ಬೀದರ.13ಜನವರಿ.25:- ಕರ್ನಾಟಕ ರಾಜ್ಯಾದ್ಯಂತ ಶಿಕ್ಷಣ-ಕಲಿಕೆ, ಸಂಶೋಧನೆ, ವಿಸ್ತರಣೆ ಹಾಗೂ ಗ್ರಾಮೀಣ ಆಧಾರಿತ ತಂತ್ರಜ್ಞಾನಗಳನ್ನು ವರ್ಗಾಯಿಸುವ ಧ್ಯೇಯದೊಂದಿಗೆ ಸ್ಥಾಪಿತವಾಗಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದದ್ಯಾಲಯ, ಬೀದರ ಜನವರಿ.17 ರಂದು ತನ್ನ ಇಪ್ಪತ್ತನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿರುವ ಅಂಗವಾಗಿ ಜನವರಿ.17 ರಿಂದ 19 ರವರೆಗೆ ವಿಶ್ವವಿದ್ಯಾಲಯದ ಆವರಣದಲ್ಲಿ “ಜಾನುವಾರು, ಕುಕ್ಕುಟ ಮತ್ತು ಮಿತ್ಸ್ಯಮೇಳ-2025” ನ್ನು ಆಯೋಜಿಸಲಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಪಾಲ್ಗೊಂಡು ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಕೆ.ಸಿ.ವೀರಣ್ಣ ತಿಳಿಸಿದರು.
ಅವರು ಸೋಮವಾರದಂದು ವಿಶ್ವವಿದ್ಯಾಲಯದ ಆವರಣದಲ್ಲಿ “ಜಾನುವಾರು, ಕುಕ್ಕುಟ ಮತ್ತು ಮತ್ಸ್ಯಮೇಳ-2025” ನ್ನು ಆಯೋಜಿಸಿರುವ ಕುರಿತು ವಿಶ್ವವಿದ್ಯಾಲಯದ ನಂದಿನಗರ ಆವರಣದ ವ್ಯವಸ್ಥಾಪಕ ಮಂಡಳಿ ಕೊಠಡಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಈ ವಿಶ್ವವಿದ್ಯಾಲಯವು ಕರ್ನಾಟಕದ ಏಕೈಕ ಪಶು ವಿಶ್ವವಿದ್ಯಾಲಯವಾಗಿದ್ದು, 2005 ರಲ್ಲಿ ಸ್ಥಾಪನೆಗೊಂಡಿತ್ತು ಪ್ರಸ್ತುತ ಈ ವಿಶ್ವವಿದ್ಯಾಲಯದಡಿಯಲ್ಲಿ ಏಳು ಪಶು ವೈದ್ಯಕೀಯ ಮಹಾವಿದ್ಯಾಲಯಗಳು ಎರಡು ಹೈನುಗಾರಿಕಾ ಮಹಾ ವಿದ್ಯಾಲಯಗಳು ಮತ್ತು ಒಂದು ಮೀನುಗಾರಿಕಾ ವಿದ್ಯಾಲಯ, 10 ಸಂಶೋಧನಾ ವಲಯಗಳು ಹಾಗೂ ಐದು ಡಿಪೆÇ್ಲೀಮಾ ಕಾಲೇಜುಗಳು ಇದರಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ವಿಶ್ವವಿದ್ಯಾಲಯದಲ್ಲಿ ಒಟ್ಟು 350ಕ್ಕೂ ಹೆಚ್ಚು ಶಿಕ್ಷಕ ವೃಂದದದವರು ಹಾಗೂ 800ಕ್ಕೂ ಹೆಚ್ಚು ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಸುಮಾರು 2000 ಹೆಚ್ಚು ಪದವೀಧರ ವಿದ್ಯಾರ್ಥಿಗಳು, 250 ಸ್ನಾತಕೋತ್ತರ ಹಾಗೂ 50 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿಯನ್ನು ಓದುತ್ತಿದ್ದಾರೆ.
ವಿಶ್ವವಿದ್ಯಾಲಯದ ಸ್ಥಾಪನೆಯ ಅಂಗವಾಗಿ ಜನವರಿ.17 ರಿಂ 19 ವರೆಗೆ ರಾಜ್ಯ ಮಟ್ಟದ ಪಶು ಕುಕ್ಕುಟ ಮತ್ತು ಮತ್ಸ್ಯಮೇಳವನ್ನು ಆಯೋಜಿಸಲಾಗಿದೆ ಎಂದರು.
ಈ ಮೇಳವು ರಾಜ್ಯದ ಸಮಸ್ತ ರೈತರಿಗೆ, ಪಶು ಹಾಗೂ ಮೀನುಗಾರಿಕೆ ಸಾಕಾಣಿಕೆಯಲ್ಲಿ ಆಸಕ್ತಿಯುಳ್ಳ ಯುವ ಜನರಿಗೆ ವಿವಿಧ ತಳಿಗಳು, ಇತ್ತೀಚೆಗೆ ಮೂಡಿ ಬಂದ ಹೊಸ ತಂತ್ರಜ್ಞಾನಗಳು, ಸಾಕಾಣಿಕ ಪದ್ಧತಿಗಳು ಹಾಗೂ ಇತರ ಅವಿಷ್ಕಾರಗಳನ್ನು ತಿಳಿದುಕೊಳ್ಳಲು ಒಂದು ಉತ್ತಮ ಅವಕಾಶವಾಗಿರುತ್ತದೆ.
ಸದರಿ ಪಶು ಮೇಳದಲ್ಲಿ ಸುಮಾರು 180ಕ್ಕೂ ಹೆಚ್ಚು ಸ್ಟಾಲ್ಗಳನ್ನು ಅಳವಡಿಸಲಾಗುತ್ತದೆ, ಇದರಲ್ಲಿ ವಿವಿಧ ಇಲಾಖೆಗಳಾದ ಕೃಷಿ, ರೇಷ್ಮೆ, ತೋಟಗಾರಿಕೆ ಮತ್ತು ಜಾನುವಾರು ಇಲಾಖೆಗಳು ಭಾಗವಹಿಸುತ್ತಿವೆ. ಜೊತೆಗೆ ರಾಜ್ಯದ ವಿವಧ ಜಿಲ್ಲೆಯಿಂದ ಬಂದ ಎಲಾ ್ಲರೈತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೂ ಆಹಾರ ಮಳಿಗೆಗಳನ್ನು ಕೂಡ ಹಾಕಾಲಾಗಿರುವುದರಿಂದ ಮಕ್ಕಳಿಗೆ ವಿಶೇಷ ಆಕರ್ಷಣೆಯಾಗಲಿದೆಂದರು.
ಈ ಮೇಳದಲ್ಲಿ ರಾಜ್ಯದ ರೈತರನ್ನು ಪ್ರೋತ್ಸಾಹಿಸಲು ಪ್ರಗತಿಪರ ರೈತರಿಗೆ ರಾಜ್ಯದ 31 ಜಿಲ್ಲೆಯಿಂದ ಶ್ರೇಷ್ಠ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ ಪ್ರಧಾನವನ್ನು ಮಾಡಲಾಗುತ್ತಿದೆ. ಇದಲ್ಲದೆ ರೈತರ ಕಲಿಕೆಗಾಗಿ ವಿಜ್ಞಾನಿ ರೈತ ಸಂವಾದ ಹಾಗೂ ರೈತ- ರೈತರ ಸಂವಾದ ಅದಲ್ಲದೆ ಅತ್ಯುತ್ತಮ ಮಳಿಗೆ ಅತ್ಯುತ್ತಮ ಜಾನುವಾರು ತಳಿ ಹೀಗೆ ವಿವಿಧ ಪ್ರಶಸ್ತಿಗಳನ್ನು ಕೂಡ ವಿತರಿಸಲಾಗುತ್ತದೆ.
ಮತ್ಸ್ಯ ಮೇಳದಲ್ಲಿ 16ಕ್ಕೂ ಹೆಚ್ಚು ಸ್ಟಾಲ್ಗಳನ್ನು ಅಳವಡಿಸಲಾಗಿದ್ದು, ನಾನಾ ಮೀನು ತಳಿಗಳು ಮತ್ತು ಮಕ್ಕಳ ಆಕರ್ಷಣೆಯಾಗಿ ವಿನ್ಯಾಸಗೊಳಿಸಲಾಗುತ್ತದೆ. ಸುಸ್ಥಿರ ಮೀನುಗಾರಿಕೆ ಮತ್ತು ಜಲಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು. ರಾಜ್ಯದ ಜಲ ಸಂಪನ್ಮೂಲಗಳು ಮತ್ತು ಮೀನುಗಾರಿಕೆ ವಲಯದ ಪ್ರಚಾರ. ಮೀನುಗಾರರು ಮತ್ತು ಅಕ್ವಾಕಲ್ಚರ್ ರೈತರ ಜೀವನೋಪಾಯವನ್ನು ಸುಧಾರಿಸುವುದು ಈ ಮತ್ಸ್ಯ ಮೇಳದ ಧ್ಯೇಯವಗಿದೆ.
ಈ ಮೇಳದಲ್ಲಿ ಮೀನುಗಾರಿಕೆ ಶೈಕ್ಷಣಿಕ ಮತ್ತು ಉದ್ಯಮ ಮಳಿಗೆಗಳು, ರುಚಿಕರ ಆಹಾರ ಮಳಿಗೆಗಳು, ಅಲಂಕಾರಿಕ ಮೀನು ಪ್ರದರ್ಶನ, ನೇಚರ್ ಅಕ್ವೇರಿಯಂ, ಚಿಪ್ಪುಗಳ ಪ್ರದರ್ಶನ ಪ್ರಮುಖ ಅಂಶಗಳಾಗಿವೆ. ಸುಮಾರು 20ಕ್ಕು ಹೆಚ್ಚು ದೇಶದೆಲ್ಲೆಡೆಯ ಹಸು, ಎಮ್ಮೆ, ಆಡು ಹಾಗೂ ಕುರಿ ತಳಿಗಳನ್ನು ಪ್ರದರ್ಶಿಸಲಾಗುತ್ತಿದೆ.
ಹಸುವಿಗೆ ಸಂಬಂಧಿಸಿದಂತೆ ದೇಸಿ ತಳಿಗಳಾದ ಗಿರ್, ಸಾಹಿವಾಲ, ಓಂಗೊಲ, ಕಾಂಕ್ರೇಜ ಮುಂತಾದ ತಳಿಗಳು ಹಾಗೂ ನಮ್ಮದೇ ಬೀದರನ ಹೆಮ್ಮೆಯ ತಳಿಯಾದ ದೇವಣಿ ತಳಿಯನ್ನು ಪ್ರದರ್ಶಿಸಲಾಗುತ್ತಿದೆ. ಇತ್ತೀಚಿಗೆ ಪ್ರಧಾನಿ ಮೋದಿ ಅವರಿಂದ ಪರಿಚಯಿಸಲ್ಪಟ್ಟ ಹಾಗೂ ಅತಿ ಸಣ್ಣ ತಳಿಯಾದಂತಹ ಪುಂಗನೂರ್ ಮೇಳದ ವಶೇಷ ಸೆಳೆತವಾಗಿದೆ ಎಂದರು.
ಎಮ್ಮೆ ತಳಿಯಲ್ಲಿ ಮುರ್ರಾ, ಪಂಡ್ರಾಪುರಿ, ಸುರ್ತಿ ಮುಂತಾದ ತಳಿಗಳು,ಕುರಿ ಮತ್ತು ಮೇಕೆಯಲ್ಲಿ ಬಿದರಿ, ಉಸ್ಮಾನಾಬಾದಿ, ಸಿರೋಹಿ, ಬಾರ್¨ರಿ, ಕೆಂಗೂರಿ ಹೀಗೆ ಮುಂತಾದ ತಳಿಗಳು ಮೇಳದ ವಿಶೆಷ ಆಕರ್ಷಣೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತಿ ಪಡೆದಿರುವಂತಹ ಕಡಕ್ ನಾಥ್, ಅಸೀಲ್ ಹಾಗೂ ಇತರೆ ದೇಸಿ ತಳಿಗಳನ್ನು ಕೂಡ ಇಡಲಾಗುತ್ತಿದೆ.
ಬರೀ ಕೋಳಿ ತಳಿಗಳಲ್ಲದೆ ಪ್ರಭೇದಗಳಾದಂತಹ ಬಾತುಕೋಳಿ, ಟರ್ಕಿ, ಗಿನಿ ಫೌಲ್, ಗೌಜುಗನ ಹಕ್ಕಿ ಹಾಗೂ ಗೀಸ್ಕುಕ್ಕುಟ ಪ್ರಪಂಚದ ಪ್ರಮುಖ ಅಂಶಗಳಾಗಿವೆ.
ಪಶು ಮೇಳದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ಫಲಪುಷ್ಪ ಪ್ರದರ್ಶನವು “ಶಾಂತಿ ಮತ್ತು ಸಮಾನತೆ” ಎಂಬ ಧೀಮೆಯಿಂದ ಆಯೋಜಿಸಲಾಗುತ್ತಿದೆ. ಇದರಲ್ಲಿ ಬುದ್ಧ ಭಗವಾನರ ಮೂರ್ತಿಯನ್ನು ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಕುವೆಂಪು, ಬಸವಣ್ಣ, ಮತ್ತು ಬಸವೇಶ್ವರರ ಭಾವಚಿತ್ರಗಳನ್ನು ಹೂವಿನ ಅಲಂಕಾರದಿಂದ ಸಿಂಗರಿಸಲಾಗಿದೆ.
ತರಕಾರಿಗಳನ್ನು ನೆಲದ ಮೇಲೆ ಕೆತ್ತಿತೋರಿಸುವ ವಿನೂತನ ಪ್ರದರ್ಶನ, ಸ್ಥಳೀಯವಾಗಿ ಬೆಳೆದ ತರಕಾರಿಗಳ ಸಂಗ್ರಹಣೆ, ಹಾಯ್ ಸರ್, ಮತ್ತು ಹೂ ಕುಂಡಗಳ ಕಲಾತ್ಮಕ ಜೋಡಣೆ ಈ ಪ್ರದರ್ಶನದ ಪ್ರಮುಖ ಆಕಷರ್Àಣೆಗಳಾಗಿವೆ ಎಂದು ಹೇಳಿದರು.
ಮೇಳದ ಕೊನೆಯ ದಿನದಂದು ಶ್ವಾನ ಪ್ರೀಯರಿಗೆ ಶ್ವಾನ ಪ್ರದರ್ಶನ ಕೂಡ ಆಯೋಜಿಸಲಾಗುತ್ತಿದೆ. ಸುಮಾರು 15 ವಿವಿಧ ತಳಿಗಳ 200 ಶ್ವಾನಗಳು ಇದರಲ್ಲಿ ಭಾಗವಹಿಸಲಿವೆ.
ಇವುಗಳಲ್ಲಿ ಲ್ಯಾಬ್ರಡಾರ್ರಿಟ್ರೈವರ್ಸ್, ಜರ್ಮನ್ ಶೆಫಡ್ರ್ಸ್, ಗೋಲ್ಡನ್ ರಿಟ್ರೀವರ್ಸ್, ಪೆÇಮೆರೇನಿಯನ್ಸ್, ರಾಟ್ವೀಲರ್ಸ್, ಗ್ರೇಟ್ಡೇನ್ಸ್, ಬೀಗಲ್ಸ್, ಬಾಕ್ಸರ್ಗಳು ಸೇರಿದಂತೆ 15 ತಳಿಗಳು ಮತ್ತು ಚಿಹೋವಾಸ್ನಂತಹ ಅತೀ ಚಿಕ್ಕ ತಳಿ ಮತ್ತು ಸೇಂಟ್ ಬರ್ನಾಡ್ಸ್ನಂತಹ ದೈತ್ಯ ತಳಿಗಳು ಸಹ ಭಾಗವಹಿಸಲಿವೆ. ಶ್ವಾನಗಳು ಗಂಡು ಮತ್ತು ಹೆಣ್ಣುಗಳಿಗೆ ಪ್ರತ್ಯೇಕ ನಿರ್ಣಯದೊಂದಿಗೆ ತಳಿವಾರು ಸ್ಪರ್ಧಿಸುತ್ತವೆ.
ಕರ್ನಾಟಕದ ಹೆಮ್ಮೆಯನ್ನು ಹೆಚ್ಚಿಸುವ ನಮ್ಮದೇ ಆದ ಮುಧೋಳ ಹೌಂಡ್ಕೂಡ ಪ್ರದರ್ಶನಗೊಳ್ಳಲಿದೆ. ವೇಗ, ಚುರುಕುತನ ಮತ್ತು ನಿಷ್ಠೆಗೆ ಹೆಸರುವಾಸಿಯಾಗಿರುವ ಈ ಸಾಂಪ್ರದಾಯಿಕ ತಳಿಯು ಪರಂಪರೆಯ ಸಂಕೇತಮಾತ್ರವಲ್ಲದೆ ಭಾರತೀಯ ಸೇನೆಯಲ್ಲಿ ಹೆಮ್ಮೆಯಿಂದ ಸೇವೆ ಸಲ್ಲಿಸುತ್ತಿವೆ.
ಪ್ರತಿ ತಳಿಯಲ್ಲಿ ಗಂಡು ಮತ್ತು ಹೆಣ್ಣು ಶ್ವಾನಗಳಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರನ್ನುಆಯ್ಕೆ ಮಾಡಲಾಗುವುದು. ಇವುಗಳಲ್ಲಿ ಮೊದಲ ಸ್ಥಾನ ಪಡೆದ ಶ್ವಾನಗಳು ಮುಂದಿನ ಸುತ್ತಿಗೆ ಮುನ್ನಡೆಯುತ್ತವೆ. ಮರಿ ವಿಭಾಗದಲ್ಲಿ, ಅಗ್ರ 5 ನಾಯಿ ಮರಿಗಳನ್ನು ಆಯ್ಕೆ ಮಾಡಲಾಗುತ್ತದೆ ಇವುಗಳಲ್ಲಿ ಪ್ರಥಮ ಸ್ಥಾನದ ಶ್ವಾನ ವiರಿ ಮುಂದಿನ ಸುತ್ತು, ಪ್ರದರ್ಶನದ ಅತ್ಯುತ್ತಮ ಶ್ವಾನಗಳ (ಬೆಸ್ಟ್ಇನ್ ಶೋ) ಸುತ್ತಿನಲ್ಲಿ ಸ್ಪರ್ಧಿಸುತ್ತದೆ. ಅತ್ಯುತ್ತಮ ಶ್ವಾನಗಳ (ಬೆಸ್ಟ್ಇನ್ ಶೋ) ಸುತ್ತಿನಲ್ಲಿಅಗ್ರ ಹತ್ತು ಶ್ವಾನಗಳನ್ನು ಆಯ್ಕೆ ಮಾಡಲಾಗುವುದು.
ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಶ್ವಾನಗಳನ್ನು ಚಾಂಪಿಯನ್ ಆಫ್ ಚಾಂಪಿಯನ್ಸ್ ಮತ್ತು ರನ್ನರ್-ಅಪ್ಚಾಂಪಿಯನ್ ಆಫ್ ಚಾಂಪಿಯನ್ಸ್ ಆಗಿ ತಲಾರೂ. 5000 ಮತ್ತು ರೂ. 3000 ಆಕರ್ಷಕ ನಗದು ಬಹುಮಾನ ಗಳಿಂದ ಪುರಸ್ಕರಿಸಲಾಗುವುದು. ಪ್ರದರ್ಶನದಜೊತೆಗೆಎಲ್ಲ ಶ್ವಾನಗಳಿಗೆ ಉಚಿತರೇಬಿಸ್ ರೋಗ ನಿರೋದಕ ಲಸಿಕೆ ನೀಡಲಾಗುವುದು ಎಂದ ಹೇಳಿದರು.
ಈ ಮೇಳದಲ್ಲಿ ಸಂಸ್ಕøತಿಕ ಕಾರ್ಯಕ್ರಮವು ಕೂಡಒ ಂದು ವಿಶೇಷ ಆಚರಣೆಯಾಗಿದ್ದು ವಿವಿಧ ಕಲಾತಂಡಗಳಿಂದ ಸುಗಮ ಸಂಗೀತ, ಭರತನಾಟ್ಯಂ, ಹಾಡುಗಳು, ಡೊಳ್ಳುಕುಣಿತ, ಕಂಸಾಳೆ ಹೀಗೆ ಮುಂತಾದವು ಕಾರ್ಯಕ್ರಮಗಳನ್ನು ಒಳಗೊಂಡಿದ್ದು ಹಾಗೂ ವಿದ್ಯಾರ್ಥಿಗಳಿಂದ ಕೂಡ ಪ್ರದರ್ಶನ ನೀಡಲಾಗುತ್ತದೆ.
ಪಶುಸಂಗೋಪನೆ, ಮೀನು ಸಾಕಾಣೆಗೆ ಹಾಗೂ ಕೋಳಿ ಸಾಕಾಣಿಕೆ ಬಗ್ಗೆ ತಿಳಿದು ಕೊಳ್ಳಲು ರಾಜ್ಯದ ರೈತರಿಗೆ, ಯುವ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ಒಂದು ಉತ್ತಮ ಅವಕಾಶವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಳದಲ್ಲಿ ಪಾಲ್ಗೊಂಡು ಮೇಳದ ಲಾಭವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಭೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ ಬತಮುರ್ಗೆ, ಡೀನ್ ಎಂ.ಕೆ.ತಾಂದಳೆ, ಡಾ.ವಿವೇಕ ಹೋಸಳ್ಳಿ, ಶ್ರೀಕಾಂತ ಕುಲಕರ್ಣಿ ಮಾಧ್ಯಮ ಸಂಯೋಜಿತ ಚನ್ನಪ್ಪಗೌಡ ಬಿರಾದಾರ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ನರಸಪ್ಪ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಇತರೇ ಅಧಿಕಾರಿಗಳು ಉಪಸ್ಥಿತರಿದ್ದರು.
ಮಿರೇ ಅಸೆಟ್ ಫೌಂಡೇಷನ್ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹತೆ: ಅರ್ಜಿದಾರರು ಹಿಂದಿನ…
ಹೊಸ ದೆಹಲಿ.09.ಜೂನ.25:- ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ, ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA) ಇಂದಿನಿಂದ ಯೋಗ ಸಮಾವೇಶ ಎಂಬ…
ಹೊಸ ದೆಹಲಿ.09.ಜೂನ್.25:- ಭಾರೀ ಮಳೆಯಿಂದಾಗಿ ಉಂಟಾದ ಹಲವಾರು ಭೂಕುಸಿತಗಳಿಂದಾಗಿ ಈ ಪ್ರದೇಶದಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಉತ್ತರ ಸಿಕ್ಕಿಂನ ಚಾಟೆನ್ನಲ್ಲಿ…
ಹೊಸ ದೆಹಲಿ.09.ಜೂನೆ.25:- ಸೇವಾ, ಸುಶಾಸನ ಮತ್ತು ಗರೀಬ್ ಕಲ್ಯಾಣ್ ತತ್ವಗಳಿಂದ ನಡೆಸಲ್ಪಡುವ ಭಾರತವು ಒಂದು ದಶಕದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ.…
ಬೆಂಗಳೂರು.09.ಜೂನ್.25:- ರಾಜ್ಯ ಸರ್ಕಾರದಿಂದ ಗ್ರಾಮೀಣ ಜನತೆಗೆ ಆಸ್ತಿ ವಿವರಗಳ ವಹಿಯಲ್ಲಿ ಮಾಲೀಕನ ಹೆಸರು, ಸೇರ್ಪಡೆ, ಬದಲಾವಣೆ ಶುಲ್ಕವನ್ನು ನಮೂನೆ 9…
ಈ ಜಿಲ್ಲೆಗಳಲ್ಲಿ Yellow Alert ಬಳ್ಳಾರಿ, ದಾವಣಗೆರೆ, ಕೊಡಗು ಯಲ್ಲೋ ಅಲರ್ಟ್ ಬೆಂಗಳೂರು.09.ಜೂನ್.25:- ಕರ್ನಾಟಕದಲ್ಲಿ (Karnataka Rain) ಮೇ ಅಂತ್ಯದಿಂದ…