್ಯದ ಬಾಗಿಲು ತೆರೆಯುತ್ತಿದೆ.

ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತಿ :
೧. ಯತೀಶ ಕೆ . ಎಸ್ (MANAGING DIRECTOR )
೨. ಕೃಪಾ ಕೆ  ( GENERAL MANAGER )
೩. ನವ್ಯ ಅಮೈ (BUSINESS DEVELOPMENT MANAGER )
೪. ಭೂಮಿಕಾ ಪೂಜಾರಿ ( HR MANAGER )
೫. ಶ್ರೀನಿಧಿ ಸಿ ( SOFTWARE DEVELOPER
೬. ಕಿರಣ್ ಸಿ .ಸಿ (SOFTWARE DEVELOPER)
೭. ರೆತಿಕ್ (S&M ASSOCIATE )
೮.ಜಿತೇಶ್ ಶೆಟ್ಟಿ (S&M ASSOCIATE)

prajaprabhat

Recent Posts

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಎಲ್ಲಾ ಷರತ್ತುಗಳನ್ನು ಇವರೇ ಒಪ್ಪಿ ಒಳ ಬಂದಿರುತ್ತಾರೆ, ಈಗ ಇವರೇ ಪ್ರತಿಭಟಿಸುತ್ತಾರೆ,

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…

2 hours ago

ಮಹಾನಗರ ಪಾಲಿಕೆ’ಗೆ 344 ಹೊಸ ಹುದ್ದೆ ಮಂಜೂರು!

ಬೀದರ.02.ಆಗಸ್ಟ್.25:- ಬೀದರ್‌ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ  ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…

8 hours ago

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ; ಶಾರುಖ್, ಮ್ಯಾಸ್ಸಿ ಅತ್ಯುತ್ತಮ ನಟ, ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ

ಹೊಸ ದೆಹಲಿ.02.ಆಗಸ್ಟ್.25:- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿ ಚಿತ್ರ 12ನೇ ಫೇಲ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂದು…

8 hours ago

ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ಸ   ಸನ್ಮಾನಿಸಿದರು

ಹೊಸ ದೆಹಲಿ.02.ಆಗಸ್ಟ್.25:- ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯಲ್ಲಿ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದರು.…

8 hours ago

ಕೇಂದ್ರ ಸಚಿವ ಗಡ್ಕರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಪುಣೆ.02.ಆಗಸ್ಟ್.25:- ಪುಣೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು…

8 hours ago

ಮಹಾರಾಷ್ಟ್ರ: ದಹಿ ಹಂಡಿಯ ಗೋವಿಂದರಿಗೆ ವಿಮಾ ರಕ್ಷಣೆಯನ್ನು ಸರ್ಕಾರ ಘೋಷಿಸಿದೆ.

ಮುಂಬೈ ಗೋಕುಲಾಷ್ಟಮಿಯ ಸಂದರ್ಭದಲ್ಲಿ ಮುಂಬರುವ ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ 1.5 ಲಕ್ಷ ಗೋವಿಂದರಿಗೆ ಮಹಾರಾಷ್ಟ್ರ ಸರ್ಕಾರ ವಿಮಾ ರಕ್ಷಣೆಯನ್ನು…

14 hours ago