೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕುರಿತು ನಗರದಲ್ಲಿ ಜಾಥಾ

೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕುರಿತು ನಗರದಲ್ಲಿ ಜಾಥಾ


ಬೀದರ,ಫೆ,೭:- ಇಂದು ದಿನಾಂಕ ೦೭-೦೨-೨೦೨೫ ರಂದು ಬೆಳಗ್ಗೆ ೧೦.೦೦ ಗಂಟೆಗೆ. ಜಿಲ್ಲಾ ಕಾನೂನ ಸೇವೆ ಪ್ರಾದಿಕಾರ ಹಾಗು ಜಿಲ್ಲಾಡಳಿತ ಬೀದರ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೀದರ ಮೋಟಾರ್ ವಾಹಾನ ತರಬೇತಿ ಶಾಲೆಯ ಸಂಘದ ವತಿಯಿಂದ ೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕುರಿತು ಬೀದರ ನಗರದಲ್ಲಿ ಜಾಥಾ ಕಾರ್ಯಕ್ರಮವನ್ನು  ಸಾಯಿ ಪಬ್ಲಿಕ ಸ್ಕೂಲ್ ಮೈದಾನದಿಂದ ಚಾಲನೆಯನ್ನು  ಜಿಲ್ಲಾ ಕಾನೂನ ಸೇವೆ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗು ಹಿರಿಯ ಸಿವಿಲ್ ನ್ಯಾಯದೀಶರಾದ ಗೌರವಾನಿತ ಪ್ರಕಾಶ ಬನ್ಸೋಡೆ ಹಾಗು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಿ.ಕೆ. ಬಿರಾದರ ಹಾಗು ಸಂಚಾರಿ ಪೋಲಿಸ ಠಾಣೆಯ. ಪಿ.ಐ. ಬಾಪುಗೌಡ ಪಾಟೀಲ ಅವರು ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.


ರಸ್ತೆ ಸುರಕ್ಷತಾ ಕುರಿತು ಸ್ಲೊಗನಗಳೊಂದಿಗೆ ಕುಡಿದು ವಾಹಾನ ಚಾಲನೆ ಮಾಡಬಾರದು. ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ಜೀವಾ ಉಳಿಸಿ, ಕಾರ ಚಾಲಕರು ಸೀಟ ಬೆಲ್ಟ ಕಡ್ಡ್ಡಾಯವಾಗಿ ಧರಿಸಬೇಕು. ಮಧ್ಯಪಾನ ಮಾಡಿ ವಾಹಾನ ಚಾಲನೆ ಮಾಡಬಾರದು.

ವಾಹಾನ ಚಾಲನೆ ಮಾಡುವಾಗ ಮೊಬೈಲ ಫೋನ ಉಪಯೊಗಿಸಬಾರದು. ವಾಹಾನಗಳ ನಡುವೆ ಸುರಕ್ಷಿತ ಅಂತರವಿರಲಿ. ರಸ್ತೆಯ ಮೇಲೆ ಬರುವ ಎಲ್ಲಾ ಸಂಚಾರಿ ಚಿಹ್ನೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಮಾಡಬೇಕು.

ವಾಹಗಳನ್ನು ಯಾವಗಲೂ ಸೂಸ್ಥಿಯಲ್ಲಿಡಿ. ಅಂಕುಡೊAಕು ತಿರುವಿನಲ್ಲಿ ಓವರೆ ಟೇಕ ಮಾಡಬಾರದು. ಪಾದಚಾರಿಗಳು ದಾಟೂವ ಸ್ಥಳ ಹಾಗೂ ಶಾಲಾ ವಲಯಗಳಲ್ಲಿ ವೇಗವನ್ನು ಕಡಿಮೆ ಮಾಡಿ ರಸ್ತೆ ವಾಹಾನ ಚಲಾಯಿಸಬೆಕು ಹೀಗೆ ಅನೇಕ ಸ್ಲೊಗನಗಳನ್ನು ಹೇಳುತ್ತಾ, ನಗರದ ಅಂಬೇಡ್ಕರ ವೃತ್ ಹಾಗು ಬಸವೇಸ್ವರ ವೃತ್, ಭಗತಸಿಂಗ ವೃತ್ ಜಿಲ್ಲಾದಿಕಾರಿಗಳ ಕಚೇರಿಯ ಮುಂಭಾಗದಿoದ ಸಾಯಿ ಸ್ಕೂಲ ಮೈದಾನಕ್ಕೆ ತೆರಳಿ ಮುಕ್ತಾಯಗೋಂಡಿತು.


ಈ ಜಾಥಾ ಕಾರ್ಯಕ್ರಮದಲ್ಲಿ ಮಾತಾ ಮಾಣಿಕೇಶ್ವರಿ ಪಿ.ಯು. ಕಾಲೇಜ ಹಾಗು ಗುರು ನಾನಕ ಪಿ.ಯು. ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿಸಿದ್ದರು.


ಈ ಕಾರ್ಯಕ್ರಮದಲ್ಲಿ ಹಿರಿಯ ಮೋಟಾರ ವಾಹಾನ ನೀರಿಕ್ಷಕರಾದ ಎನ್.ಎಸ್. ಪ್ರವೀನ ಹಾಗು ಹಿರಿಯ ಮೋಟಾರ ವಾಹಾನ ನೀರಿಕ್ಷಕರಾದ ಕೆ. ಜೆವರಯ್ಯಾ, ಮೋಟಾರ ವಾಹಾನ ನೀರಿಕ್ಷಕರಾದ ಇರಮ್ಮಾ ಸಿ. ನೂತನ ನಗರ ಪೋಲಿಸ ಠಾಣೆಯ ಪಿ.ಎಎಸ್.ಐ. ಪ್ರಭಾಕಾರ ಪಾಟೀಲ, ರಾಜ್ಯ ಮೋಟಾರ್ ವಾಹಾನ ತರಬೇತಿ ಶಾಲೆಯ ಸಂಘಟನಾ ಕಾರ್ಯದರ್ಶಿ ಶಿವರಾಜ ಜಮಾದರ ಖಾಜಾಪುರ, ಬೀದರ ಮೋಟಾರ್ ವಾಹಾನ ತರಬೇತಿ ಶಾಲೆಯ ಸಂಘದ ಅಧ್ಯಕ್ಷ ಪ್ರಕಾಶ ಗುಮ್ಮೆ, ಕಾರ್ಯದರ್ಶಿ ರಾಜಕುಮಾರ ಬಿರಾದರ, ಸಹ ಕಾರ್ಯದರ್ಶಿ ಸಾಗರ ಉಂಡೆ, ಉಪಾಧ್ಯಕ್ಷ ಶೆರಖಾನ, ಸೈಯದ ಮಕಸೂದ ಅಲಿ, ಎಶಪ್ಪಾ ಚಿಟ್ಟಾ, ಶಿವಾನಂದ, ಪಂಡಿತ ವಿರಣ್ಣಾ, ಸಂಜುಕುಮರ ಮುಲಗೆ, ಸುದಾಕರ ಬೀರಾದರ. ಉಮೇಶ ಘುಳೆ, ಅಹ್ಮದ ಖಾನ, ಶೋಯೆಬ ಸಿದ್ದಿಕಿ, ಸುರೇಶ ಗಾಯಕವಾಡ. ಉಮೇಶ ಉಂಡೆ ಹಾಗು ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ವಾಹಾನ ತರಬೇತಿ ಶಾಲೆಯ ಪ್ರಾಚಾರ್ಯರು ಹಾಗು ಚಾಲಕರು ಹಾಜರಿದ್ದರು.

prajaprabhat

Recent Posts

ʼರೋಹಿತ್ ವೇಮುಲ ಕೇಂದ್ರಕ್ಕೆ ಪತ್ರ ಬರೆದ ವಿಶ್ವಸಂಸ್ಥೆ.

ಬೆಂಗಳೂರು.09.ಜೂನ್.25:- ಕೇಂದ್ರೀಯ ವಿಶ್ವವಿದ್ಯಾಲಯ ಹೈದರಾಬಾದ್ ತೆಲಂಗಾಣಾ ರೋಹಿತ್ ಬೇಮುಲ ಅವರಮೇಲೇ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ, ಜಾತಿ ದೌರ್ಜನ್ಯವನ್ನು…

4 hours ago

ವಿದ್ಯಾರ್ಥಿ ವೇತನ ಕೈಪಿಡಿ: ಮಿರೇ ಅಸೆಟ್ ಫೌಂಡೇಷನ್‌

ಮಿರೇ ಅಸೆಟ್ ಫೌಂಡೇಷನ್‌ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…

12 hours ago

AllA ಅವರ “ಯೋಗ ಸಮಾವೇಶ” ಕಾರ್ಯಾಗಾರ ಇಂದು ಪ್ರಾರಂಭವಾಗಿದೆ

ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…

13 hours ago

ಸಿಕ್ಕಿಂನ ಭೂಕುಸಿತ ಪ್ರದೇಶಗಳಿಂದ 28 ನಾಗರಿಕರು ಮತ್ತು 20 ಸೈನಿಕರನ್ನು ವಿಮಾನದ ಮೂಲಕ ರಕ್ಷಿಸಲಾಗಿದೆ.

ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ…

13 hours ago

ಪ್ರತ್ಯೇಕತೆಯಿಂದ ನಾವೀನ್ಯತೆಯವರೆಗೆ – ಸೇವಾ, ಸುಶಾಸನ್, ಗರೀಬ್ ಕಲ್ಯಾಣ್ ಅಡಿಯಲ್ಲಿ ಒಂದು ದಶಕದ ಪರಿವರ್ತನೆ.

ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…

13 hours ago

ಗ್ರಾ.ಪಂ.ಗಳಲ್ಲಿ ಅರ್ಹ ಆಸ್ತಿಗಳಿಗೆ ಇ-ಸ್ವತ್ತು ಅಭಿಯಾನ : ರಾಜ್ಯ ಸರ್ಕಾರ ಆದೇಶ.!

ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…

13 hours ago